News Karnataka Kannada
Saturday, April 27 2024
ಮೈಸೂರು

ಮೈಸೂರು -ಕಾರವಾರ ರೈಲಿಗೆ ಬೇಡಿಕೆ ;ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಮನವಿ

Shobhakarandlaje Udupi 110072021
Photo Credit :

ಮೈಸೂರು, : ಮೈಸೂರು ರೈಲು ಹೋರಾಟ ಸಮಿತಿಯಿಂದ ಇಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು.
ಬಹಳಷ್ಟು ಜನ ಉತ್ತರ ಕನ್ನಡ ಹಾಗೂ ಕರಾವಳಿ ಮೂಲದ ಜನ ಹಾಗೂ ಉದ್ಯಮಿಗಳು ಮೈಸೂರಿನಲ್ಲಿ ನೆಲೆಸಿದ್ದಾರೆ. ಅಲ್ಲದೇ ಪ್ರವಾಸೋದ್ಯಮದ ದೃಷ್ಟಿಯಿಂದಲೂ, ಮೈಸೂರು ಜಿಲ್ಲೆಯ ಪ್ರಯಾಣಿಕರಿಗೆ ಮೈಸೂರು-ಕಾರವಾರ-ಗೋವಾ ರೈಲು ಬಹಳ ಉಪಯುಕ್ತವಾಗಿದೆ. ಸುಬ್ರಹ್ಮಣ್ಯ, ಧರ್ಮಸ್ಥಳ, ಮಂಗಳೂರು, ಉಡುಪಿ, ಕೊಲ್ಲೂರು, ಗೋಕರ್ಣ ಸೇರಿದಂತೆ ಅನೇಕ ಧಾರ್ಮಿಕ ಕೇಂದ್ರಗಳಿಗೆ ಈ ಮೂಲಕ ಸಂಪರ್ಕವಿದೆ. ಈಗಿರುವ ರೈಲಿನಲ್ಲಿ ಎಲ್ಲಾ ಆಸನಗಳು ಬೆಂಗಳೂರಿನಲ್ಲಿಯೇ ಭರ್ತಿಯಾಗಿರುತ್ತದೆ. ಅದು ಸಹ ವಾರದಲ್ಲಿ 3 ದಿನ ಮಾತ್ರವೇ ಇದೆ. ಹಾಗಾಗಿ ಅನೇಕ ವರ್ಷಗಳಿಂದ ಮೈಸೂರಿನಿಂದ ಕಾರವಾರ/ಗೋವಾಗೆ ನೇರ ರೈಲು ಬೇಕೆಂಬ ಬೇಡಿಕೆ ಇದೆ. ಈಗ ಹೋರಾಟ ಸಮಿತಿಯು ಅಸ್ತಿತ್ವಕ್ಕೆ ಬಂದಿದ್ದು, ಮೊದಲ ಭಾಗವಾಗಿ ಮೈಸೂರು-ಕಾರವಾರ ನಡುವಿನ ಎಲ್ಲಾ ಜನಪ್ರತಿನಿಧಿಗಳನ್ನು ಭೇಟಿಯಾಗಿ ಸದರಿ ಬೇಡಿಕೆಯ ಸಾಧಕಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತಿದೆ
ಎಂದು ಸಮಿತಿ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು