ಮೈಸೂರು : ಮೈಸೂರಿನ ಸ್ವರಾಂಜಲಿ ಎಂಬ ತಂಡದ ವತಿಯಿಂದ ವಯೋವೃದ್ಧರು ಹಾಗೂ ವೃದ್ಧಾಶ್ರಮಗಳಲ್ಲಿರುವ ಹಿರಿಯ ಜೀವಿಗಳಿಗೆ ಮಾನಸಿಕ ಸ್ಥೈರ್ಯ ನೀಡುವ ಸದುದ್ದೇಶದಿಂದ ನಗರದ ಜೆ.ಕೆ.ಮೈದಾನದಲ್ಲಿರುವಎ ಎಂಎಂಸಿ ಅಮೃತ ಮಹೋತ್ಸವ ಸಭಾಂಗಣದಲ್ಲಿ ಅರಳು ಮರಳು – ಮರಳಿ ಅರಳು ಎಂಬ ಕರ್ಯಕ್ರಮ ಆಯೋಜಿಸಲಾಗಿದೆ.
ಡಿ.18ರಂದು ಮೈಸೂರಿನ ಎಂಎಂಸಿ ಅಮೃತ ಮಹೋತ್ಸವ 3ಘಂಟೆಗೆ ಆರಂಭವಾಗುವ ಈ ಕರ್ಯಕ್ರಮದಲ್ಲಿ ಮೈಸೂರಿನ ಗ್ರೀನ್ ಡಾಟ್ ಟ್ರಸ್ಟ್ ಎಂಬ ವೃದ್ಧಾಶ್ರಮಕ್ಕೆಆರ್ಥಿಕ ಸಹಾಯ ನೀಡುತ್ತಿದ್ದು ಹಾಗೂ ತಮ್ಮ ಇಳಿವಯಸ್ಸಿನಲ್ಲೂ ಸಕ್ರಿಯವಾಗಿ, ಸ್ವಾವಲಂಬಿಗಳಾಗಿ, ವಿವಿಧ ವೃತ್ತಿಗಳಲ್ಲಿ ತೊಡಗಿಜೀವನ ನಡೆಸುತ್ತಿರುವ ಹತ್ತು ಮಂದಿ ಹಿರಿಯ ನಾಗರೀಕರನ್ನು ಗುರುತಿಸಿ ಗೌರವಿಸಲಾಗುತ್ತದೆ.
ಈ ಕರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಾಡಿನ ಹೆಸರಾಂತ ಸಂಸ್ಕೃತಿ ಚಿಂತಕರು, ವಿಚಾರವಂತ ವಾಗ್ಮಿಗಳು ಆದ ಪ್ರೊ.ಎಂ.ಕೃಷ್ಣೇಗೌಡರವರನ್ನುಆಹ್ವಾನಿಸಲಾಗಿದ್ದು, ಹಿರಿಯ ಜೀವಿಗಳಿಗೆ ತಮ್ಮ ಭರವಸೆಯ, ಸ್ಪೂರ್ತಿದಾಯಕ ಮಾತುಗಳಿಂದ ನವ ಚೈತನ್ಯವನ್ನುತುಂಬಲಿದ್ದಾರೆ.
ಡಾ:ರವೀಶ್, ಮನಶಾಸ್ತ್ರ ವಿಭಾಗದ ಮುಖ್ಯಸ್ಥರು, ಕೆ.ಆರ್.ಆಸ್ಪತ್ರೆ, ಮೈಸೂರುರವರು ಹಿರಿಯರ ಮನಃಸ್ಥಿತಿ, ಕಳವಳ, ಖಿನ್ನತೆಯ ಕುರಿತು ಆಪ್ತಸಮಾಲೋಚನೆ ನಡೆಸಿ ಸಭಿಕರೊಂದಿಗೆ ಸಂವಾದಿಸಲಿದ್ದಾರೆ.
ಎಂಎಂಸಿ ನೂತನ ಡೀನ್ ಮತ್ತು ನಿರ್ದೇಶಕರಾದ ಡಾ:ದಿನೇಶ್ರವರು ಕರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಅಧ್ಯಕ್ಷೀಯ ನುಡಿಗಳನ್ನು ಆಡಲಿದ್ದಾರೆ. ತಂಡದ ನೇತೃತ್ವ ವಹಿಸಿಕೊಂಡಿರುವ ಡಾ. ಲಾವಣ್ಯ ಶೆಣೈರವರು ಹಾಗೂ ತಂಡದಹಿರಿಯ ಸದಸ್ಯರಾದಶ್ರೀಮತಿ ಮೀರಾ ಶ್ರೀಕಾಂತ್ರವರು ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ.
ಇವೆಲ್ಲಕ್ಕೂ ಕಳಶ ಪ್ರಾಯವೆಂಬಂತೆ ಹಿರಿಯರ ಮನಃಸಂತೋಷಕ್ಕಾಗಿ ಸಂಜೆ 5ಘಂಟೆಯಿಂದ ಕನ್ನಡ ಮತ್ತು ಹಿಂದಿ ಚಲನಚಿತ್ರಗೀತೆಗಳ ಸಂಗೀತ ರಸಸಂಜೆ ಕರ್ಯಕ್ರಮವನ್ನು ಆಯೋಜಿಸಲಾಗಿದೆ. ಇದರಲ್ಲಿ ೨೦ ಮಂದಿ ನುರಿತ ಗಾಯಕ ಗಾಯಕಿಯರು ೩೦ ಮಂದಿ ಸಂಗೀತ ವಾದ್ಯಗಾರರೊಂದಿಗೆ, ಮಕ್ಕಳ ವಿಶೇಷ ನೃತ್ಯದೊಂದಿಗೆ ನೆರೆದಿರುವ ಸಭಿಕರನ್ನುರಂಜಿಸಲಿದ್ದಾರೆ.
ಮೈಸೂರಿನ ಜನತೆಗೆ ಒಂದು ಅಪೂರ್ವವಾದ, ಅಮೋಘವಾದ ಮತ್ತುಅಚ್ಚುಕಟ್ಟಾದ ಕರ್ಯಕ್ರಮವನ್ನು ನೀಡಲು ಸ್ವರಾಂಜಲಿ ತಂಡದ ಸದಸ್ಯರು ಎಲ್ಲಾರೀತಿಯ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದು, ಈ ಸತ್ಕರ್ಯಕ್ಕೆ ಪ್ರೋತ್ಸಾಹ, ಸಹಕಾರ, ಮಾರ್ಗದರ್ಶನ ನೀಡುವಂತೆ ಕೋರಿದ್ದಾರೆ.