ಪೊನ್ನಂಪೇಟೆ: ಕಳೆದ 15 ದಿವಸದ ಹಿಂದೆ ಬಲ್ಯಮುಂಡೂರು ಗ್ರಾಮದ ಚೇಂದಿರ ಸುರೇಶ ರವರ ಎಮ್ಮೆಯನ್ನು ಕೊಂದು ಹಾಕಿದ ಹುಲಿ ಇಂದು ಮುಂಜಾನೆ ಚೇತನ್ ರವರ ಹಸುವನ್ನು ಕೊಂದು ಹಾಕಿದೆ.
ಕಳೆದ ವರ್ಷ ಇದೇ ಸಮಯದಲ್ಲಿ ಚೇತನ್ ರವರ ಹಸುವನ್ನು ಕೊಂದು ಹಾಕಿತ್ತು, ಮತ್ತೆ ಮತ್ತೆ ಹುಲಿ ದಾಳಿಯಿಂದ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಕಾಫಿ ತೋಟಗಳಿಗೆ ಕಾರ್ಮಿಕರು ಹೊಗಲು ಭಯಪಡುವಂತಾಗಿದೆ, ಸ್ಥಳಕ್ಕೆ ಭೇಟಿ ನೀಡಿದ ಕೃಷಿ ಮೊರ್ಚ ತಾಲೂಕು ಕಾರ್ಯದರ್ಶಿ ಕೊಟ್ಟಂಗಡ ಅಯ್ಯಪ್ಪ ರವರು ಸಿ ಸಿ ಎಫ್ ಮೂರ್ತಿ ರವರು ಹಾಗೂ ಡಿಎಫ್ ಒ ಶರಣಬಸಪ್ಪ ರವರ ಜೊತೆ ಮಾತನಾಡಿ ಇಂದೇ ಬೊನ್ ಇಡುವಂತೆ ಒತ್ತಾಯಿಸಿದ ಮೇರೆಗೆ, ಡಿ ಆರ್ ಎಫ್ ಒ ದಿವಾಕರ್ ಅವರು ಸಿಬ್ಬಂದಿ ಗಳೊಂದಿಗೆ ಸ್ಥಳದಲ್ಲಿಯೇ ಬೊನ್ ಇಡುವ ಕಾರ್ಯಪ್ರವೃತ್ತರಾಗಿದ್ದಾರೆ.
ಕೃಷಿ ಮೊರ್ಚ ತಾಲೂಕು ಅಧ್ಯಕ್ಷ ರಾದ ಕಟ್ಟೆರ ಈಶ್ವರ ರವರು ಪ್ರಧಾನ ಕಾರ್ಯದರ್ಶಿ ತೊರಿರ ವಿನು ರವರು ಅಡ್ಡಂಡ ನಿಲನ್ ರವರು ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ಕೂಡಲೆ ಹುಲಿ ಯನ್ನು ಹಿಡಿಯುವಂತೆ ಹಾಗೂ ಪರಿಹಾರವನ್ನು ತಕ್ಷಣವೇ ನೀಡುವಂತೆ ಒತ್ತಾಯಿಸಿದ್ದಾರೆ. ಸ್ಥಳದಲ್ಲಿ ಪುಟ್ಟಂಗಡ ಮದು,ಪೆಮ್ಮಂಡ ದಿಲನ್,ಕೊಟ್ಟಂಗಡ ಸದಾಶಿವ, ಹಾಗೂ ರೈತರು ಹಾಜರಿದ್ದರು.
ಆಮ್ ಆದ್ಮಿ ಪಕ್ಷಕ್ಕೆ ವಿದೇಶಿ ಮೂಲಗಳಿಂದ 7 ಕೋಟಿ ರೂ.ಗೂ ಹೆಚ್ಚು ದೇಣಿಗೆ ಸಿಕ್ಕಿರುವ ಬಗ್ಗೆ ಎಫ್ಸಿಆರ್ಎ ತನಿಖೆಯನ್ನು ಕೋರಿ…
ಕೆರೆಯ ಬಳಿ ಆಸ್ವಸ್ಥಗೊಂಡು ಬಿದ್ದಿದ್ದ ಆನೆ ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಹೆಡಿಯಾಲ ಉಪ-ವಿಭಾಗ…
ಒಂದು ವರ್ಷ ಅಧಿಕಾರ ಪೂರೈಸುವ ಹೊತ್ತಿಗೆ ನೂರೊಂದು ಸಮಸ್ಯೆಗಳನ್ನು ತಂದುಕೊಂಡಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ…
ಆಕಸ್ಮಿಕವಾಗಿ ಸಂಭವಿಸುವ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಪಡೆದುಕೊ ಳ್ಳುವ ಸಲುವಾಗಿ ಸರ್ಕಾರ ಜಾರಿಗೊಳಿಸಿರುವ ಯಶಸ್ವಿನಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳ ಬೇಕು…
ರಾಜ್ಯದಲ್ಲಿ ಭೀಕರ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ರಾಜ್ಯ ಸರಕಾರ ಅಲ್ಪ ಮಟ್ಟಿಗೆ ಪರಿಹಾರ ನೀಡಿ ನಿಟ್ಟುಸಿರು ಬಿಡುವಂತೆ ಮಾಡಿದೆ.ಆದರೆ ಅಫಜಲಪುರ…
ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಬೆನ್ನಲ್ಲೇ ಇದೀಗ ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಈ ಬಗ್ಗೆ…