ಮೈಸೂರು : ಬಿಸಿಲ ಝಳಕ್ಕೆ ಮೈಮನ ತಂಪು ಮಾಡುವ ಸಲುವಾಗಿ ಮಕ್ಕಳು ಸೇರಿದಂತೆ ಯುವಕರು ಮೈಸೂರುವ್ಯಾಪ್ತಿಯ ಕೆರೆ, ನದಿ, ನಾಲೆಗಳ ನೀರಿನಲ್ಲಿ ಈಜಾಡಲು ಮುಂದಾಗುತ್ತಿದ್ದು, ಇದು ಕೆಲವಡೆ ಅಪಾಯಕ್ಕೂ ಆಹ್ವಾನ ನೀಡುತ್ತಿದೆ.
ಈಗಾಗಲೇ ಅಲ್ಲಲ್ಲಿ ಈಜಲು ಹೋದ ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆಗಳು ನಡೆದಿದ್ದು, ಪೋಷಕರು ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸುವುದರೊಂದಿಗೆ ದುರಂತಗಳು ನಡೆಯದಂತೆ ಗಮನಹರಿಸುವುದು ಅಗತ್ಯವಿದೆ.
ಬಹಳಷ್ಟು ಮಕ್ಕಳು ಮನೆಯಲ್ಲಿ ಪೋಷಕರಿಗೆ ಮಾಹಿತಿ ನೀಡದೆ ಗೆಳೆಯರೊಂದಿಗೆ ದೂರದ ನಾಲೆ, ನದಿಗಳಿಗೆ ಹೋಗುತ್ತಿದ್ದು, ಅಲ್ಲಿ ಈಜಾಡುವ ವೇಳೆ ದುರಂತಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ತಲೆ ನಾಲೆಯ ಬದಿಗೆ ಬಡಿದು ಜೀವಕ್ಕೆ ಕುತ್ತು ತರುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಸಂಬಂಧಿಸಿದವರು ಗಮನಹರಿಸಿ ಇದಕ್ಕೆ ಬ್ರೇಕ್ ಹಾಕಬೇಕಾಗಿದೆ.