News Karnataka Kannada
Monday, April 29 2024
ಮೈಸೂರು

ಸಿಎಎ ವಿರೋಧಿಸುವವರು ಅಫ್ಗಾನಿಸ್ತಾನದ ಸ್ಥಿತಿ ನೋಡಿ ಅರ್ಥಮಾಡಿಕೊಳ್ಳಬೇಕು; ಪ್ರತಾಪ್‍ಸಿಂಹ

Mysuru Pratap Simha 01082021
Photo Credit :

ಮೈಸೂರು: ದೇಶದಲ್ಲಿ ಸಿಎಎ ಕಾಯ್ದೆಯನ್ನು ಏಕೆ ಜಾರಿಗೆ ತರಲಾಗಿದೆ ಎಂಬುದನ್ನು ಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ತಾಲಿಬಾನ್ ಉಗ್ರರ ಅಟ್ಟಹಾಸ ನೋಡಿ ಅರ್ಥಮಾಡಿಕೊಳ್ಳಬೇಕಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಅವರಿಂದು ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿನಡೆಸಿ ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇಂತಹ ಪರಿಸ್ಥಿತಿ ಮೊದಲೇ ಅರಿತು ಸಿಎಎ ಕಾಯ್ದೆ ಜಾರಿಗೊಳಿಸಿದ್ದಾರೆ ಎಂದರು.
ಸದ್ಯ ಅಫ್ಘಾನಿಸ್ತಾನದ ಸುತ್ತಮುತ್ತ ಹಲವಾರು ಮುಸ್ಲಿಂ ರಾಷ್ಟ್ರಗಳಿದ್ದು, ಯಾರೂ ಅಫ್ಘಾನಿಸ್ತಾನದವರನ್ನು ಕರೆಸಿಕೊಳ್ಳುತ್ತಿಲ್ಲ. ಸಿರಿಯಾ ಮತ್ತು ತಾಲಿಬಾನ್ ಮಾನವ ವಿರೋಧಿಗಳೆಂಬುದು ಇದೀಗ ಸಾಬೀತಾಗಿದೆ. ಈ ರೀತಿಯ ಮನಸ್ಥಿತಿ ಕೇವಲ ತಾಲಿಬಾನ್ಗಳಿಗಷ್ಟೇ ಅಲ್ಲ, ಭಾರತದಲ್ಲೂ ಅಂತಹದೇ ಜನರಿದ್ದಾರೆ. ಈ ರೀತಿಯ ಅಪಾಯಗಳನ್ನು ತಪ್ಪಿಸಲು ಸಿಎಎ ಕಾನೂನು ತರಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು