ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿಎಸ್. ಶ್ರೀವತ್ಸ ರವರ ಪರವಾಗಿ ಮೈಸೂರು ಬ್ರಾಹ್ಮಣ ಸಂಘದ ವತಿಯಿಂದ ಡಿಟಿ. ಪ್ರಕಾಶ್ ರವರ ನೇತೃತ್ವದಲ್ಲಿ ಚಾಮುಂಡಿಪುರಂ ಬಡಾವಣೆಯ ಸುತ್ತಮುತ್ತಲಿನ ಮನೆಗಳಿಗೆ ತೆರಳಿ ಮತಯಾಚನೆ ಮಾಡಲಾಯಿತು.
ಈ ವೇಳೆ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಮಾತನಾಡಿ ಮೇ10ರಂದು ನಡೆಯಲಿರುವ ಚುನಾವಣೆಯಲ್ಲಿ ಮನೆಮಂದಿಯೆಲ್ಲಾ ಕಡ್ಡಾಯವಾಗಿ ಮತದಾನ ಮಾಡಲು ಮುಂದಾಗಬೇಕು, ಮತದಾನ ಪ್ರತಿಯೊಬ್ಬ ನಾಗರೀಕರ ಹಕ್ಕು, ಬಿಜೆಪಿ ಅಭ್ಯರ್ಥಿ ಟಿಎಸ್. ಶ್ರೀವತ್ಸ ರವರು ಬೂತ್ ಮಟ್ಟದಿಂದ ನಗರ ಮಟ್ಟದವರೆಗೂ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡು ಸಂಘಟನಾತ್ಮಕವಾಗಿ ಉತ್ತಮ ಕೆಲಸ ಮಾಡಿದ್ದಾರೆ. ಈ ಬಾರಿ ಬ್ರಾಹ್ಮಣ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲು ಮುಂದಾಗುತ್ತಿರುವ ವಾತಾವರಣ ಕಾಣುತ್ತಿದ್ದು, ಟಿಎಸ್. ಶ್ರೀವತ್ಸ ರವರು ದಾಖಲೆ ಪ್ರಮಾಣದ ಮತಗಳ ಮುನ್ನಡೆ ಪಡೆಯಲಿದ್ದಾರೆ ಎಂದರು.
ನಗರಪಾಲಿಕೆ ಸದಸ್ಯ ಮಾ.ವಿ. ರಾಂಪ್ರಸಾದ್, ನಗರ ಪಾಲಿಕೆ ಮಾಜಿ ಸದಸ್ಯರಾದ ಸೌಭಾಗ್ಯಮೂರ್ತಿ, ಡಾ. ಲಕ್ಷ್ಮಿದೇವಿ, ಪುರುಷೋತ್ತಮ್, ಅಜಯ್ ಶಾಸ್ತ್ರಿ, ವಿಕ್ರಂ ಅಯ್ಯಂಗಾರ್, ಹರ್ಷ, ಅಪೂರ್ವ ಸುರೇಶ್, ಮಂಜುನಾಥ್, ಮುಳ್ಳೂರು ಸುರೇಶ್, ಅಮರ್, ಜೀವನ್, ಇನ್ನಿತರರು ಇದ್ದರು..