ನಾಗರಹೊಳೆ: ನಾಗರಹೊಳೆಯ ಕೊಟ್ರಂಗಡ ಚಿಣ್ಣಪ್ಪ ಅನಾರೋಗ್ಯದಿಂದ ಇಂದು ಮಧ್ಯಾಹ್ನ 11.20 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಇವರಿಗೆ 84 ವಷ೯ ವಯಸ್ಸಾಗಿತ್ತು ಕೆಲಕಾಲ ಅನಾರೋಗ್ಯದ ಬಳಿಕ ಇಂದು ವಿಧಿವಶರಾಗಿದ್ದಾರೆ.
ಅರಣ್ಯಾಧಿಕಾರಿಯಾಗಿಯೂ ಕತ೯ವ್ಯ ನಿರ್ವಹಿಸಿರುವ ಇವರು ನಾಗರಹೊಳೆ ರಕ್ಷಣೆಗೆ ಜೀವ ಮುಡಿಪಾಗಿಟ್ಟಿದ್ದರು. ಅಲ್ಲದೇ ಕಾಡಿನ ಸಂರಕ್ಷಣೆಗಾಗಿ ಅನೇಕ ಪ್ರಶಸ್ತಿಗಳು ಕೂಡ ಇವರ ಮುಡಿ ಸೇರಿತ್ತು. ಕೆಲವು ವಷ೯ಗಳ ಹಿಂದೆ ದುಷ್ಕಮಿ೯ಗಳು ನಾಗರಹೊಳೆಗೆ ಬೆಂಕಿಯಿಟ್ಟಿದ್ದಾಗ ಚಿಣ್ಣಪ್ಪ ಕಾಡು ರಕ್ಷಣೆಗೆ ಜೀವಪಣವಾಗಿಟ್ಟು ಹೋರಾಡಿದ್ದರು.
ಇದಲ್ಲದೆ ನಾಗರಹೊಳೆ ಸೇರಿದಂತೆ ಭಾರತದ ಕಾಡುಗಳ ಬಗ್ಗೆ ಅಪೂವ೯ ಮಾಹಿತಿಯನ್ನು ಹೊಂದಿದ್ದ ಇವರು ಅರಣ್ಯ ವಿಚಾರದಲ್ಲಿ ನಡೆದಾಡುವ ಕೋಶದಂತೆ ಜೀವಿಸಿದ್ದರು ಆದರೆ ಇಂದು ನಮ್ಮನ್ನಗಲಿದ್ದಾರೆ.ನಾಳೆ ಪೊನ್ನಂಪೇಟೆ ತಾಲ್ಲೂಕಿನ ಕಾಕೂರು ಗ್ರಾಮದ ಸ್ವಗೃಹದಲ್ಲಿ ಕೊಡಗಿನ ಚಿಣ್ಣಪ್ಪ ಅವರ ಅಂತ್ಯಕ್ರಿಯೆ ನೆರವೇರಲಿದೆ.