News Karnataka Kannada
Sunday, April 28 2024
ಮಡಿಕೇರಿ

ಸೋಮವಾರಪೇಟೆ: ಆಧ್ಯಾತ್ಮದಿಂದ ಮಾತ್ರ ಮಾನಸಿಕ ನೆಮ್ಮದಿ ಸಾಧ್ಯ ಎಂದ ಶಂಭುನಾಥ ಸ್ವಾಮೀಜಿ

Peace of mind is possible only through spirituality, says Shambhunatha Swamiji
Photo Credit : By Author

ಸೋಮವಾರಪೇಟೆ: ವಿಜ್ಞಾನ, ತಂತ್ರಜ್ಞಾನ ಮುಂದುವರಿದರೂ ಆಧ್ಯಾತ್ಮದಿಂದ ಮಾತ್ರ ಮಾನಸಿಕ ನೆಮ್ಮದಿ ಸಾಧ್ಯವೆಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.

ಸೋಮವಾರಪೇಟೆ ಸಮೀಪದ ತಪೋಕ್ಷೇತ್ರ ಮನೆ ಹಳ್ಳಿ ಮಠದಲ್ಲಿ ಆಯೋಜಿಸಲಾಗಿದ್ದ 21ನೇ ವರ್ಷದ 25 ಸಹಸ್ರ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಂದು ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರೆದಿರಬಹುದು ಅದರಿಂದ ನೆಮ್ಮದಿ ಸಿಗುವುದಿಲ್ಲ. ಆಸ್ತಿ, ಅಂತಸ್ತಿ ಗಿಂತ ಮನಸಂತೋಷ ಮುಖ್ಯ. ಮನುಷ್ಯ ಮಾನಸಿಕವಾಗಿ ನೆಮ್ಮದಿ ಕಾಣಬೇಕಾದರೆ ಆಧ್ಯಾತ್ಮಿಕವಾಗಿ ದೇವರ ಮೊರೆ ಹೋಗಲೇಬೇಕು ಎಂದರು.
ಭಕ್ತಿ, ಶ್ರದ್ಧೆ, ನಿಷ್ಟೆಯೊಂದಿಗೆ ಸಮರ್ಪಣಾ ಭಾವನೆ ಇರಬೇಕು ಎಂದ ಅವರು ಬದುಕಿನಲ್ಲಿ ಸಮಾಜಕ್ಕೆ ಅನುಕೂಲವಾಗುವ ಕೆಲಸ ಮಾಡಿ, ನಾನು ನಾನೆಂಬ ಅಹಂ ಬೇಡವೆಂದರು. ಮಾನವ ಜನ್ಮ ದೊಡ್ಡದು ಪ್ರಕೃತಿ ಋಣ ನಮ್ಮಮೇಲಿದೆ ಅದನ್ನು ಉಳಿಸಿ, ಬೆಳೆಸಬೇಕಾದ ಕರ್ತವ್ಯ ನಮ್ಮದು ಎಂದರು.

ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ವಹಿಸಿದ್ದ ಮನೆ ಹಳ್ಳಿ ಮಠದೀಶ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಮಾತನಾಡಿ, ಕ್ಷೇತ್ರದಲ್ಲಿ ದೇವಾಲಯ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ ಭಕ್ತರ ಸಹಕಾರ ಬೇಕೆಂದರು. ಪ್ರತಿ ತಿಂಗಳು ನಡೆಯುವ ಪೂಜೆ ಉತ್ಸವಗಳಲ್ಲಿ ಪಾಲ್ಗೊಳ್ಳಿ ಆ ಮೂಲಕ ಭಗವಂತನ ಸೇವೆ ಮಾಡಿ ಎಂದರು.

ಕಾರ್ಯಕ್ರಮದಲ್ಲಿ ಕೆಸವತ್ತುರು ಮಠದ ಬಸವರಾಜೆಂದ್ರ ಸ್ವಾಮೀಜಿ, ಹಾಸನ ತಣ್ಣೀರು ಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಮುದ್ದಿನ ಕಟ್ಟೆ ಮಠದ ಅಭಿನವ ಸಿದ್ದಲಿಂಗ ಸ್ವಾಮೀಜಿ, ಚಿಕ್ಕ ಬಳ್ಳಾಪುರದ ನಿಶ್ಚಲ ದೇಶಿಕೇಂದ್ರ ಸ್ವಾಮೀಜಿ, ಬೆಂಗಳೂರು ಸೆಷನ್ ಕೋರ್ಟ್ ನ ನ್ಯಾಯಾದಿಶರಾದ ಜಯಶ್ರೀ, ವಿರಾಜಪೇಟೆಯ ವೈದ್ಯರಾದ ಡಾ.ಬೋಪಣ್ಣ, ಪ್ರಮುಖರಾದ ಜ್ಞಾನೇಶ್ವರಿ, ಮಾಗೋಡು ಬಸವರಾಜು ಹಾಗೂ ಮುಂತಾದವರು ಮತ್ತಿತರ ಗಣ್ಯರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಗೀತಗಾಯನ ತಂಡದವರ ಭಕ್ತಿಗೀತೆ ಗಾಯನ ಗಮನ ಸೆಳೆಯಿತು. ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ದೀಪೋತ್ಸವದಲ್ಲಿ ದೀಪಬೇಳಗಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು