ಶ್ರೀರಂಗಪಟ್ಟಣ : ಇಲ್ಲಿನ ಪವಿತ್ರ ಸ್ಥಳ ಗೋಸಾಯಿಘಾಟ್ ಬಳಿ ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಪಾಂಡವಪುರ ತಾಲೂಕಿನ ಲಕ್ಷ್ಮಿಸಾಗರ ಗ್ರಾಮದ ಪ್ರದೀಪ್ಉಮಾರ್ ಎಂಬುವರ ಪತ್ನಿ ಭಾರ್ಗವಿ (30) ಹಾಗೂ ದೀಕ್ಷ ( 3) ಮೃತರು. ಕೌಟಿಂಬಿಕ ಕಲಹ ದ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿರುವ ಶಂಖೆ ಪೊಲೀಸರಿಂದ ವ್ಯಕ್ತವಾಗಿದೆ. ಇವರು ಮೈಸೂರಿನ ಊಟಗಹಳ್ಳಿ ಗ್ರಾಮದಲ್ಲಿ ಸದ್ಯ ವಾಸವಾಗಿದ್ದರು ಎಂದು ತಿಳಿದು ಬಂದಿದೆ.
ಭಾರ್ಗವಿಯನ್ನು ದೇವೇಗೌಡನ ಕೊಪ್ಪಲಿನಿಂದ ಲಕ್ಷ್ಮಿ ಸಾಗರ ಪ್ರದೀಪ್ ಕುಮಾರ್ ಗೆ ವಿವಾಹಮಾಡಿ ಕೊಡಲಾಗಿತ್ತು. ಶುಕ್ರವಾರ ಸಂಜೆಯಲ್ಲಿ ಗಂಜಾಮ್ ನ ಗೋಸಾಯಿಘಾಟ್ ಗೆ ಬಂದು ಕಾವೇರಿ ನದಿ ತೀರದಲ್ಲಿ ಚಪಲಿ,ಮೊಬೈಲ್ ಇಟ್ಟು ನೀರಲ್ಲಿ ಮುಳುಗಿದ್ದಾರೆ ಎಂದು ಮೂಲಗಳು ತಿಳುಸಿವೆ.
ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ತಾಯಿ ಮಗುವಿನ ಶವಗಳನ್ನು ಅಗ್ನಿ ಶಾಮಕ ದಳ ಸಿಬ್ಬಂದಿಯಿಂದ ಸಹಕಾರದಿಂದ ಮೇಲಕ್ಕೆತ್ತಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ