ಮೈಸೂರು: ಕನ್ನ ಹಾಕುತ್ತಿದ್ದ ಖದೀಮನ ಬಂಧನ: ನಗರದ ವಿವಿಧೆಡೆ ಅಂಗಡಿಗಳ ರೋಲಿಂಗ್ ಶೆಟರ್ಸ್ ಮೀಟಿ ಕನ್ನ ಹಾಕುತ್ತಿದ್ದ ಖದೀಮನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ 1.32 ಲಕ್ಷರ ರೂ.ನಗದು, ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ.
ನಗರದಲ್ಲಿ ಇತ್ತೀಚೆಗೆ ರೋಲಿಂಗ್ ಶೆಟರ್ಸ್ ಗಳನ್ನು ಮೀಟಿ ಅಂಗಡಿಗಳ ಸರಣಿ ಕಳವು ಹೆಚ್ಚಾಗಿದ್ದ ಹಿನ್ನೆಲೆ ಖದೀಮರನ್ನು ಪತ್ತೆ ಮಾಡುವ ಸಲುವಾಗಿ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಯಿರುವ ವಿಶೇಷ ತಂಡ ಫೆ.4ರಂದು ನಗರದ ಎನ್.ಆರ್.ಮೊಹಲ್ಲಾದ ಫೌಂಟೇನ್ ವೃತ್ತದ ಬಳಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಿಸಿದಾಗ ಆರೋಪಿ ನಗರದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಹಾಲಿನ ಬೂತ್, ಮೆಡಿಕಲ್ ಶಾಪ್ ಮತ್ತು ದೇವಸ್ಥಾನಗಳಲ್ಲಿ ಕಳ್ಳತನ ಮಾಡಿರುವ ಬಗ್ಗೆ ತಿಳಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
1.32 ಲಕ್ಷ ರೂ. ನಗದು, 10 ಲೀಟರ್ ನಂದಿನಿ ತುಪ್ಪ, 3 ಬಾಕ್ಸ್ ನಂದಿನಿ ಗುಡ್ಲೈಫ್ ಹಾಲು, 1 ಜೊತೆ ಬೆಳ್ಳಿ ಕಾಲು ಚೈನು ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಈ ಪತ್ತೆ ಕಾರ್ಯದಿಂದ ಮೈಸೂರು ನಗರ ಸರಸ್ವತಿಪುರಂ ಠಾಣೆ ವ್ಯಕ್ತಿಯಲ್ಲಿ 4, ವಿಜಯನಗರ ಠಾಣೆ ವ್ಯಾಪ್ತಿಯಲ್ಲಿ 2, ನಜರ್ಬಾದ್ನಲ್ಲಿ 1, ಆಲನಹಳ್ಳಿಯಲ್ಲಿ 1, ಕೆ.ಆರ್.ಠಾಣೆಯಲ್ಲಿ 1 ಹಾಗೂ ಬೆಂಗಳೂರಿನ ಜಗಜೀವನ ನಗರ ಠಾಣೆ ವ್ಯಾಪ್ತಿಯಲ್ಲಿ 1 ಪ್ರಕರಣ ಸೇರಿದಂತೆ ಒಟ್ಟು 10 ಕನ್ನ ಹಾಕಿರುವ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.
ಬಂಧಿತ ಆರೋಪಿ ಹಳೆಯ ವೃತ್ತಿಪರ ಕಳ್ಳನಾಗಿದ್ದು, ಈತನ ವಿರುದ್ಧ ಮೈಸೂರು ನಗರ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ 4, ಮೇಟಗಳ್ಳಿಯಲ್ಲಿ 1, ದೇವರಾಜದಲ್ಲಿ 2, ಲಷ್ಕರ್ನಲ್ಲಿ 1, ವಿ.ವಿ.ಪುರಂನಲ್ಲಿ 4, ಮೈಸೂರು ಜಿಲ್ಲೆಯ ಬನ್ನೂರು ಠಾಣೆಯಲ್ಲಿ 6, ದಕ್ಷಿಣ ಪೊಲೀಸ್ ಠಾಣೆಯಲ್ಲಿ 1, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ 4, ಪಾಂಡವಪುರದಲ್ಲಿ 2, ಬೆಂಗಳೂರಿನ ಹೈಗ್ರೌಂಡ್ನಲ್ಲಿ 4, ವಿಲ್ಸನ್ ಗಾರ್ಡನ್ನಲ್ಲಿ 4, ಹಾಸನ ಜಿಲ್ಲೆಯ ಪೆನ್ಷನ್ ಮೊಹಲ್ಲಾದಲ್ಲಿ 4, ಗೊರೂರುನಲ್ಲಿ 5 ಹಾಗೂ ಹಾಸನ ಟೌನ್ ಪೊಲೀಸ್ ಠಾಣೆಯ 3 ಪ್ರಕರಣ ಸೇರಿ ಒಟ್ಟು 45 ಕಳುವು ಪ್ರಕರಣಗಳು ದಾಖಲಾಗಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.