ಮೈಸೂರು: ನೆಹರೂ ಅವರು ದೇಶಕ್ಕಾಗಿ ಆಸ್ತಿಯನ್ನೇ ಕೊಟ್ಟಿದ್ದಾರೆ. ಸಿ.ಟಿ.ರವಿ ನೀವೇನು 10 ಪೈಸೆ ಕೊಟ್ಟಿದ್ದೀರಾ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಎಚ್.ವಿಶ್ವನಾಥ್ ಹರಿಹಾಯ್ದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ನೀವೇನು ಕೊಟ್ಟಿದ್ದೀರಿ ಎಂದು ಹೇಳಿ. ಈ ರೀತಿ ಅಪ್ರಯೋಜಕ ಟೀಕೆಗಳನ್ನು ಮಾಡಲು ನಾಚಿಕೆ ಆಗಲ್ವ ನಿಮಗೆ ಎಂದು ಸಿ.ಟಿ.ರವಿ ವಿರುದ್ಧ ಕಿಡಿಕಾರಿದರು.
ನೆಹರೂ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಮೊದಲು ಅವರ ಬಗ್ಗೆ ಸಿ.ಟಿ.ರವಿ ಓದಿಕೊಳ್ಳಲಿ. ನೆಹರೂ ಅವರು ಅಧಿಕಾರದ ಅವಧಿಗಿಂತ ಹೆಚ್ಚಿನ ಕಾಲ ಜೈಲಿನಲ್ಲಿದ್ದರು. ಅವರ ಇಡೀ ಕುಟುಂಬವೇ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿತ್ತು. ದೇಶಕ್ಕೆ ಶಾಂತಿ ಸಂದೇಶ ಸಾರಿದವರು ನೆಹರೂ ಇವರ ಬಗ್ಗೆ ಲಘುವಾಗಿ ರವಿ ಮಾತಾಡಿರುವುದು ಸರಿಯಲ್ಲ. ಇದು ಬಿಜೆಪಿ ಪಕ್ಷಕ್ಕೂ ಶೋಭೆ ತರುವುದಿಲ್ಲ ಎಂದು ಹೇಳಿದರು.
ನೆಹರೂ ಅವರು ಕಾಲವಾದಾಗ ವಾಜಪೇಯಿ ಮರುಗಿದ್ದರು. ನೆಹರೂ ಆಡಳಿತವನ್ನು ಹೊಗಳಿದ್ದರಲ್ಲದೇ, ರಾಜಕುಮಾರನೊಬ್ಬನನ್ನು ಭಾರತ ಕಳೆದುಕೊಂಡಿದೆ ಎಂದಿದ್ದರು. ಈ ಮಾತುಗಳು ಸಿ.ಟಿ.ರವಿ ಅವರಿಗೆ ಅರ್ಥವಾಗಬೇಕು ಎಂದು ಕುಟುಕಿದರು.ಹುಕ್ಕಾ, ಬಾರ್ ಏನಿದು. ಅಯ್ಯೊಯ್ಯೊ ದೇವಾ ಭಾರತದ ಅಸ್ಮಿತೆ ಗೌರವವನ್ನು ಕಳೆಯಬೇಡಿ. ನೆಹರೂ ಭಾರತದ ಅಸ್ಮಿತೆ. ಇನ್ನಾರನ್ನೋ ರಮಿಸಲು, ಒಬ್ಬರನ್ನು ತೆಗಳುವುದು ಖಂಡನೀಯ. ನಿಮ್ಮ ಹೇಳಿಕೆ ವಾಪಸ್ ಪಡೆದು ಸಮಜಾಯಿಷಿ ಕೊಡಿ ಎಂದು ಒತ್ತಾಯಿಸಿದರು.
ರವಿ ವಿರುದ್ಧ ಮಾತನಾಡಲು ಹೋಗಿ ಪ್ರಿಯಾಂಕ ಖರ್ಗೆ, ವಾಜಪೇಯಿ ಅವರನ್ನು ‘ಕುಡುಕ’ ಎಂದುಬಿಟ್ಟರು. ಕವಿ ಹೃದಯದ ವಾಜಪೇಯಿ. ಅವರ ಭಾಷಣ ಕೇಳಿ, ಬರಹಗಳನ್ನು ಓದಿ. ಅಂತಹ ವಾಜಪೇಯಿ ಬಗ್ಗೆ ಈ ರೀತಿ ಮಾತಾನಾಡುವುದು ಸರಿಯಲ್ಲ. ನೆಹರೂ ಹಾಗೆ ವಾಜಪೇಯಿ ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವವಿದೆ. ಅವರ ಬಗ್ಗೆ ಕೀಳಾಗಿ ಮಾತನಾಡುವ ನಿಮಗೆ ಬುದ್ದಿ ಇದಿಯಾ? ನಿಮ್ಮ ತಂದೆ ನೋಡಿ ಕಲಿತುಕೊ ಎಂದು ಪ್ರಿಯಾಂಕಾ ಖರ್ಗೆ ಕಿವಿ ಹಿಂಡಿದರು.
ಸಿ ಟಿ ರವಿ ವಿರುದ್ದ ಶಾಸಕ ಹೆಚ್ ವಿಶ್ವನಾಥ್ ಕಿಡಿ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.