News Karnataka Kannada
Wednesday, May 01 2024
ಮೈಸೂರು

ಮೈಸೂರು: ಮಗಳ ಸಾವಿನಿಂದ ನೊಂದಿದ್ದ ತಂದೆ ಹೃದಯಾಘಾತದಿಂದ ಸಾವು

Mother dead wherever she was, come home early: Son in tears with mother's body for sister
Photo Credit :

ಮೈಸೂರು : ಮಗಳ‌ ಸಾವಿನಿಂದ ನೊಂದಿದ್ದ ತಂದೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಜೆಪಿನಗರದಲ್ಲಿ ನಡೆದಿದೆ.  ಜೆ.ಪಿ.ನಗರದ ನಿವಾಸಿ ಮಹದೇವಶೆಟ್ಟಿ (46) ಹೃದಯಾಘಾತದಿಂದ ಮೃತಪಟ್ಟಿರುವ ವ್ಯಕ್ತಿ. ಇವರ ಮಗಳು ನಂದಿನಿ ಒಂದು ತಿಂಗಳ ಹಿಂದೆ ಟಿ.ಕೆ.‌ಲೇಔಟ್​ನಲ್ಲಿರುವ ಗಂಡನ‌ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು.

ಗಂಡನ ಮನೆಯವರ ವರದಕ್ಷಿಣೆ ಕಿರುಕುಳದಿಂದ ಮಗಳು ಸಾವನ್ನಪ್ಪಿದ್ದಾಳೆ ಎಂದು ಅವರ ತಂದೆ ಮಹದೇವಶೆಟ್ಟಿ ಅವರು ದೂರನ್ನು ನೀಡಿದ್ದರು. ಆದರೆ, ಮಗಳ‌ ಸಾವಿಗೆ ಕಾರಣರಾದವರಿಗೆ ಶಿಕ್ಷೆ ದೊರೆಯಲಿಲ್ಲ ಎಂಬ ನೋವು ಅವರಲ್ಲಿ ಇತ್ತು ಎನ್ನಲಾಗಿದೆ.

ಹೀಗೆ ಮಗಳ ಸಾವಿಗೆ ಕಾರಣರಾದವರಿಗೆ ಶಿಕ್ಷೆ ದೊರೆಯಲಿಲ್ಲ ಎಂಬ ನೋವಿನಿಂದ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಭಾನುವಾರ ಅವರು ಜೆ.ಪಿ.ನಗರದ ಗೊಬ್ಬಳಿಮರದ ಬಳಿ‌ ಇರುವ ಅಂಗಡಿ ಬಳಿ‌ ಕುಳಿತಿರುವ ಸಂದರ್ಭ ಹೃದಯಾಘಾತವಾಗಿದೆ.

ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರು ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆ. ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು