News Karnataka Kannada
Monday, April 29 2024
ಮಡಿಕೇರಿ

ಮಡಿಕೇರಿ: ತಡರಾತ್ರಿ ನಡೆದ ಪೊಲೀಸ್‌ ಕಾರ್ಯಾಚರಣೆ, 3 ಚೀಲಗಳಲ್ಲಿ ಗೋಮಾಂಸ ಪತ್ತೆ

Beef found in 3 bags in police operation late at night
Photo Credit : News Kannada

ಮಡಿಕೇರಿ: KL -26-L 8042 ಕೇರಳ ನೋಂದಣಿ ಸಂಖ್ಯೆ ಯ ಬಿಳಿ ಬಣ್ಣದ ವೇಗನಾರ್ ಕಾರ್ ನಲ್ಲಿ ಇಬ್ಬರು ವ್ಯಕ್ತಿಗಳು ಗೋಮಾಂಸ ಸಾಗಾಟ ಮಾಡುತ್ತಿದ್ದ ಸಂದರ್ಭ ಆರೋಪಿಗಳನ್ನು ಸೆರೆ ಹಿಡಿಯಲು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿಕೊಂಡು ಬಂದ ನಾಪೋಕ್ಲು ಠಾಣಾ ಪೊಲೀಸರು ಅಂತಿಮವಾಗಿ ರಾತ್ರಿ 12:30 ರ ವೇಳೆಗೆ ಮಡಿಕೇರಿ ಸಮೀಪದ ಮೇಕೇರಿಯ ಸುಭಾಸ್ ನಗರದ ಬಳಿ ತಲುಪಿದಾಗ ಕಾರ್ ಚಾಲಕನ ಅತೀ ವೇಗದಿಂದ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿಯಾದ ಸಂದರ್ಭ ಆರೋಪಿಗಳು ಗಾಯಗೊಂಡರೂ ಸಹ ಕಾರಿನಿಂದಿಳಿದು ಕತ್ತಲಲ್ಲಿ ಓಡಿ ಪರಾರಿಯಾಗಿರುತ್ತಾರೆ.

ನಾಪೋಕ್ಲು ಠಾಣಾ ಪೋಲೀಸರು ಹಾಗೂ ಮಡಿಕೇರಿ ಗ್ರಾಮಾಂತರ ಪೋಲೀಸರು ವಾಹನ ಸಮೇತ 3 ಚೀಲಗಳಲ್ಲಿ ತುಂಬಿದ್ದ ಗೋಮಾಂಸವನ್ನು ವಶ ಪಡಿಸಿಕೊಂಡಿದ್ದು ಮರಕ್ಕೆ ಡಿಕ್ಕಿಯಾಗಿ ನಜ್ಜುಗುಜ್ಜಾಗಿರುವ ಕಾರನ್ನು ಕ್ರೇನ್ ಮೂಲಕ ಠಾಣೆಗೆ ಕೊಂಡೊಯ್ಯಲು ಅಗತ್ಯ ಕ್ರಮ ವಹಿಸಿರುತ್ತಾರೆ. ಕಾರ್ ಡಿಕ್ಕಿಯಾದ ರಭಸಕ್ಕೆ ಕಾರ್ ನ ಮುಂಭಾಗ ಪೂರ್ತಿ ಜಖಂಗೊಂಡಿದ್ದು ಆರೋಪಿಯೊಬ್ಬನ ಕೈ ಮುರಿದು ರಕ್ತ ಸುರಿಯುತ್ತಿದ್ದರೂ ಸಹ ಭಯದಿಂದ ಆರೋಪಿಗಳು ಕತ್ತಲಲ್ಲಿ ಓಡಿ ಪರಾರಿಯಾದರೆಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿರುತ್ತಾರೆ.

ಸರಕಾರ ಗೋಹತ್ಯೆ ನಿಷೇದಿಸಿದ್ದರೂ ಸಹ ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಗೋಹತ್ಯೆ ಗೋಮಾಂಸ ಮಾರಾಟ ಅಕ್ರಮ ಗೋಸಾಗಾಟ ನಡೆಯುತ್ತಲೇ ಇದ್ದು ಅಕ್ರಮಗಳ ವಿರುದ್ಧ ಹಿಂದುಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು