ಮೈಸೂರು : ನಗರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಬಿಜೆಪಿ ವತಿಯಿಂದ ಬಿಜೆಪಿ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ಚಾಮುಂಡೇಶ್ವರಿ ಕ್ಷೇತ್ರದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ದೇವ ಪಥ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಿಂದ ಆರ್ ಟಿಒ ವೃತ್ತ ಮಾರ್ಗದಿಂದ ರಾಮಸ್ವಾಮಿ ವೃತ್ತ, ನ್ಯಾಯಾಲಯದ ಮುಂಭಾಗ ಗೀತಾ ರಸ್ತೆಯ ಮೂಲಕ ಆ ನಂತರ ಪಕ್ಷದ ಕಚೇರಿಗೆ ಮೆರವಣಿಗೆಯಲ್ಲಿ ತೆರಳಲಾಯಿತು.
ಈ ವೇಳೆ ಸಂಸ್ಥಾಪಕರಾದ ಅಟಲ್ ಬಿಹಾರಿ ವಾಜಪೇಯಿ, ದೀನ್ ದಯಾಳ್ ಉಪಾಧ್ಯಾಯರು, ಶ್ಯಾಂ ಪ್ರಸಾದ್ ಮುಖರ್ಜಿ, ಖುಷ್ ಬಾವಠಾಕ್ರೆ, ಬಿ ಎಸ್ ಯಡಿಯೂರಪ್ಪ ಅವರ ಭಾವಚಿತ್ರ ಹಿಡಿದು ಬಿಜೆಪಿಗೆ ಜೈಕಾರ ಕೂಗಲಾಯಿತು.
ಶೋಭಾ ಯಾತ್ರೆ ಉದ್ದೇಶಿಸಿ ಮಾತನಾಡಿದ ಬಿಜೆಪಿ ನಗರ ಅಧ್ಯಕ್ಷ ಟಿ ಎಸ್ ಶ್ರೀವತ್ಸ ಅವರು, ಭಾರತೀಯ ಜನತಾ ಪಕ್ಷ ಸ್ಥಾಪನೆಯಾಗಿ ಇಂದಿಗೆ 42 ವರ್ಷ ಪೂರೈಸಿದೆ. ಭಾರತದಲ್ಲಿ ಸ್ವಾತಂತ್ರ್ಯನಂತರ ಅಸ್ತಿತ್ವಕ್ಕೆ ಬಂದಿರುವ ಯಾವ ಪಕ್ಷ ಗಳೂ ಇಷ್ಟು ಕಡಿಮೆ ಅವಧಿಯಲ್ಲಿ ವ್ಯಾಪಕವಾಗಿ ಬೆಳೆದಿಲ್ಲ. ಈ ನಿಟ್ಟಿನಲ್ಲಿ ಬಿಜೆಪಿ ಮಾತ್ರ ಇಂದು ವಿಶ್ವದ ಅತ್ಯಂತ ದೊಡ್ಡ ಸಂಘಟನೆಯಾಗಿದೆ. ಅಟಲ್ಬಿಹಾರಿ ವಾಜಪೇಯಿ ಮತ್ತು ನರೇಂದ್ರ ಮೋದಿಯವರಂತ ಅಗ್ರ ಮಾನ್ಯ ವ್ಯಕ್ತಿಗಳನ್ನು ದೇಶಕ್ಕೆ ಕೊಟ್ಟ ಕೀರ್ತಿ ನಮ್ಮ ಪಕ್ಷ ಕ್ಕೆ ಸಲ್ಲುತ್ತದೆ.
ಇದಕ್ಕೆ ಪಕ್ಷ ದ ಹಿರಿಯರಾದ ಸ್ವರ್ಗಿಯ ಪಂಡಿತ ದೀನದಯಾಳ ಉಪಾಧ್ಯಾಯ ಹಾಗೂ ಡಾ.ಶ್ಯಾಮ ಪ್ರಸಾದ ಮುಖರ್ಜಿ ಅವರೇ ಮೂಲ ಪ್ರೇರಣಾಶಕ್ತಿ ಎಂದರಲ್ಲದೆ, ಪಕ್ಷದ ಹಿರಿಯರು ಹಾಕಿಕೊಟ್ಟ ಆದರ್ಶದ ಹಾದಿಯಲ್ಲಿ ಕಾರ್ಯಕರ್ತರು ಸಾಗಬೇಕೆಂದು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ತುಳಸಿ ಮುನಿರಾಜು ಗೌಡ,ರಾಜ್ಯ ವಕ್ತರಾರದ ಎಂ ಜಿ ಮಹೇಶ್, ಎಸ್ ಡಿ ಮಹೇಂದ್ರ, ಚಾಮುಂಡೇಶ್ವರಿ ಕ್ಷೇತ್ರ ಅಧ್ಯಕ್ಷ ಬಿಎಂ ರಘು, ಜಿಎಂ ಮಹೇಶ್, ನಗರ ಪ್ರಧಾನ ಕಾರ್ಯದರ್ಶಿ ವಾಣಿಶ್, ಗಿರೀದರ್, ಮುಖಂಡರಾದ, ಅರುಣ್ ಗೌಡ, ಗೋಪಾಲ್ ರಾವ್, ಶ್ರೀನಿವಾಸ್, ಜಗದೀಶ್ ಗೌಡ, ವೇದರಾಜ್, ಹೂಟಗಳ್ಳಿ ದೇವರಾಜ್ಪೈ ಟಿ. ರವಿ, ಈರಪ್ಪ, ಎಚ್ ಜಿ ರಾಜಮಣಿ, ವಿಜಯ ಮಂಜುನಾಥ್, ಭಾಗ್ಯಶ್ರೀ ಭಟ್ ಜಾನ್ಸಿ ರಾಣಿ, ಗೀತಾ ಮಹೇಶ್, ರಮ್ಯಾ ಪುನೀತ್, ಮಂಜುಳಾ, ಬೆಳವಾಡಿ ಶ್ರೀನಿವಾಸ್, ಎಸ್ ಮದು, ಶಿವಕುಮಾರ್, ಲೋಹಿತ್ ಗೌಡ ಸಿಗಳ್ಳಿ ರವಿ, ವೀರಭದ್ರ, ಸಂತೋಷ ಪಾಲ್, ಮುಂತಾದವರು ಭಾಗವಹಿಸಿದ್ದರು.