ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಹೋಬಳಿಯ ನಾಗನ ಕೆರೆಯಲ್ಲಿ ನಡೆದ ಪ್ರಸಿದ್ಧ ಗಿಡದ ಜಾತ್ರೆಯು ಶುಕ್ರವಾರ ಗಮನಸೆಳೆಯಿತು.
ಬೆಳಗ್ಗೆಯಿಂದಲೇ ಭಕ್ತರು ಮತ್ತು ದಾಸಯ್ಯರ ದಂಡು ಜಾತ್ರೆಗೆ ಆಗಮಿಸಿ ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು. ಗೋವಿಂದನ ಸ್ಮರಿಸುತ್ತಾ ಘೋಷಣೆ ಕೂಗಿದರಲ್ಲದೆ, ಜಾಗಟೆ ಬಾರಿಸಿ ಪೂಜೆ ಸಲ್ಲಿಸಿದರು. ಜಾತ್ರೆಗೆ ಜಿಲ್ಲೆ ಮತ್ತು ತಾಲೂಕಿನ ವಿವಿಧ ಗ್ರಾಮಗಳ ಭಕ್ತರು ಆಗಮಿಸಿ ಸೇವೆ ಸಮರ್ಪಿಸಿದರು.
ಜಾತ್ರೆ ಹಿನ್ನಲೆಯಲ್ಲಿ ವಿವಿಧ ಬಗೆಯ ವ್ಯಾಪಾರ ವಹಿವಾಟು ಜೋರಾಗಿಯೇ ನಡೆಯಿತು. ಇದೇ ವೇಳೆ ದಾಸಯ್ಯರು ಜಾತ್ರೆ ಮುಗಿಸಿ ಮರ್ಕೋನಹಳ್ಳಿ ಬಳಿ ಎಲ್ಲರೂ ಒಟ್ಟಾಗಿ ಸೇರಿ ಪಾಣಿ ಸೇವೆ ಮುಗಿಸಿ ತಿರುಪತಿಗೆ ಪಯಣ ಬೆಳೆಸಿದ್ದಾರೆ.