ಮೈಸೂರು: ನಾಡಶಕ್ತಿ ದೇವತೆ ಚಾಮುಂಡೇಶ್ವರಿ ಗೆ ನವರಾತ್ರಿ ಯಲ್ಲಿ ನಿತ್ಯ ವೂ ಒಂದೊಂದು ಅಲಂಕಾರ ಮಾಡಲಾಗುತ್ತದೆ. ನವರಾತ್ರಿ ಆರಂಭವಾದ ಇಂದು ಮುಂಜಾನೆ ಚಾಮುಂಡೇಶ್ವರಿ ಗೆ ವಿವಿಧ ಅಭಿಷೇಕ ಗಳನ್ನು ಮಾಡಿ ವಿಶೇಷ ಪೂಜೆ ಯನ್ನು ನೆರವೇರಿಸಲಾಯಿತು. ದಸರಾ ಪ್ರಾರಂಭದ ಇಂದು ಚಾಮುಂಡೇಶ್ವರಿ ಗೆ ವಿಶೇಷವಾಗಿ ಹಂಸವಾಹಿನಿ ಅಲಂಕಾರವನ್ನು ಮಾಡಲಾಗಿದೆ.
ಈ ಅಲಂಕಾರದಲ್ಲಿ ಚಾಮುಂಡೇಶ್ವರಿ ಕಂಗೊಳಿಸಿದರು. ಅ.8 ರಂದು ಬ್ರಾಹ್ಮಿ, ಅ.9ರಂದು ಮಹೇಶ್ವರಿ, ಅ.10ರಂದು ಕೌಮಾರಿ, ಅ.11 ರಂದು ಆನೆ ಮೇಲೆ ಕುಳಿತ ಇಂದ್ರಾಣಿ, ಅ.12 ರಂದು ಚಾಮುಂಡಾ ಅಲಂಕಾರ ವನ್ನು ಮಾಡಲಾಗುತ್ತದೆ. ಅಂದು ಕಾಳ ರಾತ್ರಿ ಆಗಿರುವ ಕಾರಣ ವಿಶೇಷ ವಾಗಿ ಅಲಂಕಾರ ಮಾಡಲಾಗುತ್ತದೆ. ಅ.13 ರಂದು ದುರ್ಗಾ ಅಲಂಕಾರ, ಅ.14 ದಸರಾದ ಕೊನೆ ದಿನವಾದ ಕಾರಣ ಅಶ್ವರೋಹಣದಲ್ಲಿ ಮಹಾಲಕ್ಷ್ಮಿ ಯ ಅಲಂಕಾರ ವನ್ನು ಚಾಮುಂಡೇಶ್ವರಿ ಗೆ ಮಾಡಲಾಗುತ್ತದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕರಾದ ಶಶಿಶೇಖರ್ ದೀಕ್ಷಿತರು ಹೊಸ ದಿಗಂತಕ್ಕೆ ತಿಳಿಸಿದರು.