Categories: ಮೈಸೂರು

ಕರ್ನಾಟಕದಲ್ಲಿ ಮಾನವ ಬಂಡವಾಳ ವರದಿ ಬಿಡುಗಡೆ

ಮೈಸೂರು: ಕರ್ನಾಟಕದಲ್ಲಿ ಮಾನವ ಬಂಡವಾಳ ಹೊಸಯುಗದ ಉದ್ಯೋಗಿಗಳಿಗೆ ನವಯುಗದ ಕೌಶಲ್ಯಗಳ ಅಗತ್ಯತೆ – ಒಂದು ದೃಷ್ಟಿ ಕೋನ ವರದಿಯನ್ನು ಬೆಂಗಳೂರಿನಲ್ಲಿ ನಡೆದ ಬಿಸಿ ಐಸಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು

ಮೈಸೂರಿನ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಡೆವಲಪ್ ಮೆಂಟ್  ಸಂಸ್ಥೆಯು ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಅಂಡ್ಕಾಮರ್ಸ್ (ಬಿಸಿ ಐ ಸಿ) ಗಾಗಿ ಸಿದ್ಧಪಡಿಸಿತು. ಮೈಸೂರಿನ ಎಸ್ಡಿಎಮ್ ಐ ಎಮ್ಡಿ ಸಂಸ್ಥೆಯ ಬಿಸಿ ಐ ಸಿ ಸೆಂಟರ್ ಫಾರ್ ಎಕ್ಸಲೆನ್ಸ್ ಉದ್ಯಮ ಮತ್ತು ಶಿಕ್ಷಣ ಕ್ಷೇತ್ರಗಳ ನಡುವಿನ ಸಹಯೋಗದ ವೇಗವನ್ನು ಹೆಚ್ಚಿಸುವ ಮೂಲಕ ಸಮಾಜವನ್ನು ಉನ್ನತಿಗೊಳಿಸುವ ಗುರಿಯನ್ನು ಹೊಂದಿದ್ದು, ಈ ವರದಿಯು ಅದಕ್ಕೆ ಪೂರಕವಾಗಿದೆ.

ಅನೇಕ ಶ್ರೇಷ್ಠ ಉದ್ಯಮಿಗಳು ಹಾಗೂ ಶಿಕ್ಷಣ ತಜ್ಞರೊಂದಿಗೆ ನಡೆಸಿದ ಸಂದರ್ಶನಗಳು ಮತ್ತು ಆಳವಾದ ಸಂಶೋಧನೆ ಆಧಾರದಲ್ಲಿ ಈ ವರದಿಯನ್ನು ತಯಾರಿಸಲಾಗಿದೆ. ಈ ವರದಿಯು ಏಳು ವಿವಿಧ ಉದ್ಯಮ ಕ್ಷೇತ್ರಗಳಾದ ಭಾರಿ ಉದ್ಯಮ, ಆಟೋ ಮೊಬೈಲ್ ತಯಾರಿಕೆ, ಆತಿಥ್ಯ, ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ, ಮಾಹಿತಿ ತಂತ್ರಜ್ಞಾನ ಹಾಗೂ ಸಂಬಂಧಿತ ಸೇವೆಗಳು, ಔಷಧೀಯ ಮತ್ತು ಸಲಹಾ – ಇವುಗಳಲ್ಲಿ ಪ್ರಸಕ್ತ ಇರುವ ಕೌಶಲ್ಯ ಅಂತರವನ್ನು ಮೌಲ್ಯ ಮಾಪನಮಾಡಿದೆ. ಈ ಅಧ್ಯಯನವು ಭವಿಷ್ಯದ ನವಕೌಶಲ್ಯಗಳ ಅವಶ್ಯಕತೆಯ ಬಗ್ಗೆ ಅಂದಾಜು ಮಾಡಿದೆ. ಹಾಗೆಯೇ ಕರ್ನಾಟಕದ ಉದ್ಯಮಗಳಲ್ಲಿ ಇರುವ ಕೌಶಲ್ಯತೆಗಳ ಅವಶ್ಯಕತೆಯನ್ನು ಪೂರೈಸಲು ಶೈಕ್ಷಣಿಕ ಸಂಸ್ಥೆಗಳು ತೆಗೆದುಕೊಳ್ಳ ಬೇಕಾದ ಕ್ರಮಗಳ ಬಗ್ಗೆ ಕೂಡ ವರದಿಯಲ್ಲಿ ಸೂಚಿಸಲಾಗಿದೆ. ಯುವಪೀಳಿಗೆ ನವಕೌಶಲ್ಯತೆಗಳನ್ನು ಕಲಿಸುವ ಮೂಲಕ ಅವರನ್ನು ಉದ್ಯೋಗಕ್ಕೆ ಯೋಗ್ಯರನ್ನಾಗಿ ಹಾಗೂ ಸಂಪನ್ಮೂಲರನ್ನಾಗಿ ಮಾಡಲು, ಸರ್ಕಾರ, ಉದ್ಯಮ ಮತ್ತು ಶಿಕ್ಷಣ – ಈ ಮೂರು ಕ್ಷೇತ್ರಗಳು, ವೈಯಕ್ತಿಕ ಹಾಗೂ ಜಂಟಿಯಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಚೌಕಟ್ಟುಗಳನ್ನು ಈ ವರದಿಯು ಶಿಫಾರಸು ಮಾಡಿದೆ.

ಉದ್ಯಮ ಕ್ಷೇತ್ರದ ನೇತಾರರ ಉಪಸ್ಥಿತಿಯಲ್ಲಿ ವರದಿಯನ್ನುಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಹಾಗೂ ಸಚಿವರು, ವರದಿಯನ್ನು ಪ್ರಶಂಸಿಸಿದರು.

ಡಾ. ಬಿ. ವೆಂಕಟರಾಜ್ , ಅಸೋಸಿಯೇಟ್ ಪ್ರೋಫೆಸರ್ – ಅರ್ಥಶಾಸ್ತ್ರ, ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಮ್ಯಾನೇಜ್ ಮೆಂಟ್ ಡೆವಲಪ್ ಮೆಂಟ್ನ ಸಂಶೋಧಕರಾಗಿದ್ದಾರೆ.

Gayathri SG

Recent Posts

ಶ್ರೀಲಂಕಾದ ನಾಲ್ವರು ಐಸಿಸ್ ಭಯೋತ್ಪಾದಕರನ್ನು ಬಂಧಿಸಿದ ಎಟಿಎಸ್

ಶ್ರೀಲಂಕಾದ ನಾಲ್ವರು ಐಸಿಸ್ ಭಯೋತ್ಪಾದಕರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ  ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ…

4 mins ago

ಮೇಲ್ಛಾವಣಿಗೆ ಬಿದ್ದು ಬದುಕುಳಿದ ಮಗು; ಆದರೆ ಟೀಕೆಯಿಂದ ಬೇಸತ್ತು ತಾಯಿ ಆತ್ಮಹತ್ಯೆ

ಕಳೆದ ಏಪ್ರಿಲ್​ ತಿಂಗಳಿನಲ್ಲಿ ಚೆನ್ನೆೈನ ಅಪಾರ್ಟ್ ಮೆಂಟ್​ವೊಂದರ ಮೇಲ್ಛಾವಣಿಯಲ್ಲಿ ಮಗು ಸಿಲುಕಿಕೊಂಡಿತ್ತು. ಆ ಮಗುವನ್ನು ಸ್ಥಳೀಯರ ನೆರವಿನಿಂದ ರಕ್ಷಿಸಲಾಗಿತ್ತು. ಮಗುವಿನ…

8 mins ago

ನಮ್ಮದು ಹೈಕಮಾಂಡ್ ಪಕ್ಷ, ಹೈಕಮಾಂಡ್ ಹೇಳಿದಂಗೆ ಮಾಡ್ತೀವಿ: ಸಿಎಂ

ನಮ್ಮದು ಹೈಕಮಾಂಡ್ ಪಕ್ಷ, ಹೈಕಮಾಂಡ್ ಹೇಳಿದಂಗೆ ಮಾಡ್ತೀವಿ,  ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

19 mins ago

ಪಡೀಲಿನಲ್ಲಿ ಕಾರು ಚಲಾಯಿಸುತ್ತಿದ್ದ ಮಹಿಳೆಯ ನಿರ್ಲಕ್ಷ್ಯಕ್ಕೆ ಅಮಾಯಕ ವ್ಯಕ್ತಿ ಬಲಿ !

ಕಾರು ಚಲಾಯಿಸುತ್ತಿದ್ದ ಮಹಿಳೆಯ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದಾಗಿ ರಸ್ತೆ ಬದಿ ಬೈಕ್ ನಿಲ್ಲಿಸಿ ಮೊಬೈಲಿನಲ್ಲಿ ಮಾತನಾಡುತ್ತಿದ್ದ ಅಮಾಯಕ ವ್ಯಕ್ತಿಯೊಬ್ಬರು ಪ್ರಾಣ…

24 mins ago

ಮಾಜಿ ಸಚಿವ ಹೆಚ್​.ಡಿ ರೇವಣ್ಣಗೆ ಬಿಗ್ ರಿಲೀಫ್

ಮಾಜಿ ಸಚಿವ ಹೆಚ್​.ಡಿ ರೇವಣ್ಣ ಅವರಿಗೆ 42ನೇ ಎಸಿಎಂಎಂ ಕೋರ್ಟ್​ ಜಾಮೀನು ಮಂಜೂರು ಮಾಡಿದೆ. ಮಧ್ಯಂತರ ಜಾಮೀನು ಪಡೆದು ಹೊರಗಿದ್ದ…

45 mins ago

ಎಟಿಎಂ ನಲ್ಲಿ ಹಣ ತೆಗೆದುಕೊಡಿ ಎಂದ ರೈತನಿಗೆ ವಂಚಿಸಿದ ಅಪರಿಚಿತ

ಜಿಲ್ಲೆಯ ಹನೂರು ಪಟ್ಟಣದ ಎಟಿಎಂ ನಲ್ಲಿ ಹಣ ತೆಗೆದುಕೊಡಿ ಎಂದು ಕೇಳಿದ ರೈತನಿಗೆ ಕೀಡಿಗೇಡಿಯೋರ್ವ ವಂಚಿಸಿ ಹಣ ಲಪಾಟಿಸಿರುವ ಘಟನೆ…

47 mins ago