ಮೈಸೂರು: ಜಗತ್ತಿನಲ್ಲಿ ಸತ್ಯದ ದರ್ಶನ ನೇರಾನೇರ ಇರುವುದಿಲ್ಲ. ಸತ್ಯದ ಅನ್ವೇಷಣೆಗೆ ಎಲ್ಲ ಆಯಾಮಗಳ ಶೋಧನೆ ಅನಿವಾರ್ಯ ಎಂದು ಹಿರಿಯ ಗಾಯಕಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಎಚ್.ಆರ್.ಲೀಲಾವತಿ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸಾಹಿತ್ಯ ಬೆಂಗಳೂರಿನ ಲೋಕ ಪಬ್ಲಿಕೇಷನ್ಸ್ ಸಹಯೋಗದಲ್ಲಿ ರೋಟರಿ ಪಶ್ಚಿಮ ಸಭಾಂಗಣದಲ್ಲಿ ನಡೆದ ಲೇಖಕಿ ವಸಂತ ಕಲ್ಬಾಗಲ್ ಅವರ ವ್ಯಕ್ತಿಚಿತ್ರಗಳ ಸಮ್ದರ್ಶನ, ಲಲಿತ ಪ್ರಬಂಧಗಳ ಅಡ್ಡಿತುಷ ಬಕ್ಕಜ ಬನ್ನಿ ಕೃತಿಗಳ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇವತ್ತು ಉದ್ಯಮಿ ವಿಜಯ್ ಮಲ್ಯ ಅವರ ಬಗ್ಗೆ ನಮ್ಮ ದೃಷ್ಟಿಕೋನ ಏನಿದೆ ವಸಂತ ವಿಜಯ್ ಮಲ್ಯರ ನೇರಾನೇರ ಸಂದರ್ಶನ ಮಾಡಿ ಅವರ ಸಂಪರ್ಕದಲ್ಲಿದ್ದು ಕಟ್ಟಿಕೊಟ್ಟ ಚಿತ್ರಣವೂ ಮಲ್ಯರ ವ್ಯಕ್ತಿತ್ವದ ಭಿನ್ನತೆಯ ದೃಷ್ಟಿಕೋನ. ವಿಜಯಮಲ್ಯರ ಸಂದರ್ಶನ ಓದಿ ಮಲ್ಯರ ಬಗೆಗಿನ ನನ್ನ ದೃಷ್ಟಿಕೋನ ಬದಲಾಯಿಸಿಕೊಂಡೆ. ಒಬ್ಬ ವ್ಯಕ್ತಿಯನ್ನು ಬಹು ಆಯಾಮಗಳಿಂದ ನೋಡಬೇಕಾಗುತ್ತದೆ ಅನಿಸಿತು ಎಂದು ಅಭಿಪ್ರಾಯಪಟ್ಟರು.
ಪುತೀನ ಅವರ ವ್ಯಕ್ತಿತ್ವದ ಚಿತ್ತಾರ, ನ್ಯೂಜಿಲೆಂಡ್ ಪ್ರಧಾನಿ ಭೇಟಿ, ಕಮಲ್ ಹಾಸನ್ ಅವರೊಂದಿಗಿನ ಸಂದರ್ಶನ, ರತನ್ ಟಾಟಾ ಅವರ ಬಗ್ಗೆ ಲೇಖನ ಬರೆದ ವಸಂತ ಅವರ ಧೈರ್ಯ, ಜಾಣತನ, ಬುದ್ಧಿವಂತಿಕೆ ಮೆಚ್ಚಬೇಕು ಎಂದರು.
ಲೇಖಕಿ ವಸಂತ ಕಲ್ಬಾಗಲ್ ವಿಶ್ವದ ಭಿನ್ನ ಭಿನ್ನ ಕ್ಷೇತ್ರಗಳ ಸುಪರಿಚಿತರಾದ ಸಾಧಕರನ್ನು ಭೇಟಿ ಮಾಡಿ ಸಂದರ್ಶನ ಮಾಡಿದ್ದಾರೆ. ಯಾವುದೋ ಒಂದು ಕ್ಷೇತ್ರಕ್ಕೆ ಕಟ್ಟುಬಿದ್ದಿಲ್ಲ. ವಸಂತರ ಮನದ ಚಿತ್ರಗಳು ಹೃದಯ ಮುಟ್ಟುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂದರ್ಶಕರ ವ್ಯಕ್ತಿತ್ವದ ಪ್ರತಿಬಿಂಬ. ನಿಚ್ಚಳವಾಗಿ ವ್ಯಕ್ತಿತ್ವಗಳ ಚಿತ್ರಣವನ್ನು ಕಣ್ಣ ಮುಂದೆ ನಿಲ್ಲಿಸಿದ್ದಾರೆ. ವಸಂತ ಮಾಸ ಸೌಂದರ್ಯದ ಪ್ರತೀಕ. ವಸಂತ ಹೃದಯದಲ್ಲಿ ಸೌಂದರ್ಯ ತುಂಬಿಕೊಂಡಿದ್ದಾರೆ. ಸಾಧಿಸುವ ಛಲವುಳ್ಳ ಗಟ್ಟಿಗಿತ್ತಿಯೂ ಆಗಿದ್ದಾರೆ ಎಂದು ಹಾರೈಸಿದರು.
ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ.ಮೈಸೂರು ಕೃಷ್ಣಮೂರ್ತಿ ಕೃತಿಗಳ ಕುರಿತು ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಪ್ರಕಾಶಕ ರಘುವೀರ್ ಸಮರ್ಥ್ ಮುಂತಾದವರು ಇದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ನಡೆದಿದೆ.
ನೀರಿನಲ್ಲಿ ಮುಳುಗಿ ಯುವತಿಯೊಬ್ಬಳು ಮೃತಪಟ್ಟ ಘಟನೆ ಮೈಸೂರಿನ ತಿ.ನರಸೀಪುರ ತಾಲೂಕಿನ ತಲಕಾಡು ಗ್ರಾಮದ ಕಾವೇರಿ ನದಿಯಲ್ಲಿ ನಡೆದಿದೆ.
ಆಧ್ಯಾತ್ಮಿಕ ವಿಚಾರದಿಂದ ದೂರ ಹೋಗುತ್ತಿರುವ ಯುವಜನರನ್ನು ಧಾರ್ಮಿಕ ವಿಚಾರಗಳತ್ತ ಸೆಳೆಯುವ ನಿಟ್ಟಿನಲ್ಲಿ ಕಲ್ಯಾಣಪುರ ವಲಯದ ಕ್ರೈಸ್ತ ಯುವಸಮುದಾಯಕ್ಕೆ ತೊಟ್ಟಂ ಸಂತ…
ಜಾಗದ ತಕರಾರಿಗೆ ಸಂಬಂಧಿಸಿ ದಂಪತಿ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ…
ತೀಯಾ ಸಮುದಾಯದ ಹದಿನೆಂಟು ಭಗವತೀ ಕ್ಷೇತ್ರಗಳಲ್ಲಿ ಒಂದಾದ ಬೊಳ್ನಾಡು ಶ್ರೀ ಚಿರುಂಭ ಭಗವತೀ ಕ್ಷೇತ್ರ ಎರುಂಬು - ಅಳಿಕೆ ಬಂಟ್ವಾಳ…
ಸಂಜೆ ಸುರಿದ ಜೋರಾದ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ಪಲ್ಟಿಯಾದ…