ನಂಜನಗೂಡು: ನಂಜನಗೂಡು ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಶಾಸಕ ಹರ್ಷವರ್ಧನ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಕಮಲ ಹಿಡಿದು ಜೈ ಎಂದಿದ್ದಾರೆ. ಉಪ್ಪಾರ ಸಮುದಾಯದ 10 ಕ್ಕೂ ಹೆಚ್ಚು ಮುಖಂಡರು ಸೇರ್ಪಡೆಯಾಗಿ ಶಾಸಕ ಹರ್ಷವರ್ಧನ್ ರವರಿಗೆ ಬೆಂಬಲ ಸೂಚಿಸಿದ್ದಾರೆ. ಶಾಸಕ ಹರ್ಷವರ್ಧನ್ ಪಕ್ಷಕ್ಕೆ ಬರಮಾಡಿಕೊಂಡರು.
ಬಳಿಕ ಮಾತನಾಡಿದ ಶಾಸಕರು, ನಂಜನಗೂಡು ಕ್ಷೇತ್ರದಲ್ಲಿ ಶಾಸಕರಾಗಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಹಿಂದುಳಿದ ಉಪ್ಪಾರ ಸಮುದಾಯಕ್ಕೆ ನೀಡುತ್ತಿರುವ ಆದ್ಯತೆಯನ್ನು ಮೆಚ್ಚಿಕೊಂಡು ಉಪ್ಪಾರ ಸಮುದಾಯದವರು ಸೇರ್ಪಡೆಯಾಗಿದ್ದಾರೆ.
ಮತ್ತೆ ನಂಜನಗೂಡು ಕ್ಷೇತ್ರದಲ್ಲಿ ಬಿಜೆಪಿ ಬಾವುಟವನ್ನು ಹಾರಿಸುತ್ತೇನೆ. ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮದ ಪ್ರಸನ್ನ, ಶಬರಿ, ಸಿದ್ದಪ್ಪ, ಮಣಿ, ಚಂದ್ರು, ಅಭಿ, ಮಹೇಂದ್ರ, ಯೋಗೇಶ್, ಪ್ರಸಾದ್ ಮುಂತಾದ ಯುವಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಿಕ್ಕರಂಗನಾಯಕ, ಮುಖಂಡರಾದ ದೊಡ್ಡರಂಗಶೆಟ್ಟರು, ಶಿರಮಳ್ಳಿ ಮಹದೇವಸ್ವಾಮಿ, ಗ್ರಾ.ಪಂ. ಉಪಾಧ್ಯಕ್ಷ ಮಂಜುನಾಥ್, ಗ್ರಾಪಂ ಸದಸ್ಯ ಮನು, ಮುಖಂಡರಾದ ವೆಂಕಟೇಶ್, ಜವರಶೆಟ್ಟಿ, ಶಿವಣ್ಣ, ಹೆಚ್.ಕೆ. ಪ್ರಕಾಶ್, ಹೆಚ್.ಬಿ. ಚೆನ್ನಪ್ಪ ಭಾಗವಹಿಸಿದ್ದರು.