ಮೈಸೂರು: ತುಮಕೂರು ಜಿಲ್ಲೆ ತಿಪಟೂರಿನ ದಸರಿಘಟ್ಟ ಚೌಡೇಶ್ವರಿ ಅಮ್ಮನವರ ವಿಶೇಷ ಪೂಜೆ ಮತ್ತು ಉತ್ಸವ ಮೈಸೂರಿನ ನಾರಾಯಣ ಶಾಸ್ತ್ರಿ ರೇಸ್ , ಸೋನಾರ್ ಸ್ಟ್ರೀಟ್ ನಲ್ಲಿರುವ ಪರಮಪೂಜ್ಯ ಶ್ರೀ ಅರ್ಜುನ ಅವಧೂತ ಗುರುಗಳ ನಿವಾಸದಲ್ಲಿ ಅತ್ಯಂತ ವೈಭವದಿಂದ ನಡೆಯಿತು.
ಪರಮಪೂಜ್ಯ ಶ್ರೀ ಅರ್ಜುನ ಅವಧೂತ ಗುರು ಮಹಾರಾಜರ ದಿವ್ಯ ಸಾನಿದ್ಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ದೇವಿಯನ್ನು ಬಣ್ಣ ಬಣ್ಣದ ಹೂಗಳು, ಬಳೆಗಳು, ನಿಂಬೆಹಣ್ಣಿನಿಂದ, ತಳಿರು ತೋರಣಗಳನ್ನು ಕಟ್ಟಿ ತಾಯಿಗೆ ಸೀರೆಯಿಂದ ಅಲಂಕರಿಸಲಾಗಿತ್ತಲ್ಲದೆ, ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಮೈಸೂರಿನ ಸ್ವರ್ಣ ನೃಸಿಂಹದತ್ತ ಸಾಯಿ ಪೀಠಿಕಾ ಸೇವಾ ಟ್ರಸ್ಟ್ ವತಿಯಿಂದ ಪೂರ್ಣಕುಂಭ ಸ್ವಾಗತದೊಂದಿಗೆ ರಾತ್ರಿ ದೇವಿಯನ್ನು ಬರಮಾಡಿಕೊಳ್ಳಲಾಯಿತಲ್ಲದೆ, ಮುಂಜಾನೆಯವರೆಗೂ ಪೂಜಾ ಕೈಂಕರ್ಯ ನೆರವೇರಿತು. ಸೋಮವಾರ ಬೆಳಿಗ್ಗೆ 9 ಗಂಟೆಯಿಂದ ಸಪ್ತಶತಿ ಪಾರಾಯಣ, ಅಭಿಷೇಕ, ತ್ರಿಶತಿ, ಅರ್ಚನೆ, ದುರ್ಗಾಸ್ತುತಿ, ಮಹಾಮಂಗಳಾರತಿಯೊಂದಿಗೆ ಭಕ್ತರಿಗೆ ದರ್ಶನ ಭಾಗ್ಯ ದೊರೆಯಿತು.
ಶ್ರೀ ಸ್ಫಟಿಕಪುರಿ ಮಹಾಸಂಸ್ಥಾನದ ಶ್ರೀ ನಂಜಾವಧೂತ ಶ್ರೀಗಳು , ಆದಿ ಚುಂಚನಗಿರಿ ಮೈಸೂರು ಶಾಖ ಮಠದ ಸರ್ ಸೋಮೇಶ್ವರ ನಾಥ ಸ್ವಾಮಿಜಿ ಸೇರಿದಂತೆ ವಿವಿಧ ಮಠಗಳ ಶ್ರೀಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಂಗಳ ವಾಧ್ಯಗಳೊಂದಿಗೆ ದೇವಿಗೆ ಪೂಜೆ ನೆರವೇರಿಸಿದರು.
ಮೈಸೂರು, ಬೆಂಗಳೂರು, ಕೊಡಗು, ಚಾಮರಾಜನಗರ, ಹಾಸನ, ಬೆಳಗಾವಿ, ಧಾರವಾಡ, ಗುಲ್ಭರ್ಗ, ಶಿವಮೊಗ್ಗ, ತುಮಕೂರು, ಗೌರಿ ಬಿದನೂರು, ರಾಮನಗರ, ಚನ್ನಪಟ್ಟಣ ಸೇರಿದಂತೆ ರಾಜ್ಯದಾದ್ಯಂತ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡು ಅಮ್ಮನಿಗೆ ಮಡಿಲು ತುಂಬಿ ಆಶೀರ್ವಾದ ಪಡೆದು ಪುನೀತರಾದರು ಮತ್ತು ಪರಮಪೂಜ್ಯ ಗುರುಗಳು ಭಕ್ತರನ್ನು ಖುದ್ದು ಭೇಟಿ ಮಾಡಿ ಆಶೀರ್ವದಿಸಿದರು. ಇದೇ ವೇಳೆ ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಯಿತು.
ಮೈಸೂರು ಸೇರಿದಂತೆ ರಾಜ್ಯದ ಜನತೆ ಒಳಿತಾಗಲಿ ಎಂದು ದೇವಿಯು ಆಶೀರ್ವದಿಸಿ ಮೈಸೂರಿನಿಂದ ದೇವಿ ಸ್ವಸ್ಥಾನ ದಸರಿಘಟ್ಟ ದೇವಾಲಯಕ್ಕೆ ಪ್ರಯಾಣ ಬೆಳೆಸಿತು. ಚಿತ್ರರಂಗದ ಗಣ್ಯರು ,ರಾಜಕೀಯ ಮುಖಂಡರು ಸೇರಿದಂತೆ ಸಮಾಜದ ಗಣ್ಯಾತಿ ಗಣ್ಯರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರಾಜ್ಯದಲ್ಲಿ ಜನ ಕಾಂಗ್ರೆಸ್ನ ಗ್ಯಾರಂಟಿ ಯೋಜನೆಯಿಂದ ಬದುಕುತ್ತಿದ್ದಾರೆ. ನಮ್ಮ ಗ್ಯಾರಂಟಿ ಜನರನ್ನು ರಕ್ಷಿಸುತ್ತಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಪರಂವಃ ಸ್ಟುಡಿಯೋಸ್ ನಿರ್ಮಾಣದ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ `777 ಚಾರ್ಲಿ’ ಚಿತ್ರ ಇದೀಗ ಜಪಾನೀಸ್ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.…
ರೈತರಿಗಾಗಿ ಹಣ ಕೇಳಿದ್ದು, ಗ್ಯಾರಂಟಿಗಾಗಿ ಹಣ ಕೇಳಿಲ್ಲ ಮತ್ತು ಕೇಳುವುದು ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ…
ಅಪ್ಪನ ದೌರ್ಜನ್ಯಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ತಾಯಿಯನ್ನು ಏಳು ವರ್ಷದ ಬಾಲಕಿಯೊಬ್ಬಳು ಕಾಪಾಡಿದ ಘಟನೆ ಗುಜರಾತ್ನ ಅಹಮದಾಬಾದ್ನಲ್ಲಿ ನಡೆದಿದೆ.
ಇರಾಕ್ನ ಟಿಕ್ ಟಾಕ್ ಸ್ಟಾರ್ ಓಂ ಫಹಾದ್ ರನ್ನು ಬಾಗ್ದಾದ್ನ ಜೊಯೌನಾ ಜಿಲ್ಲೆಯಲ್ಲಿ ತಡ ರಾತ್ರಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ.
ಇನ್ನೋವಾ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿ ಹೊಂಡಕ್ಕೆ ಬಿದ್ದ ಪರಿಣಾಮ ಯುವತಿಯೋರ್ವಳು ಸ್ಥಳದಲ್ಲಿಯೇ ಮೃತಪಟ್ಟು, ನಾಲ್ವರು ಗಂಭೀರವಾಗಿ…