ಮೈಸೂರು: ಮಿದುಳು ವೈಫಲ್ಯಕ್ಕೆ ಒಳಗಾಗಿದ್ದ ಇಬ್ಬರ ಅಂಗಾಗಗಳನ್ನು ದಾನ ಮಾಡಲಾಗಿದ್ದು, ಇದರಿಂದ 14 ಜನರಿಗೆ ಜೀವದಾನವಾಗಿದೆ.
ಖಾಸಗಿ ಆಸ್ಪತ್ರೆಯಲ್ಲಿ ದಾನ ಮಾಡಿದ ಅಂಗಗಳು 14 ಜೀವಗಳನ್ನು ಉಳಿಸಿವೆ. ೪ ಮೂತ್ರ ಪಿಂಡಗಳು (ಕಿಡ್ನಿ)2 ಲಿವರ್, 4 ಹೃದಯದ ಕವಾಟ, 4 ಕಾರ್ನಿಯಗಳನ್ನು ದಾನಮಾಡುವ ಮೂಲಕ ಒಂದೇ ಬಾರಿ 14 ಜನರಿಗೆ ಜೀವದಾನ ಮಾಡಲಾಯಿತು. ಹುಣಸೂರಿನ ಲಾರೆನ್ಸ್ (40) ಎಂಬವರು ಆ.14ರಂದು ಭೀಕರ ರಸ್ತೆ ಅಪಘಾತದಿಂದಾಗಿ ಗಂಭೀರ ಸ್ಥಿತಿಯಲ್ಲಿದ್ದರು. ಅವರ ಮಿದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರು ತಿಳಿಸಿದರು. ಅಂತೆಯೇ, ಕುಶಾಲನಗರದ ಶೋಭಾ ಅವರು ಮಿದುಳು ರಕ್ತಸ್ರಾವದಿಂದ ಬಳಲುತ್ತಿದ್ದರು. ಅವರ ಮಿದುಳು ಕೂಡ ನಿಷ್ಕ್ರಿಯವಾಗಿತ್ತು. ಹೀಗಾಗಿ, ಇಬ್ಬರ ಅಂಗಾಂಗಗಳನ್ನು ದಾನ ಮಾಡಲಾಯಿತು.
ಇಬ್ಬರ ಅಂಗಾಂಗ ದಾನ, 14 ಜನರಿಗೆ ಜೀವದಾನ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.