ಮೈಸೂರು: ಸಾಲಿಗ್ರಾಮ ತಾಲ್ಲೂಕಿನ ಸರಗೂರು ಗ್ರಾಮದಲ್ಲಿ ಬಸವ ಜಯಂತಿ ಕಾರ್ಯಕ್ರಮದ ಪ್ರಚಾರಾಂದೋಲನಕ್ಕೆ ಸರಗೂರು ಮಠದ ಶ್ರೀ ಶ್ರೀ ಮೃತ್ಯುಂಜಯ ಸ್ವಾಮೀಜಿಯವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ವಿಭಾಗೀಯ ಕಾರ್ಯದರ್ಶಿ ಗಳು ಹಾಗೂ ಬಸವ ಜಯಂತಿ ಕಾರ್ಯಕ್ರಮದ ಪ್ರಚಾರ ಸಮಿತಿ ಅಧ್ಯಕ್ಷರಾದ ಸರಗೂರು ನಟರಾಜ್. ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ತಾಲ್ಲೂಕು ಅಧ್ಯಕ್ಷರಾದ ಗಾಯನಹಳ್ಳಿ ಕುಮಾರಸ್ವಾಮಿ. ಮುಖಂಡರಾದ ಪುಟ್ಟರಾಮು. ಕೊಳೂರು ಸತೀಶ್. ಕಾಮೇನಹಳ್ಳಿ ಯತೀಶ್. ರಾಕೇಶ್. ಹೊನ್ನೇನಹಳ್ಳಿ ಗಿರೀಶ್. ಪಶುಪತಿಯ ಕಾರ್ತಿಕ್. ರವಿ. ತಂದ್ರೆಯ ಶಿವಕುಮಾರ್. ಶಿವು. ಗಿರೀಶ್. ದಡದಹಳ್ಳಿ ನಟರಾಜ್. ಮಾರಗೌಡನಹಳ್ಳಿಯ ನೇತ್ರಾವತಿ. ಮಂಜು. ಮಹೇಂದ್ರ ಹಾಗೂ ಸರಗೂರು ಗ್ರಾಮಸ್ಥರು ಹಾಜರಿದ್ದು ಶುಭ ಹಾರೈಸಿದರು.
ಜೂ. 20ರಂದು ಕೆ.ಆರ್.ನಗರ ಪಟ್ಟಣದಲ್ಲಿ ಬಸವ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಸಂಬಂಧ ಪ್ರಚಾರಾಂದೋಲನ ನಡೆಸುವ ಮೂಲಕ ಬಸವ ಜಯಂತಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಲಾಗುತ್ತಿದೆ.