ಮಡಿಕೇರಿ: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿದೆ. ಜನವರಿ 22 ರಂದು ಉದ್ಘಾಟನೆಯಾಗಲಿದೆ. ಅಂದೇ ರಾಮಲಲ್ಲಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತದೆ.
ಈ ರಾಮಮಂದಿರಕ್ಕೆ ದೇಶದ ವಿವಿಧ ಪವಿತ್ರ ನದಿಗಳ ನೀರು ರವಾನೆಯಾಗುತ್ತಿದೆ. ಅದರಂತೆ ದಕ್ಷಿಣ ಮಂದಾಕಿನಿ ಕಾವೇರಿ ನದಿಯಿಂದಲೂ ತೀರ್ಥ ರವಾನೆ ಮಾಡಲಾಗಿದೆ. ಕೊಡಗು ಜಿಲ್ಲೆಯ ತಲಕಾವೇರಿಯ ಬ್ರಹ್ಮಕುಂಡಿಕೆಯಿಂದ ಅಖಿಲ ಭಾರತೀಯ ಸಂತ ಸಮಿತಿ, ವಿಶ್ವ ಹಿಂದೂ ಪರಿಷತ್ ಸದಸ್ಯರು ತೀರ್ಥ ಸಂಗ್ರಹಿಸಿದರು. ಈ ವೇಳೆ ಕಾವೇರಿ ಮಾತೆ ನಾಮ ಜಪ ಮಾಡಲಾಯಿತು ಮತ್ತು ವಿಶೇಷ ಪೂಜೆ ನಡೆಸಿದವು.
ಅಯೋಧ್ಯೆಯ ವಿಸ್ತೀರ್ಣ 2,522 ಚದರ ಕಿ.ಮೀ. ಸದ್ಯ ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ ದೇಶಾದ್ಯಂತ ಜನರು ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾದಗಿನಿಂದ ಅಯೋಧ್ಯೆ ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿಬಿಟ್ಟಿದೆ. ಜನರು ಜನವರಿ ೨೨ ರ ದಿನಾಂಕವನ್ನು ಹಬ್ಬದಂತೆ ಆಚರಿಸಲು ಎಲ್ಲಾ ತಯಾರಿ ನಡೆಸುತ್ತಿದ್ದಾರೆ.
ಇನ್ನು ಪ್ರಧಾನಿ ಮೋದಿ ಅವರು ಜನವರಿ 22 ರಂದು ಶ್ರೀರಾಮ ಮಂದಿರದ ಉದ್ಘಾಟನಾ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಶ್ರೀರಾಮ ಮಂದಿರ ಉದ್ಘಾಟನೆ ದಿನ ಭಕ್ತರು ಆದಷ್ಟೂ ಅಯೋಧ್ಯೆಗೆ ಬರಬೇಡಿ ಎಂದೇ ಎಲ್ಲರೂ ಮನವಿ ಮಾಡುತ್ತಿದ್ದಾರೆ. ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸೇರಿದಂತೆ ಪ್ರಧಾನಿ ಮೋದಿ ಆದಿಯಾಗಿ ಎಲ್ಲರೂ ಕೂಡಾ ಭಕ್ತರಿಗೆ ಇದೇ ರೀತಿಯ ಮನವಿ ಮಾಡುತ್ತಿದ್ದಾರೆ.