ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ಆಯೋಗ ಹಾಗೂ ವಿವಿಧ ಸಂಘ ಸಂಸ್ಥೆಗಳು ರಾಜ್ಯದಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ವಿವಿಧ ರೀತಿಗಳಲ್ಲಿ ಮತದಾನ ಜಾಗೃತಿ ಮೂಡಿಸುತ್ತಿದ್ದು, ಮತದಾನಕ್ಕೆ ಉತ್ತೇಜನ ನೀಡಲು ಚಾಮುಂಡಿಪುರಂನಲ್ಲಿರುವ ಸ್ಥಳೀಯ ಪ್ರತಿಷ್ಠಿತ ಕೆಫೆ ಗುಡ್ ವೈಬ್ಸ್ ರವರು ಶೇ.50ರಷ್ಟು ರಿಯಾಯಿತಿ ನೀಡಿದ್ದಾರೆ.
ಮತದಾನದ ಉತ್ತೇಜನಕ್ಕಾಗಿ ಮೇ.10 ಬುಧವಾರದಂದು ಮತದಾನ ಮಾಡಿದ ಗುರುತು ತೋರಿಸಿದ 18 ರಿಂದ 30 ವರ್ಷದ ಯುವ ತರುಣ ಮತದಾರರಿಗೆ ಸುವರ್ಣವಕಾಶ ತಮ್ಮ ಕೆಫೆಯಲ್ಲಿ ಯಾವುದೇ ತಿನಿಸುಗಳು ಸೇವಿಸುವ ಪ್ರತಿ ಗ್ರಾಹಕನಿಗೆ ಬೆಳಗ್ಗೆ 7ರಿಂದ ಮಧ್ಯಾನ 2 ಗಂಟೆಯವರೆಗೂ ಒಟ್ಟು ಬಿಲ್ಸ್ ನಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಹೋಟೆಲ್ ಮಾಲಿಕರಾದ ಸುರೇಶ್ ತಿಳಿಸಿದ್ದಾರೆ.
ಮತದಾನ ನಮ್ಮ ಹಕ್ಕು, ತಪ್ಪದೇ ಮತ ಚಲಾಯಿಸಿ, ಸಮೃದ್ಧ ಭಾರತ ನಿರ್ಮಿಸೋಣ, ಘೋಷಿಸಿರುವ ಬ್ಯಾನರ್ ವನ್ನು ಕೆಫೆ ಮುಂಭಾಗ ಪ್ರವೇಶಿಸುವ ಮೂಲಕ ಗ್ರಾಹಕರಲ್ಲಿ ಗಮನಹರಿಸಲಿದ್ದಾರೆ. ಚುನಾವಣೆಯಲ್ಲಿ ಮತ ಚಲಾಯಿಸುವ ಮತದಾರರಿಗೆ ಸ್ಥಳೀಯ ಕೆಫೆ ಗುಡ್ ವೈಫ್ ಈ ರಿಯಾಯಿತಿ ಘೋಷಿಸಿದೆ, ಮತ ಚಲಾಯಿಸಿ ಬಂದವರಿಗೆ ಬಾಯಲ್ಲಿ ನೀರೂರಿಸುವ ವಿವಿಧ ಬಗೆಯ ತಿಂಡಿಗಳನ್ನು ರಿಯಾಯಿತಿಯಲ್ಲಿ ಕೊಡಲು ತಯಾರಿ ನಡೆಸಿದ್ದಾರೆ.
ಈ ಕುರಿತು ಹೋಟೆಲ್ ಮಾಲಿಕರಾದ ಸುರೇಶ್ ರವರು ಮಾತನಾಡಿ ಮತದಾನದ ಉತ್ತೇಜನಕ್ಕಾಗಿ ಚುನಾವಣಾ ಆಯೋಗದೊಂದಿಗೆ ಕೈಜೋಡಿಸಲು ಸಜ್ಜಾಗಿದ್ದೇವೆ. ಮತದಾರರು ಒಂದು ಮತ ಚಲಾಯಿಸಿರುವ ಗುರ್ತು ಕೈ ಬೆರಳಿನ ಮೇಲಿನ ಶಾಯಿ ತೋರಿಸದರೆ ಅವರಿಗೆ ತಿಂಡಿ ಪದಾರ್ಥಗಳಲ್ಲಿ ಶೇ10ರಷ್ಟು ರಿಯಾಯಿತಿ ನೀಡಲಾಗುವದು ಎಂದು ಅವರು ಹೇಳಿದ್ದಾರೆ.