ಹನಗೋಡು: ಹೋಬಳಿಯಲ್ಲಿ ಕಾಡಾನೆಗಳ ದಾಳಿ ಮುಂದುವರಿದ್ದು, ಕಿಕ್ಕೇರಿಕಟ್ಟೆ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಿಕ್ಕೇರಿ ಕಟ್ಟೆ ಗ್ರಾಮದ ನಿವೃತ್ತ ಯೋಧ ಬಿ.ಟಿ. ರಾಜು ಅವರ ಪತ್ನಿ ಗಾಯಾಳು ಕಾವೇರಿ (68) ಅವರ ಕಾಲಿಗೆ ಗಂಭೀರ ಗಾಯವಾಗಿದೆ.
ಅವರು ತಮ್ಮ ಮನೆಯ ಹಿಂದೆ ಎಂದಿನಂತೆ ಹಸುಗಳನ್ನು ಕಟ್ಟಲು ಹೋದಾಗ ಹಿಂದೆ ಬಂದ ಸಲಗ ಅವರ ಮೇಲೆ ಹಠಾತ್ ದಾಳಿ ನಡೆಸಿದೆ ತಕ್ಷಣ ಪಕ್ಕದಲ್ಲಿ ಇದ್ದ ಅವರ ಪತಿ ಕಿರುಚಿಕೊಂಡಾಗ ಗಾಬರಿಯಾಗಿ ಸಲಗ ಬಿಟ್ಟು ಅರಣ್ಯದ ಕಡೆ ಓಡಿ ಹೋಗಿದೆ.
ಸದ್ಯ ಕಾವೇರಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳು ಕಾವೇರಿ ಅವರನ್ನು ಚಿಕಿತ್ಸೆಗಾಗಿ ಹನಗೋಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದಿದ್ದು ಚಿಕಿತ್ಸೆ ನೀಡಲಾಗುತ್ತಿತ್ತು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಶಾಸಕ ಜಿ. ಡಿ. ಹರೀಶ್ ಗೌಡ ಹಾಗೂ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ, ಕಾವೇರಿ ಅವರ ಆರೋಗ್ಯ ವಿಚಾರಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲು ಹೇಳಿ ವೈಯಕ್ತಿಕವಾಗಿ ಧನ ಸಹಾಯ ಮಾಡಿ ಚಿಕಿತ್ಸಾ ವೆಚ್ಚವನ್ನು ಅರಣ್ಯ ಇಲಾಖೆ ವತಿಯಿಂದ ಕೊಡಿಸುವುದಾಗಿ ಸಾಂತ್ವನ ಹೇಳಿದರು.
ಹೆಚ್ಚುತ್ತಿರುವ ಕಾಡಾನೆ ದಾಳಿ ತಡೆಗೆ ಸರ್ಕಾರ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೇವಲ ಪರಿಹಾರ ಘೋಷಿಸಿ ಕೈತೊಳೆದುಕೊಳ್ಳುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದರು ಸಾರ್ವಜನಿಕರು ಶಾಸಕರ ಮುಂದೆ ತಮ್ಮ ನೋವನ್ನು ಹೇಳಿಕೊಂಡರು. ಶಾಸಕರು ಅರಣ್ಯ ಅಧಿಕಾರಿಗಳಿಗೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಆನೆ ಬರುವ ಕಂದಕಗಳಿಗೆ ರೈಲ್ವೆ ಬ್ಯಾರಿಕೇಡ್ ಅಳವಡಿಸಿ ಮತ್ತು ಹುಲಿಗಳನ್ನು ಸೆರೆ ಹಿಡಿಯಲು ಸೂಕ್ತ ಕ್ರಮ ವಹಿಸಬೇಕು ಎಂದು ಆದೇಶಿಸಿದರು. ಅರಣ್ಯ ಅಧಿಕಾರಿಗಳು ಸಲಗ ಅರಣ್ಯದಿಂದ ಆಚೆ ದಾಟದಂತೆ ಕಾವಲು ಹಾಕುತ್ತೇವೆ ಎಂಬ ಭರವಸೆ ನೀಡಿದರು
ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಯಾನಂದ್, ವಲಯರಣ್ಯಧಿಕಾರಿ ಸುಬ್ರಹ್ಮಣ್ಯ, ಉಪವಲಯಣ್ಯಧಿಕಾರಿ ಸಿದ್ದರಾಜು, ಮುಖಂಡರಾದ ಕಿರಂಗೂರು ಬಸವರಾಜ್, ಎಚ್ಆರ್ ರಮೇಶ್, ಗಣಪತಿ, ಶಿವರಾಜ್, ಗ್ರಾಪಂ ಅಧ್ಯಕ್ಷ ಚೆನ್ನಯ್ಯ ಇತರರು ಹಾಜರಿದ್ದರು.