ಮೈಸೂರು ;ಇನ್ನು ಮುಂದೆ ಪೊಲೀಸ್ ಠಾಣೆಗಳಲ್ಲಿ ಪ್ರತಿ ತಿಂಗಳಲ್ಲಿ ಒಂದು ದಿನ ಜನಸ್ನೇಹಿ ವಾತಾವರಣವನ್ನು ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದು ಶಾಸಕ ಎಸ್.ಎ. ರಾಮದಾಸ್ ತಿಳಿಸಿದರು.
ಮೈಸೂರಿನಲ್ಲಿಂದು ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣ ಮತ್ತು ದರೋಡೆ, ಶೂಟೌಟ್ ಪ್ರಕರಣ ಇದು ಮೈಸೂರಿಗೆ ಕಳಂಕವಾಗಿದೆ. ಮೈಸೂರು ಶಾಂತಿಯುತವಾಗಿದ್ದಂತಹ ನಗರ. ಹೊರಗಡೆ ಇದ್ದಂತಹವರು ಬಂದು ಇದೀಗ ಮೈಸೂರಿನಲ್ಲಿ ಸೆಟಲ್ ಆಗ್ತಿದ್ದಾರೆ. ಅಂತಹ ಸಮಯದಲ್ಲಿ ಈ ಎರಡು ಪ್ರಕರಣಗಳು ಕಪ್ಪುಚುಕ್ಕಿಯನ್ನು ತಂದಿದೆ. ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ನಾವು ಹೇಗೆ ತೆಗೆದುಕೊಳ್ಳಬೇಕು, ಇವುಗಳನ್ನು ತಡೆಯೋದು ಹೇಗೆ ಎಂಬ ವಿಚಾರಗಳನ್ನು ಇಟ್ಟುಕೊಂಡು ನಮ್ಮ ಕೆ.ಆರ್.ಕ್ಷೇತ್ರದಲ್ಲಾಗಲೇ 8 ಪೊಲೀಸ್ ಠಾಣೆಗಳಲ್ಲಿರುವ ಇನ್ಸಪೆಕ್ಟರ್ ಗಳನ್ನು, ಸಬ್ ಇನ್ಸಪೆಕ್ಟರ್ ಗಳನ್ನು, ಎಸಿಪಿಗಳನ್ನು ಇವರೆಲ್ಲರನ್ನೂ ಕರೆಸಿ ಒಂದು ಸಭೆ ನಡೆಸಲಾಗಿದೆ. ಝೀರೋ ಕ್ರೈಂ ಪೊಲೀಸ್ ಸ್ಟೇಶನ್ ಅಂತ ಈ ವರ್ಷದಲ್ಲಿ ಮಾಡುವ ಉದ್ದೇಶ ಹೊಂದಲಾಗಿದೆ. ಸ್ವತಂತ್ರ ಭಾರತದ 75ನೇ ವರ್ಷದಲ್ಲಿ ಜನಸ್ನೇಹಿ ಪೊಲೀಸ್ ಮಾಡಲು ಚಿಂತನೆ ಮಾಡಲಾಗಿದ್ದು, ಪ್ರತಿಯೊಂದು ಪೊಲೀಸ್ ಠಾಣೆಗಳಲ್ಲಿ ತಿಂಗಳಲ್ಲಿ ಒಂದು ದಿವಸ ಜನಸ್ನೇಹಿಯಾದಂತಹ ವಾತಾವರಣ ನಿರ್ಮಾಣ ಮಾಡಲು ವಿಶೇಷವಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಾರಂಭಿಸುತ್ತೇವೆ ಎಂದರು.
ಪೊಲೀಸ್ ಠಾಣೆಗಳಲ್ಲಿ ತಿಂಗಳಲ್ಲಿ ಒಂದು ದಿನ ಜನಸ್ನೇಹಿ ವಾತಾವರಣ ನಿರ್ಮಿಸಲು ಚಿಂತನೆ : ಶಾಸಕ ಎಸ್.ಎ. ರಾಮದಾಸ್
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.