ವಿರಾಜಪೇಟೆ: ಶುಕ್ರವಾರ ಸಂಜೆ 5:00 ಗಂಟೆಗೆ ನಡೆಯಲಿರುವ ವಿಜಯ ಸಂಕಲ್ಪ ಯಾತ್ರೆಯ ಬೃಹತ್ ಸಮಾವೇಶಕ್ಕೆ ಕಾರ್ಯಕರ್ತರು ಬಹಳ ಉತ್ಸಾಹದಿಂದ ಗುರುವಾರ ರಾತ್ರಿ ಇಡಿ ಬಂಟಿಂಗ್ಸ್ ಧ್ವಜವನ್ನು ಕಟ್ಟುತ್ತಾ ವೇದಿಕೆ ಸಿದ್ಧತಾ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇಲ್ಲಿನ ಆರ್ಎಂಸಿಯಿಂದ ಬಸ್ ನಿಲ್ದಾಣದವರೆಗೆ ನಡೆಯಲಿರುವ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಒಟ್ಟು 10000 ಕಾರ್ಯಕರ್ತರು ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಿದ್ಧತೆಯ ಉಸ್ತುವಾರಿ ಹೊತ್ತಿರುವ ಹಾಗೂ ಖುದ್ದು ಹಾಜರಿದ್ದು ಸಲಹೆ ಸೂಚನೆಗಳನ್ನು ನೀಡುತ್ತಿದ್ದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಿ. ಕೆ ಬೋಪಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕಾರ್ಯಕ್ರಮದ ಸಿದ್ಧತಾ ಕಾರ್ಯದ ಮೇಲ್ವಿಚಾರಣೆ ಹೊತ್ತಿರುವ ತಾಲೂಕು ಅಧ್ಯಕ್ಷ ನಲ್ಲಿರ ಚಲನ್ ಸುರೇಶ್ ರೈ, ಬಿ. ಏನ್. ಪ್ರಕಾಶ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳೊಂದಿಗೆ ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಮಧ್ಯರಾತ್ರಿಯಲ್ಲೂ ಅಲಂಕಾರದ ಸಿದ್ಧತಾ ಕಾರ್ಯದಲ್ಲಿ ಮಗ್ಧರಾಗಿದ್ದ ದೃಶ್ಯ ಕಂಡು ಬಂತು.