ಮಂಡ್ಯ: ವಿಶ್ವವಿಖ್ಯಾತ ಶ್ರೀರಂಗಪಟ್ಟಣದ ಕೃಷ್ಣರಾಜಸಾಗರ ಜಲಾಶಯದ ಬಳಿ ಮತ್ತೆ ಚಿರತೆ ಕಾಣಿಸಿಕೊಂಡಿದ್ದು, ಪ್ರವಾಸಿಗರಿಗೆ ಬೃಂದಾವನ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ.
ಅಕ್ಟೋಬರ್ 28 ರ ಶುಕ್ರವಾರ ಸಂಜೆ, ಉತ್ತರ ಬೃಂದಾವನ ಕಡೆಯಿಂದ ಕಾರಂಜಿಯ ಬಳಿ ಚಿರತೆಯೊಂದು ಹೋಗುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಬ್ಬಂದಿ ತಕ್ಷಣವೇ ಬೃಂದಾವನದಲ್ಲಿದ್ದ ಪ್ರವಾಸಿಗರನ್ನು ಎಚ್ಚರಿಸಿ ಅವರನ್ನು ವಾಪಸ್ ಕಳುಹಿಸಿದರು ಮತ್ತು ಯಾವುದೇ ಅಪಾಯವಾಗದಂತೆ ಅವರನ್ನು ತಡೆದರು.
ಒಕೋಬರ್ 22ರಂದು ಕೆ.ಆರ್.ಎಸ್. ಅಣೆಕಟ್ಟಿನ ಮೇಲೆ ಚಿರತೆ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿತ್ತು. ಆ ದಿನ ಬೃಂದಾವನವನ್ನು ಸಹ ಮುಚ್ಚಲಾಯಿತು. ಅಲ್ಲದೆ, ಚಿರತೆ ಅಣೆಕಟ್ಟಿನ ಮೇಲೆ ತಿರುಗಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ರಾಯಲ್ ಆರ್ಕಿಡ್ ಹೋಟೆಲ್ ಹಿಂದೆ ಪಂಜರವನ್ನು ಇರಿಸಿದೆ. ಆದಾಗ್ಯೂ, ಬೋನಿಗೆ ಬೀಳದ ಚಿರತೆಯು ಶುಕ್ರವಾರ ಉತ್ತರ ಬೃಂದಾವನದ ಬಳಿ ತಿರುಗಾಡುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದು ಆತಂಕಕ್ಕೆ ಕಾರಣವಾಗಿದೆ.