News Karnataka Kannada
Saturday, May 04 2024
ಮಂಡ್ಯ

ಈ ದೇಶವನ್ನು ಮುನ್ನಡೆಸುವ  ಸಮರ್ಥ ನಾಯಕ ಮೋದಿ : ಎಚ್.ಡಿ. ದೇವೇಗೌಡ

New Project 2024 01 29t103036.678
Photo Credit : News Kannada

ಶ್ರೀರಂಗಪಟ್ಟಣ :   150 ಕೋಟಿ ಜನ ಇರುವ ಈ ದೇಶವನ್ನು  ಮುನ್ನಡೆಸುವ  ಸಮರ್ಥ ನಾಯಕ ಮೋದಿ ಬಿಟ್ಟರೆ ಬೇರೆ ಯಾರೂ ಇಲ್ಲ ಎಂದು ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.

ಸಮೀಪದ ಚಂದ್ರವನ ಆಶ್ರಮದಲ್ಲಿ ಭಾನುವಾರ ನಡೆದ ಮರಿದೇವರು ಶಿವಯೋಗಿ ಸ್ವಾಮೀಜಿ ಅವರ 130ನೇ ಜಯಂತಿ ಹಾಗೂ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಅವರ 25ನೇ ಪಟ್ಟಾಧಿಕಾರ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಡಿ.ಎಂ.ಎಸ್‌ ಆಯುರ್ವೇದ ಆಸ್ಪತ್ರೆ ಉದ್ಘಾಟಿಸಿ ಅವರು ಮಾತನಾಡಿದರು.

‘ಸದ್ಯದ ಸ್ಥಿತಿಯಲ್ಲಿ ಈ ದೇಶವನ್ನು ಆಳುವ ಶಕ್ತಿ ಇರುವುದು ನರೇಂದ್ರ ಮೋದಿ ಅವರಿಗೆ ಮಾತ್ರ’ ಅವರು ಗಂಗಾ ನದಿ ಸ್ವಚ್ಛ ಮಾಡಿಸಿದ್ದಾರೆ. ಕಾಶಿಗೆ ಕಾಯಕಲ್ಪ ನೀಡಿದ್ದಾರೆ.   ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದಾರೆ. ಮುಸ್ಲಿಮರು ಸೇರಿದಂತೆ ಎಲ್ಲರ ಒಳಿತನ್ನೂ ಬಯಸುವ ಅವರು ಮತ್ತೆ ಪ್ರಧಾನಿಯಾಗಲಿದ್ದಾರೆ’ ಎಂದು ಹೇಳಿದ್ಧಾರೆ ‘ಬಿಹಾರದಲ್ಲಿ ಭಾನುವಾರ ನಡೆದಿರುವ ರಾಜಕೀಯ ಬೆಳವಣಿಗೆಯು ಮೋದಿ ಮತ್ತೆ ಪ್ರಧಾನಿ ಆಗುತ್ತಾರೆ ಎಂಬುದಕ್ಕೆ ಶುಭ ಸೂಚನೆಯಾಗಿದೆ’ ಎಂದು ಅವರು ಹೇಳಿದರು.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು