ಕೆ.ಆರ್.ಪೇಟೆ: ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೀರುವಳ್ಳಿ, ಮೂಡನಹಳ್ಳಿ, ಅಲೆನಹಳ್ಳಿ, ವ್ಯಾಪ್ತಿಗೆ ಬರುವ ಶ್ರೀ ತಾವರೆಕೆರೆ ಮಹಾಲಕ್ಷ್ಮಿ ದೇವಿಯ ಮಹಾ ರಥೋತ್ಸವ ಭಕ್ತರ ಜಯ ಘೋಷಗಳ ಮಧ್ಯೆ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ನೆರವೇರಿತು.
ಶೃಂಗಾರಗೊಂಡಿದ್ದ ರಥದಲ್ಲಿ ದೇವತೆ ಶ್ರೀ ತಾವರೆಕೆರೆ ಮಹಾಲಕ್ಷ್ಮಿ ಅಮ್ಮನವರ ಉತ್ಸವ ಮೂರ್ತಿಯನ್ನುರಥದ ಮೇಲೆ ಏರುತ್ತಿದ್ದಂತೆ ಭಕ್ತರ ಜಯಕಾರ ಮುಗಿಲು ಮುಟ್ಟಿತು. ಮಕ್ಕಳು, ವೃದ್ಧರು, ಮಹಿಳೆಯರು ಹೊಸ ಬಟ್ಟೆಗಳನ್ನುಟ್ಟು ಶ್ರೀ ತಾವರೆಕೆರೆ ಅಮ್ಮನವರ ಪ್ರಾಂಗಣದಲ್ಲಿ ಮಧ್ಯಾಹ್ನ 12 ಗಂಟೆಯಿಂದಲೆ ಜಮಾವಣೆಗೊಂಡು ನಂತರ ನಡೆದ ರಥೋತ್ಸವವನ್ನು ಕಣ್ತುಂಬಿಕೊಂಡರು. ರಥೋತ್ಸವದ ನಂತರ ಭಕ್ತರುಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಹಣ್ಣು ದವನ ಈಡು ಗಾಯಿಗಳನ್ನು ಒಡೆದು ಹರಕೆ ತೀರಿಸಿ ಪ್ರಸಾದ ಸ್ವೀಕರಿಸಿದರು. ಮಹಾರಥೋತ್ಸವಕ್ಕೆ ಪಟ್ಟಣ ಸೇರಿದಂತೆ ಸುಮುತ್ತಲಿನ ಅನೇಕ ಗ್ರಾಮಗಳ ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು.
ಜಾತ್ರಾ ಸಮಿತಿಗೆ ಆರ್ಥಿಕ ಅಳಿಲು ಸಹಾಯ ನೀಡಿ ರಥ ಹೇಳಿಯುವ ಮೂಲಕ ದೇವರ ಕೃಪೆಗೆ ಸಮಾಜ ಸೇವಕ ಆರ್. ಟಿ. ಓ ಮಲ್ಲಿಕಾರ್ಜುನ್ ಪಾತ್ರರಾದರು. ಸಂಪ್ರದಾಯದಂತೆ ಮುಂಜಾನೆ ದೇವಸ್ಥಾನದಲ್ಲಿ ಧಾರ್ಮಿಕ ವಿಧಿವಿಧಾನಗಳು ಪ್ರಾರಂಭವಾಗಿ ಸಾಯಂಕಾಲದವರೆಗೆ ಅನೇಕ ಚಟುವಟಿಕೆಗಳು ನಡೆದವು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ರೂಪ ಕೃಷ್ಣೇಗೌಡ, ತಾ. ಪಂ ಮಾಜಿಸದಸ್ಯನಿಂಗೇಗೌಡ,ಹರೀಶ, ಮಹದೇವ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬಿ. ಎನ್ಕುಮಾರ್,ಕೃಷ್ಣೇಗೌಡ, ಪುಟ್ಟರಾಜು, ಬಿ.ಟಿ ಕುಮಾರ್, ಯುವ ಮುಖಂಡ ಅರುಣ್, ಡಿ ಚಂದ್ರು,ಬೀರುವಳ್ಳಿಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಿರೇಗೌಡ, ದಯಾನಂದ್, ದೊಡ್ಡೇಗೌಡ,ಮಿಲ್ ಕೃಷ್ಣೇಗೌಡ, ಸಾವಿರಾರು ಭಕ್ತಾದಿಗಳು ಸೇರಿದಂತೆ ಉಪಸ್ಥಿತರಿದ್ದರು.