ಮೈಸೂರು: ಸಮಾಜದಲ್ಲಿ ಜ್ಯೋತಿಷ್ಯದ ಬಗ್ಗೆ ತಪ್ಪು ಕಲ್ಪನೆಯಿದ್ದು, ಅದನ್ನು ಹೋಗಲಾಡಿಸಿ. ಜ್ಯೋತಿಷ್ಯಶಾಸ್ತ್ರದ ಮಹತ್ವವನ್ನು ಇಂದಿನ ಸಮಾಜಕ್ಕೆ ಸರಿಯಾದ ರೀತಿಯಲ್ಲಿ ಅರ್ಥಮಾಡಿಸುವ ಕಾರ್ಯವಾಗಬೇಕಿದೆ ಎಂದು ಇಳೈಆಳ್ವಾರ್ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವ ವಿಕಾಸ ಟ್ರಸ್ಟ್ ವತಿಯಿಂದ ಶ್ರೀರಾಂಪುರದಲ್ಲಿರುವ ಕಚೇರಿಯಲ್ಲಿ ಸಂಖ್ಯಾಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ,ವಾಸ್ತು ವಿಜ್ಞಾನ , ಪೂರ್ವ ಪೀಠಿಕೆ ಕುರಿತು ಸಂಖ್ಯಾಶಾಸ್ತ್ರಜ್ಞರು, ಜ್ಯೋತಿಷ್ಯಗಳು ಹಾಗೂ ವಾಸ್ತು ತಜ್ಞರಾದ ರಾಮ್ ಶ್ರೀಕಾಂತ್ ತೇಜ್ ರವರು ನಡೆಸಿಕೊಟ್ಟ ಒಂದು ದಿನದ ಉಚಿತ ಕಾರ್ಯಗಾರ ವನ್ನು ಉದ್ಘಾಟಿಸಿ ಮಾತನಾಡಿ, ಜ್ಯೋತಿಷ್ಯ ಶಾಸ್ತ್ರವೆಂದರೆ ಮೂಗು ಮುರಿಯುತ್ತಾರೆ. ಅಂಥವರು ಜ್ಯೋತಿಷ್ಯದ ಬಗ್ಗೆ ಸರಿಯಾಗಿ ಮನನ ಮಾಡಿದರೆ ಅರಿವು ಮೂಡಲಿದೆ ಎಂದರು.
ಸಂಖ್ಯಾಶಾಸ್ತ್ರಜ್ಞರು, ಜ್ಯೋತಿಷ್ಯಗಳು ಹಾಗೂ ವಾಸ್ತು ತಜ್ಞರಾದ ರಾಮ್ ಶ್ರೀಕಾಂತ್ ತೇಜ್ ರವರು ಜ್ಯೋತಿಷ್ಯ ಅಧ್ಯಯನ ಶಾಸ್ತ್ರವನ್ನು ಉದ್ಯಮವನ್ನಾಗಿ ಬಳಸಿಕೊಳ್ಳುವ ಬದಲು ಸಮಾಜದ ಅಭಿವೃದ್ಧಿಗೆ ಬಳಸಿ, ನಮ್ಮ ದೇಶದ ಪ್ರಾಚೀನ ವಿದ್ಯೆಗಳಿಗೆ ಗೌರವಿಸುವ ಪರಿಪಾಠ ರೂಢಿಸಿಕೊಳ್ಳಬೇಕು. ಪ್ರಪಂಚದಲ್ಲಿಯೇ ಶ್ರೇಷ್ಠ ವಿದ್ಯೆಗಳಾದ ಆಗಮ, ವೇದ, ಜ್ಯೋತಿಷ್ಯ ಮತ್ತು ಯೋಗವನ್ನು ಕಲಿಯಲು ಉತ್ತಮವಾದ ಮನೋಸ್ಥಿತಿ ಬೇಕು. ಇವೆಲ್ಲವೂ ವೈಜ್ಞಾನಿಕ ನೆಲೆಗಟ್ಟಯ ಹೊಂದಿರುವ ಶಾಸ್ತ್ರಗಳು.
ಪ್ರಪಂಚದಲ್ಲಿರುವ ಶಾಸ್ತ್ರಗಳಲ್ಲಿ ಅತಿ ಪುರಾತನವಾದದ್ದು ‘ಜ್ಯೋತಿಷ್ಯಶಾಸ್ತ್ರ’, ‘ಜ್ಯೋತಿ’ ಎಂದರೆ ಬೆಳಕು, ‘ಶಾಸ್ತ್ರ’ ಎಂದರೆ ವಿಜ್ಞಾನ. ಇದನ್ನು ಇಂಗ್ಲೀಷ್ನಲ್ಲಿ astrology ಎಂದು ಕರೆಯುತ್ತಾರೆ. ಈ ಜ್ಯೋತಿಷ್ಯ ಶಾಸ್ತ್ರವು ಮೊದಲಿಗೆ ನಮ್ಮ ಭಾರತದಲ್ಲಿಯೇ ಹುಟ್ಟಿದ್ದು, ವೇದದ ಷಡಾಂಗಗಳಾದ ಶಿಕ್ಷೆ, ಕಲ್ಪ, ವ್ಯಾಕರಣ, ಜ್ಯೋತಿಷ್ಯ, ನಿರಕ್ತಿ ಹಾಗೂ ಛಂದಸ್ಸು, ಜ್ಯೋತಿಷ್ಯವೂ ಸಹ ವೇದಗಳ ಅಂಗವಾಗಿದೆ. ಜ್ಯೋತಿಷ್ಯ ಶಾಸ್ತ್ರವು ಭಾರತೀಯರ ಜೀವನದಲ್ಲಿ ಬಹಳ ಮುಖ್ಯ ಸ್ಥಾನ ಪಡೆದಿದೆ. ಮಾನವ ಹುಟ್ಟಿನಿಂದ ಸಾಯುವವರೆಗೂ ಜೀವನದಲ್ಲಿ ಆಗುಹೋಗುವ ಶುಭ ಹಾಗೂ ಅಶುಭ ಫಲಗಳನ್ನು ನಿರ್ಣಯಿಸಲು ಈ ಶಾಸ್ತ್ರ ಪ್ರಮುಖವಾಗಿದೆ ಎಂದು ಹೇಳಿದರು.
ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರು ಹಾಗೂ ವಿಶ್ವವಿಕಾಸ ಟ್ರಸ್ಟ್ ನ ಅಧ್ಯಕ್ಷರಾದ ಮಂಟೇ ಲಿಂಗಾಚಾರ್, ಅಖಿಲ ಭಾರತ ವಿಶ್ವಕರ್ಮ ಪರಿಷತ್ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಪ್ರಕೃತಿ ಸುರೇಶ್, ಹಾಸನ ಜಿಲ್ಲೆಯ ಕಮರ್ಷಿಯಲ್ ಟ್ಯಾಕ್ಸ್ ಡೆಪ್ಯೂಟಿ ಕಮಿಷನರ್ ಡಿ ಎಂ ಮಂಜುನಾಥ್ ಸೋಸಲೆ, ವಿಶೇಷ ಭೂಸ್ವಾಧೀನಾಧಿಕಾರಿ ವಿ. ಪ್ರಿಯದರ್ಶಿನಿ, ಕಾಂಗ್ರೆಸ್ ಯುವ ಮುಖಂಡರಾದ ಎನ್ ಎಂ ನವೀನ್ ಕುಮಾರ್, ಶ್ರೀ ಶನೇಶ್ವರ ದೇವಸ್ಥಾನ ಧರ್ಮ ದರ್ಶಿಗಳಾದ ಚೆಲುವಮೂರ್ತಿ, ಮಾಲತೇಶ್ ಆಚಾರ್ಯ, ಸಾಮಾಜಿಕ ಹೋರಾಟಗಾರ ವಿಕ್ರಮ ಅಯ್ಯಂಗಾರ್, ಆರ್ ಮಣಿಕಂಠರಜ್ ಗೌಡ, ಡಿ ಎಂ ಮಧುಸೂದನ್, ಹನಿ ಸುರೇಶ್, ಬಿ ಸಿ ಉಮಾಶಂಕರ್, ಎಚ್ಎಸ್ ನಂಜುಂಡಸ್ವಾಮಿ, ದೇವೇಂದ್ರಚಾರ್, ರೇಖಾ ಜಗದೀಶ್ ಹಾಗೂ ಇನ್ನಿತರರು ಹಾಜರಿದ್ದರು.