ಮೈಸೂರು: ಕರ್ನಾಟಕ ರಾಜ್ಯ ಏಡ್ಸ್ ಪ್ರಿವನ್ ಷ ನ್ ಸೊಸೈಟಿ, ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೈಸೂರು, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ,ಮೈಸೂರು, ಐ ಸಿ ಟಿ ಸಿ ವಿಭಾಗ, ಪಿ ಕೆ ಟಿ ಬಿ ಮತ್ತು ಸಿ ಡಿ ಆಸ್ಪತ್ರೆ , ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಕುಂಬಾರ ಕೊಪ್ಪಲುವಿನಲ್ಲಿ ಸಮುದಾಯ ಆಧಾರಿತ ತಪಾಸಣಾ ಶಿಬಿರ ನಡೆಸಲಾಯಿತು.
ಶಿಬಿರವನ್ನು ಮಾಜಿ ವಿಧಾನ ಪರಿಷತ್. ಸದಸ್ಯರು ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಾದೇಗೌಡರವರು ಉದ್ಘಾಟಿಸಿ ಮಾತನಾಡಿ ಶಿಬಿರದ ಸದುಪಯೋಗಪಡೆದುಕೊಳ್ಳುವಂತೆ ಸ್ಥಳೀಯ ನಿವಾಸಿಗಳಿಗೆ ತಿಳಿಸಿದರು. ಶಿಬಿರದಲ್ಲಿ ಒಟ್ಟು 145 ಜನ ಭಾಗವಹಿಸಿದ್ದು ಜಿಲ್ಲಾ ಆಸ್ಪತ್ರೆಯ ಎನ್.ಸಿ.ಡಿ ವಿಭಾಗದಿಂದ ಬಿಪಿ, ಶುಗರ್-145 ಜನರು, ತಂಬಾಕು ಚಿಕಿತ್ಸೆಗೆ 12 ಜನ, ಹೆಚ್.ಐ.ವಿ.ಪರೀಕ್ಷೆಗೆ 132 ಜನ, ಕ್ಷಯರೋಗ ಪತ್ತೆಗೆ 5 ಕಫವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಯಿತು.
ಅನ್ನಪೂರ್ಣ ಕಣ್ಣಿನ ಆಸ್ಪತ್ರೆಯಿಂದ 70 ಜನರ ತಪಾಸಣೆ, ಋತು ವಾಕ್ ಭಾಷಾ ಕೇಂದ್ರ ಮತ್ತು ಶ್ರವಣ ಕೇಂದ್ರದಿಂದ 25 ಜನರಿಗೆ ಇ.ಎನ್.ಟಿ ಪರೀಕ್ಷೆ ಮಾಡಲಾಗಿದ್ದು, ಆಯುಷ್ಮನ್ ಭಾರತ್ ಮತ್ತು ಈ ಶಮ್ ಕಾರ್ಡ್-75 ಕಾರ್ಡ್ ನ್ನು ಧರ್ಮಸ್ಥಳ ಸ್ವಸಹಾಯ ಸಂಘದಿಂದ ಮಾಡಲಾಗಿದೆ, ಚರ್ಮ ಮತ್ತು ಲೈಂಗಿಕ ವಿಭಾಗದಿಂದ 47 ಜನರಿಗೆ ಆಪ್ತ ಸಮಾಲೋಚನೆ ಮಾಡಲಾಗಿದೆ. ಉಪಶಮನ ಆರೈಕೆ ಕೇಂದ್ರದಿಂದ ದೀರ್ಘಾವಧಿ ಕಾಯಿಲೆಯಿಂದ ಬಳಲುತ್ತಿರುವರನ್ನು 5 ಜನರ ಮನೆ ಭೇಟಿಗೆ ಬರುವುದಾಗಿ ತಿಳಿಸಿರುತ್ತಾರೆ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕೇಂದ್ರದಿಂದ 22 ಜನರಿಗೆ ಸದುಪಯೋಗವಾಗಿದೆ.ಶಿಬಿರದಲ್ಲಿ ತಪಾಸಣೆ ನಂತರ ಅವಶ್ಯಕತೆ ಇರುವ ಜನರಿಗೆ ಮಾತ್ರೆ , ಸಿರಫ್ ನೀಡಲಾಯಿತು.
ಶಿಬಿರದಲ್ಲಿ ಡಾ. ಮಹಮದ್ ಸಿರಾಜ್ ಅಹಮದ್ ರವರು ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ತಿಳಿಸಿ ಎಲ್ಲರೂ ಇದರ ಉಪಯೋಗವನ್ನು ಪಡೆದು ಕೊಳ್ಳಬೇಕು ಎಂದರು.
ಡಾ. ಪ್ರಶಾಂತ್ , ಉಷಾ ಕುಮಾರ್, ಡಾ.ರಮ್ಯ, ನರಸಿಂಹ, ಸಂಜೀವಿನಿ ಕುಮಾರ್ , ಪ್ರಮೋದ್, ಸವಿತಾ, ಹಾಗೂ ಆಪ್ತ ಸಮಾಲೋಚಕರಾದ ನಾಗೇಂದ್ರ ಪ್ರಸಾದ್, ರಜನಿಶಂಕರ್, ಗೀತಾ, ಗೋಪಾಲ್, ಅಸೀಮ್, ಸುಬ್ರಹ್ಮಣ್ಯ, ಹಾಗೂ ಪುಟ್ಟರಾಜು ಆಸ್ಪತ್ರೆಯ ಸಿಬ್ಬಂದಿ ಶಿಬಿರದಲ್ಲಿ ಪಾಲ್ಗೊಂಡಿದ್ದರು.