ಮಂಡ್ಯ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕರೆ ನೀಡಲಾಗಿದ್ದ ಭಾರತ್ ಬಂದ್ ಮಂಡ್ಯದಲ್ಲಿ ಯಶಸ್ವಿಯಾಗಿಲ್ಲ. ಎಂದಿನಂತೆ ಜನ ಜೀವನ, ಸಾರಿಗೆ ಸಂಚಾರ. ಹೋಟೆಲ್, ಅಂಗಡಿ ಮುಂಗಟ್ಟು ತೆರೆದು ವ್ಯಾಪಾರ ಆರಂಭವಾಗಿವೆ. ಆಟೋ, KSRTC, ಖಾಸಗಿ ಬಸ್ ಸಂಚಾರ ಸರಾಗವಾಗಿದೆ.
ತಮ್ಮ ಕೆಲಸ ಕಾರ್ಯಗಳಲ್ಲಿ ಜನರು ತೊಡಗಿದ್ದಾರೆ. ಕೆಲವೆಡೆ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತ ಸಂಘ, ಸಿಪಿಎಂ ಸೇರಿ ಹಲವು ಸಂಘನೆಗಳ ಬೆಂಬಲ ನೀಡಿ ಪ್ರತಿಭಟನೆಯಲ್ಲಿ ತೂಡಗಿವೆ. ಪ್ರಮುಖ ರಸ್ತೆ, ವೃತ್ತದಲ್ಲಿ ಮುಂಜಾಗೃತ ಕ್ರಮವಾಗಿ ಪೊಲೀಸ್ ಭದ್ರತೆ ಮಾಡಲಾಗಿದೆ. ಅಂಗಡಿ ಮುಂಗಟ್ಟು ಮುಚ್ಚಿ ಬಂದ್ ಗೆ ಸಹಕರಿಸುವಂತೆ ಹೋರಾಟ ಗಾರರು ಮನವಿ ಮಾಡುತ್ತಿದ್ದಾರೆ.