News Karnataka Kannada
Thursday, May 02 2024
ಮಡಿಕೇರಿ

ಮಡಿಕೇರಿ: ವಾಹನ ತಪಾಸಣೆಯನ್ನು ಕೈಗೊಂಡು ಮುಂಜಾಗ್ರತ ಕ್ರಮವನ್ನು ವಹಿಸಿದ ಪೊನ್ನಂಪೇಟೆ ಪೊಲೀಸರು

Ponn
Photo Credit : News Kannada

ಮಡಿಕೇರಿ: ಪೊನ್ನಂಪೇಟೆ ಪೊಲೀಸರು ಇಂದು ಕೂಡ ಕೆಪಿಎಸ್ ಶಾಲೆ ಮುಂಭಾಗ ವಾಹನ ತಪಾಸಣೆಯನ್ನು ಕೈಗೊಂಡು ಮುಂಜಾಗ್ರತ ಕ್ರಮವನ್ನು ವಹಿಸಿದ್ದಾರೆ.

ಬಹಳಷ್ಟು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಯಾವುದೇ ದಾಖಲಾತಿಗಳಿಲ್ಲದೆ ಹಾಗೂ ಅತಿ ವೇಗವಾಗಿ ವಾಹನ ಚಾಲನೆಯನ್ನು ಮಾಡುತ್ತಿರುವುದನ್ನು ಗಮನಿಸಿ ಪೊನ್ನಂಪೇಟೆ ಠಾಣಾಧಿಕಾರಿ ಸುಬ್ರಹ್ಮಣ್ಯ ಎಎಸ್ಐ ವೆಂಕಟೇಶ ಸಿಬ್ಬಂದಿಗಳು, ತಪಾಸಣ ಕಾರ್ಯ ನಡೆಸಿದ್ದಾರೆ.

ವಿಶೇಷವೆಂದರೆ ಸಂಜೆ ವೇಳೆ ಪಿಕಪ್, ಒಮಿನಿ ಕಾರು, ಜೀಪುಗಳಲ್ಲಿ ಹೊರ ಜಿಲ್ಲೆಯಿಂದ ಕಾರ್ಮಿಕರನ್ನು ಯತೇಚ್ಛವಾಗಿ ತುಂಬಿಕೊಂಡು ಅವಘಡಕ್ಕೆ ಕಾರಣವಾಗಬಹುದಾದ ವಾಹನಗಳನ್ನು ತಡೆದು ದಂಡ ವಿಧಿಸಿ, ಕಾನೂನು ಪಾಲನೆಯ ಉಪದೇಶವನ್ನು ನೀಡಿ ಕಳುಹಿಸಲಾಗಿದೆ.

ಕೆಲವರು ಪಿಕಪ್ ಜೀಪ್ನಲ್ಲಿ ಜನರನ್ನ ಹೇರಿ ಕೊಂಡು ಐಜಿ ಗಣಪತಿ ಅವರ ತೋಟದ ಕೆಲಸಕ್ಕೆ ಸರ್ ಎಂದು ಹೇಳಿ ಜಾರಿಕೊಳ್ಳಲು ಯತ್ನಿಸಿದ ಪ್ರಸಂಗವು ಕಂಡುಬಂತು. ಆದರೆ ಠಾಣಾಧಿಕಾರಿಗಳು ಇದ್ಯಾವುದಕ್ಕೂ ಸೊಪ್ಪು ಹಾಕದೆ ದಂಡ ಹಾಕಿ ಕಳುಹಿಸಿದ್ದಾರೆ. ರಾಣಾಧಿಕಾರಿಯವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು