ಭಾರತೀನಗರ: ಇಲ್ಲಿಗೆ ಸಮೀಪದ ಅಣ್ಣೂರು ಗ್ರಾಮದಲ್ಲಿ ಶ್ರೀಬೊಮ್ಮಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಮಹೋತ್ಸವ ಹಾಗೂ ಬೃಹತ್ ಅನ್ನಸಂತರ್ಪಣಾ ಕಾರ್ಯಕ್ರಮ ಜರುಗಿತು.
ಅಣ್ಣೂರು ಗ್ರಾಮದ ಮಹಾಕಾಳಮ್ಮ ದೇವಸ್ಥಾನದಿಂದ ಗ್ರಾಮದೇವರಾದ ಶ್ರೀ ತಿಮ್ಮಪ್ಪ, ಶ್ರೀ ಅಮೃತೇಶ್ವರ, ಶ್ರೀ ಮಹಾಕಾಳಮ್ಮ, ಶ್ರೀಮಾರಮ್ಮ, ಶ್ರೀ ಸಿದ್ದೇಶ್ವರ ಹಾಗೂ ಶ್ರೀ ಅಟ್ಟಿಮಾರಮ್ಮ ದೇವರುಗಳು ಮೆರವಣಿಗೆ ಮೂಲಕ ಶ್ರೀಬೊಮ್ಮಲಿಂಗೇಶ್ವರಸ್ವಾಮಿ ಸನ್ನಿಧಿಗೆ ಆಗಮಿಸಿದವು. ನಂತರ ಗ್ರಾಮದೇವತೆಗಳನ್ನು ಹೂವಿನಿಂದ ಅಲಂಕರಿಸಿ ಹೂ-ಹೊಂಬಾಳೆಯ ತಂದು ಶ್ರೀಬೋರಪ್ಪ ದೇವಸ್ಥಾನದ ಸನ್ನಿಧಿಗೆ ತೆರಳಿ ಪೂಜೆಸಲ್ಲಿಸಿದ ಬಳಿಕ ಉತ್ಸವ ಜರುಗಿತು.
ತದ ನಂತರ ಶ್ರೀಬೊರಪ್ಪ ದೇವಸ್ಥಾನದಿಂದ ಶ್ರೀಬೊಮ್ಮಲಿಂಗೇಶ್ವರ ಸನ್ನಿಧಿಗೆ ಆಗಮಿಸಿ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿದ ಕೂಡಲೇ ದೇವರುಗಳ ಉತ್ಸವ ಜರುಗಿತು. ತಮಟೆ ಸದ್ದಿಗೆ ಭಕ್ತಾಧಿಗಳು ಕುಣಿದು ಕುಪ್ಪಳಿಸಿದರು.
ಶ್ರೀಬೊಮ್ಮಲಿಂಗೇಶ್ವರ ದೇವರಿಗೆ ವಿಶೇಷವಾಗಿ ಹೂವಿನಿಂದ ಅಲಂಕರಿಸಲಾಗಿತ್ತು. ಸುತ್ತ-ಮುತ್ತಲ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಭಕ್ತಾಧಿಗಳು ಮೆರವಣಿಗೆ ಮತ್ತು ಉತ್ಸವದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಏಕಕಾಲಕ್ಕೆ 6 ಸಾವಿರಕ್ಕೂ ಹೆಚ್ಚು ಭಕ್ತಾಧಿಗಳನ್ನು ಪಂಕ್ತಿಯಲ್ಲಿ ಕೂರಿಸಿ ಅನ್ನಸಂರ್ಪಣೆ ಮಾಡಲಾಯಿತು. ಪಂಕ್ತಿಯಲ್ಲಿ ಕೂತಿದ್ದ ಭಕ್ತಾಧಿಗಳ ಸುತ್ತ ಅನ್ನಸಂತರ್ಪಣಾ ಸೇವಾಕರ್ತರಾದ ಗಾಯಿತ್ರಿ ಶ್ರೀನಿವಾಸ್ ಮತ್ತು ಅರುಣಾಶರತ್ಕುಮಾರ್ ಕುಟುಂಬದವರು ಧೂಪ ಹಿಡಿದು ಪ್ರದಕ್ಷಿಣೆ ಹಾಕಿದ ಬಳಿಕ ಭಕ್ತಾಧಿಗಳು ಪ್ರಸಾದ ಸ್ವೀಕರಿಸಿದರು. ರಾತ್ರಿ ಗ್ರಾಮದ ಸುತ್ತಲೂ ದೇವರುಗಳ ಉತ್ಸವ ಜರುಗಿತು.
ಜಾಗತಿಕವಾಗಿ ಚಿನ್ನಕ್ಕೆ ಈಗ ಸಖತ್ ಬೇಡಿಕೆ ಸೃಷ್ಟಿಯಾಗಿರುವುದು ಈ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ಒಂದು ತಿಂಗಳಿನಿಂದ ಚಿನ್ನದ ಬೆಲೆ…
ಐಪಿಎಲ್ 2024ರ 66ನೇ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಹೈದರಾಬಾದ್ನಲ್ಲಿ ಸನ್ರೈಸರ್ಸ್ ತಂಡ ಗುಜರಾತ್ ತಂಡವನ್ನು ಎದುರಿಸಬೇಕಿತ್ತು. ಆದರೆ, ಟಾಸ್ಗೂ ಮುನ್ನವೇ…
ಕೇಂದ್ರ ಸರ್ಕಾರವು 41 ಅಗತ್ಯ ಔಷಧಗಳು ಹಾಗೂ ಹೃದಯ ರಕ್ತನಾಳದ ಕಾಯಿಲೆ, ಸಕ್ಕರೆ ಕಾಯಿಲೆ ಇರುವವರು ಬಳಸುವ 6 ಫಾರ್ಮುಲೇಷನ್ಗಳ…
ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…
ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…
ತಮಿಳುನಾಡಿನ ಖಾಸಗಿ ಟಿವಿ ಚಾನೆಲ್ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್ ಮುನಿಸ್ವಾಮಿ…