ಮೈಸೂರು : ಶುಕ್ರವಾರ ಮೃತಪಟ್ಟಂತ ನಟ ಪುನೀತ್ ರಾಜ್ ಕುಮಾರ್ ಅವರ ಪಾರ್ಥೀವ ಶರೀರದ ಅಂತ್ಯಸಂಸ್ಕಾರವನ್ನು, ಇಂದು ನೆರವೇರಿಸಲಾಯಿತು. ಇಡೀ ಕರುನಾಡೆ ಅವರ ನಿಧನಕ್ಕೆ ಕಂಬನಿ ಮಿಡಿಯಿತು. ಇತ್ತ ಮೈಸೂರಿನಲ್ಲಿ ನವ ದಂಪತಿಗಳು, ಮದುವೆ ಮಂಟಪದಲ್ಲಿಯೇ ಅಗಲಿದೆ ನಟ ಪುನೀತ್ ರಾಜ್ ಕುಮಾರ್ ಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿದರು.
ಮೈಸೂರಿನ ಸಿದ್ಧಾರ್ಥ ನಗರದಲ್ಲಿನ ಕನಕ ಭವನದಲ್ಲಿ ಮನು ಕಿರಣ್ ಹಾಗೂ ಲಾವಣ್ಯ ವಿವಾಹದ ಮದುವೆ ಸಮಾರಂಭ ನಡೆಯುತ್ತಿತ್ತು. ಮತ್ತೊಂದೆಡೆ ಅಗಲಿದಂತ ನಟ ಪುನೀತ್ ರಾಜ್ ಕುಮಾರ್ ಅಂತ್ಯ ಸಂಸ್ಕಾರ ಇದೇ ಸಂದರ್ಭದಲ್ಲಿ ನಡೆಯುತ್ತಿತ್ತು. ಈ ಹಿನ್ನಲೆಯಲ್ಲಿ ಅವರ ಮದುವೆ ಸಮಾರಂಭದಲ್ಲೂ ಅಗಲಿದಂತ ನಟ ಪುನೀತ್ ರಾಜ್ ಕುಮಾರ್ ಅವರ ಪೋಟೋವನ್ನಿರಿಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಇನ್ನೂ ನೂತನ ವಧು-ವರರಷ್ಟೇ ಅಲ್ಲದೇ ಮದುವೆ ಸಮಾರಂಭಕ್ಕೆ ಬಂದಿದ್ದಂತ ಸಂಬಂಧಿಕರು, ಸ್ನೇಹಿತರಾಧಿಯಾಗಿ, ಎಲ್ಲರೂ ಮೇಣದ ಬತ್ತಿ ಹಿಡಿದು, ಅಗಲಿದೆ ರಾಜಕುಮಾರನಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.