ಬೆಕ್ಕೆಸೊಡ್ಲೂರು: ಅಪೂರ್ಣ ಕಾಮಗಾರಿ ನಡೆಸಿ ಹಣ ಇಲ್ಲ,ಕಾರ್ಮಿಕರಿಲ್ಲ, ಸಮಯವಿಲ್ಲ ಎಂದು ಸಬೂಬು ಹೇಳಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಶಾಸಕ ಎ.ಎಸ್.ಪೊನ್ನಣ್ಣನವರು ನಿರ್ಲಕ್ಷ್ಯ ಗುತ್ತಿಗೆದಾರರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇಂದು ಕಾನೂರು ರಸ್ತೆಯ ಬೆಕ್ಕೆಸೊಡ್ಲೂರಿನಲ್ಲಿ ರಸ್ತೆ ಉದ್ಘಾಟನೆಯನ್ನು ಮಾಡಿದ ಸಂಧರ್ಭದಲ್ಲಿ ಕಟ್ಟಡ ಕಾಮಗಾರಿಯೊಂದು ಗುತ್ತಿಗೆದಾರರ ನಿರ್ಲಕ್ಷ್ಯ ದಿಂದ ಅಪೂರ್ಣಗೊಂಡ ಮಾಹಿತಿಯನ್ನು ಅಧಿಕಾರಿಗಳು ಶಾಸಕರ ಗಮನಕ್ಕೆ ತಂದಾಗ ಕೂಡಲೇ ಆ ಗುತ್ತಿಗೆದಾರನಿಗೆ ಅಂತಿಮ ಎಚ್ಚರಿಕೆ ನೀಡಿದ್ದಾರೆ.
ಶಾಸಕರ ಈ ಕಾಳಜಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉದ್ದೇಶಪೂರ್ವಕವಾಗಿ ಕೆಲವು ಗುತ್ತಿಗೆದಾರರು ಅತಿ ಕಡಿಮೆ ಮೊತ್ತ ನಮೂದಿಸಿ ಬಿಲೋ ಟೆಂಡರ್ ಪಡೆದು ಕಾಮಗಾರಿಯನ್ನು ಅಪೂರ್ಣ ಗೊಳಿಸಿ ಮುಂದೆ ಬರುವ ಅನುದಾನಕ್ಕೆ ಕಾಯುವ ಪರಿಪಾಠ ಜಿಲ್ಲೆಯಲ್ಲಿ ಹಿಂದೆ ನಡೆಯುತ್ತಿದ್ದು ಇದರಿಂದ 5 ರಿಂದ 10 ವರ್ಷ ಕಳೆದರೂ ಕಾಮಗಾರಿ ಲೋಕಾರ್ಪಣೆ ಯಾಗುತ್ತಿರಲಿಲ್ಲ. ಈಗ ಇಂತಹ ಅಕ್ರಮಗಳಿಗೆ ಎ.ಎಸ್.ಪೊನ್ನಣ್ಣ ನವರು ಕಡಿವಾಣ ಹಾಕಿರುವುದರಿಂದ ಇನ್ನು ಮುಂದಕ್ಕೆ ಕ್ಷೇತ್ರದಲ್ಲಿ ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿದು ಸಾರ್ವಜನಿಕ ಉಪಯೋಗಕ್ಕೆ ಬರಲಿದೆ.