News Karnataka Kannada
Monday, April 29 2024
ಮೈಸೂರು

ಮೈಸೂರು: ರಂಗಾಸಕ್ತರ ಸೆಳೆದ ಬಹುರೂಪಿಯ ಕಾರ್ಯಕ್ರಮ

A multi-faceted programme that attracted theatre enthusiasts
Photo Credit : By Author

ಮೈಸೂರು: ರಂಗಾಯಣದಲ್ಲಿ ನಡೆಯುತ್ತಿರುವ ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ರಂಗಾಸಕ್ತರು ಲಗ್ಗೆಯಿಟ್ಟಿದ್ದು, ನಾಟಕ ಪ್ರದರ್ಶನ ಸೇರಿದಂತೆ ಜಾನಪದ ನೃತ್ಯ, ಗಾಯನ ಕಾರ್ಯಕ್ರಮಗಳನ್ನು ನೋಡಿ ಖುಷಿಪಡುತ್ತಿದ್ದಾರೆ.

ಬಿ.ವಿ. ಕಾರಂತ್ ರಂಗ ಚಾವಡಿಯಲ್ಲಿ ಸೋಮವಾರ ಸಂಜೆ ಕಿರಗಸೂರು ರಾಜಪ್ಪ ಮತ್ತು ತಂಡದಿಂದ ನಡೆದ ರಂಗಗೀತೆಗಳ ಗಾಯನ ಕಾರ್ಯಕ್ರಮ ಕೇಳುಗರನ್ನು ಮೋಡಿ ಮಾಡಿತು.

ಬಳಿಕ ಕಿರಗಸೂರು ರಾಜಪ್ಪ ಪ್ರಸ್ತುತಪಡಿಸಿದ ದಶವತಾರ ನಾಟಕದ ಜಾನಕಿ ಪ್ರಾಣಸಖಿ..ಸೀತಾ..ಹಾ..ಜಾನಕಿ…ಅಗಲಿದೆಯಾ ಕಮಲ ಮುಖಿ..ಹಾಡಿಗೆ ರಂಗಾಸಕ್ತರು ಮಂತ್ರ ಮುಗ್ದರಾದರು. ಚಿಕ್ಕಮಗಳೂರು ರಂಗನಾಥ ಮತ್ತು ತಂಡದಿಂದ ನಡೆದ ಸೋಮನ ಕುಣಿತ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡಿತು. ಕಲಾವಿದರಿಬ್ಬರು ಸೋಮನ ಮುಖವಾಡ ಧರಿಸಿ 20 ನಿಮಿಷಗಳ ಕಾಲ ಡೋಲು, ತಮಟೆ ಹಾಗೂ ವಾದ್ಯದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ತಮ್ಮ ನೆಲದ ಸಂಸ್ಕೃತಿಯನ್ನು ಅನಾವರಣಗೊಳಿಸಿದರು.

ಉಡುಪಿಯ ಶ್ರೀರಾಂ ಜನಪದ ಕಲಾತಂಡ ಪುನೀತ್ ಅವರ ನೇತೃತ್ವದಲ್ಲಿ ನಡೆಸಿಕೊಟ್ಟ ಕರಗ ಕೋಲಾಟ ಅದ್ಭುತವಾಗಿ ಮೂಡಿಬಂದಿತು. ತಮಟೆ ಮತ್ತು ನಾದಸ್ವರದ ನಾದಕ್ಕೆ ತಲೆ ಮೇಲೆ ಅಲಂಕೃತಗೊಂಡ ಕರಗ ಹೊತ್ತು ಕೈಯಲ್ಲಿ ಬಣ್ಣ ಬಳಿದ ಕೋಲುಗಳನ್ನು ಹಿಡಿದು ಕಲಾವಿದರು ಪ್ರದರ್ಶಿಸಿದ ನೃತ್ಯ ಬಹರೂಪಿಗೆ ಮೆರಗು ತಂದಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು