ಮೈಸೂರು: ಚಾಮುಂಡೇಶ್ವರಿಕ್ಷೇತ್ರದ ಹಳೆಕಾಮನಕೊಪ್ಪಲು ಗ್ರಾಮದಲಿ ಕಂಚಿನ ಮಾರಮ್ಮನ ಜಾತ್ರೆಯನ್ನು ಗ್ರಾಮಸ್ಥರು ಅದ್ದೂರಿಯಾಗಿ ಆಚರಿಸಿದರು.
ಬುಧವಾರ ರಾತ್ರಿ 7ವರ್ಷಗಳ ನಂತರ ನಡೆದ ಸಮಾರಂಭದಲ್ಲಿ ಮುಖಂಡ ಕರೀಗೌಡ ಮಾತನಾಡಿ, ಗ್ರಾಮಸ್ಥರು ಊರ ಹೊರಗೆ ಹೊಸದಾಗಿ ಒಲೆಗಳನ್ನು ನಿರ್ಮಿಸಿ ಮಡೆಹೂದಿ ನಂತರ ಲಿಂಗದೇವರಕೊಪ್ಪಲಿನ ವೀರಮಕ್ಕಳ ಕುಣಿತ ಹಾಗೂ ಮಂಗಳ ವಾದ್ಯಗಳೊಂದಿಗೆ ಊರಿನ ಬೀದಿಗಳಲ್ಲಿ ಮಹಿಳೆಯರು ತಂಬಿಟ್ಟಿನ ಆರತಿ ತಂದು ಎಡೆಹಾಕಿ ಪೂಜೆ ಮಾಡಿದ ನಂತರಎಲ್ಲರೂ ಪ್ರಸಾದವನ್ನು ಸವಿಯುತ್ತಾರೆ ಎಂದರು.
ಈ ಹಬ್ಬಕ್ಕೆ ನೆಂಟರು ಗ್ರಾಮದ ಹೆಣ್ಣುಮಕ್ಕಳು ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದ್ದರು.ಇದೇ ಸಂದರ್ಭದಲ್ಲಿ ವೀರಮಕ್ಕಳ ಕುಣಿತದೊಂದಿಗೆ ರಂಗನೃತ್ಯ ಮಾಡಲಾಯಿತು. ಹಬ್ಬದ ಅಂಗವಾಗಿ ಊರ ತುಂಬೆಲ್ಲಾ ದೀಪಾಲಂಕಾರ ಮಾಡಲಾಗಿತ್ತು.
ಸಮಾರಂಭದಲ್ಲಿ ಶಾಸಕ ಜಿ.ಟಿ. ದೇವೇಗೌಡ, ಜಿ.ಪಂ. ಮಾಜಿ ಸದಸ್ಯ ಅರುಣ್ಕುಮಾರ್, ಮುಖಂಡರಾದ ಕರೀಗೌಡ, ಕರಕನಹಳ್ಳಿ ಮಂಜು, ರಾಜೇಶ್, ಶಿವೇಗೌಡ, ಮಟನ್ ಬಸವೇಗೌಡ, ಮಾದೇಗೌಡ, ದಳಪತಿ ಮಹಾದೇವು, ಸೆಂಟ್ರಿಂಗ್ ಮಂಜು, ರವಿಕುಮಾರ್, ರಮೇಶ್, ನಾಗರಾಜ್, ಶಿವಕುಮಾರ್ ಹಾಜರಿದ್ದರು.
ಮೇ.15 ರಿಂದ ಆರಂಭವಾಗಿದ್ದ ಎಸ್ಎಸ್ಎಲ್ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು ರಾಜ್ಯ…
ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್ನಲ್ಲಿ ಮನೆಗೆ ಹೋಗುವಾಗ ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…
ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…
ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…
ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…