ಮೈಸೂರು : ದೈವ ನರ್ತಕವನ್ನು ಅನುಕರಿಸಿ ಭಕ್ತರಿಂದ ಹಣ ವಸೂಲಿ ಮಾಡಿದ ಆರೋಪದ ಮೇಲೆ ಮಹಿಳೆಯೊಬ್ಬರ ವಿರುದ್ಧ ಮಳವಳ್ಳಿ ಪಟ್ಟಣ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಮಳವಳ್ಳಿ ಪಟ್ಟಣದ ನಿವಾಸಿ ಎಸ್ ಪುನೀತ್ ಕುಮಾರ್ ಎಂಬವರು ನೀಡಿದ ದೂರಿನ ಪ್ರಕಾರ, ಕನಕಪುರ ರಸ್ತೆಯಲ್ಲಿ ಮೂರು ವರ್ಷಗಳಿಂದ ಶಿವಲಿಂಗಮ್ಮ ಎಂಬುವರು ಮನೆಯಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಕಾಂತಾರ ಚಲನಚಿತ್ರದ ಬಿಡುಗಡೆಯ ನಂತರ ಮಹಿಳೆಯು ಚಲನಚಿತ್ರದಲ್ಲಿರುವಂತೆ ಓ ಎಂದು ಕೂಗಿ ಆ ಮೂಲಕ ಚಲನಚಿತ್ರ ನಾಯಕನನ್ನು ಅನುಕರಿಸಲು ಪ್ರಾರಂಭಿಸಿದಳು. ಮಹಿಳೆ ತನ್ನೊಳಗಿನ ದೇವರನ್ನು ಆವಾಹನೆ ಮಾಡಿಕೊಳ್ಳುತ್ತ ಭಕ್ತರಿಂದ ಚಿನ್ನ ಮತ್ತು ನಗದು ಸಂಗ್ರಹಿಸುತ್ತಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಹಿಳೆ ಕಾಂತಾರ ಸಿನಿಮಾದಂತೆ ಅನುಕರಣೆ ಮಾಡಿ ಭಕ್ತರಿಂದ ಹಣ, ಚಿನ್ನ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಒಬ್ಬರಿಂದ ದೂರು ಸ್ವೀಕರಿಸಿದ್ದೇವೆ. ಮಹಿಳೆಯನ್ನು ಠಾಣೆಗೆ ಕರೆಸಿ ವಿಚಾರಿಸಿದೆವು. ಭಕ್ತಾದಿಗಳ ಒಳಿತಿಗಾಗಿ ಮೂರು ವರ್ಷಗಳಿಂದ ತನ್ನ ಮನೆಯಲ್ಲಿ ಪ್ರತಿ ಸೋಮವಾರ ಮತ್ತು ಶುಕ್ರವಾರ ಪೂಜೆ ಮಾಡುತ್ತಿದ್ದೇನೆ ಎಂದು ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಬಿ ರಾಜೇಶ್ ತಿಳಿಸಿದರು. ಹಣ ಅಥವಾ ಚಿನ್ನ ಕಳೆದುಕೊಂಡವರು ದೂರು ನೀಡಿದರೆ ನಾವು ಎಫ್ಐಆರ್ ದಾಖಲಿಸುತ್ತೇವೆ. ನಾವು ದೂರಿನ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಮತ್ತು ಅವರ ಚಟುವಟಿಕೆಗಳ ಮೇಲೆ ನಿಗಾ ಇಡುತ್ತೇವೆ ಎಂದು ಅವರು ತಿಳಿಸಿದರು.
“ಕಾಂತಾರ ಚಿತ್ರ ಬಿಡುಗಡೆಯಾದ ನಂತರ ಭಕ್ತ ಸಮೂಹವು ಹೆಚ್ಚಾಗಲು ಆರಂಬಿಸಿದೆ, ಮಹಿಳೆಯು ದೈವಿಕ ಬೋಧನೆಯ ಮೂಲಕ ನಾಯಕನನ್ನು ಅನುಕರಿಸುತ್ತಿದ್ದಳು. ದೇವರು ತನ್ನನ್ನು ಆಹ್ವಾನಿಸುತ್ತಾನೆ ಎಂದು ಮಹಿಳೆ ಹಿಂದಿನ ದಿನ ಸಮಯವನ್ನು ಘೋಷಿಸುತ್ತಾಳೆ ” ಎಂದು ಎಸ್ ಪುನೀತ್ ಕುಮಾರ್ ತಿಳಿಸಿದರು.
ಭಕ್ತರು ಚಿನ್ನದ ಮಂಗಲ ಸೂತ್ರ, ನಗದನ್ನು ದೇವರಿಗೆ ದಾನ ಮಾಡುವಂತೆ ಒತ್ತಾಯಿಸಿ ಮಹಿಳೆ ದೇವರನ್ನು ಆವಾಹಿಸಿಕೊಂಡರು, ದೇವರು ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಡುತ್ತಾರೆ ಎಂದು ಅವರು ಹೇಳಿದರು. ಮಹಿಳೆಯ ಸಹೋದರ ಭಕ್ತರಿಂದ ಕಾಣಿಕೆಗಳನ್ನು ಸಂಗ್ರಹಿಸುತ್ತಾನೆ. ಮಹಿಳೆಯ ಕೃತ್ಯದ ಚಿತ್ರೀಕರಣದ ವೇಳೆ ಆಕೆಯ ಸಂಬಂಧಿಕರು ವಸಂತ ಎಂಬಾಕೆಯನ್ನು ಹಿಡಿದು ಮೊಬೈಲ್ ಕಸಿದು ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ. ದೇವರ ಆಶೀರ್ವಾದ ಕೋರಿ ಆಕೆಯನ್ನು ಭೇಟಿ ಮಾಡುವ ಭಕ್ತರು, ಅನೇಕರು ನಗದು ಕಾಣಿಕೆಯನ್ನು ನೀಡಿದರು ಎಂದು ಅವರು ಹೇಳಿದರು. ಆದರೆ ಭಕ್ತರು ದೇವರಿಗೆ ಹೆದರಿ ದೂರು ನೀಡಲು ಮುಂದೆ ಬರುತ್ತಿಲ್ಲ ಎಂದು ಪುನೀತ್ ಕುಮಾರ್ ಹೇಳಿದ್ದಾರೆ