ಕೊಡಗು: ನಾವು ನಮ್ಮ ಗ್ರಾಮದ ಸ್ವಚ್ಚತ ಕಾಪಾಡುವ ಜೊತೆಗೆ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಕೊಡಗಿನ ಪರಿಸರದ ಬಗ್ಗೆ ಹಾಗೂ ಸ್ವಚ್ಚತೆ ಕಾಪಾಡಲು ಮನವಿ ಮಾಡಬೇಕೆಂದು ಕೊಡಗು ಜಿಲ್ಲಾ ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷರಾದ ಗಿರೀಶ್ ಮಲ್ಲಪ್ಪನವರು ತಿಳಿಸಿದರು.
ಕೆ ನಿಡುಗಣೆ ಗ್ರಾಮ ಪಂಚಾಯತಿಯ ಪ್ರಮುಖ ಪ್ರವಾಸಿತಾಣವಾದ ಅಬ್ಬಿಪಾಲ್ಸ್ ನಲ್ಲಿ ವೆದಿಕೆ ವತಿಯಿಂದ ಕುವೆಂಪು ಜನ್ಮ ದಿನದ ಅಂಗವಾಗಿ ನಡೆದ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಕೊಡಗು ಜಿಲ್ಲೆ ಪ್ರವಾಸಿ ತಾಣವಾಗಿದ್ದು ಹೆಚ್ಚಿನ ಮಂದಿ ಪ್ರವಾಸಿಗರು ಆಗಮಿಸವರು. ಹಾಗಾಗಿ ಪ್ರವಾಸಿ ತಾಣಗಳಿರುವ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಪ್ರವಾಸಿಗರಿಗೆ ಸ್ವಚ್ಚತೆ ಬಗ್ಗೆ ಅರಿವು ಮುಡಿಸಬೇಕು ಮತ್ತು ರಸ್ತೆ ಬದಿಯಲ್ಲಿ ಸ್ವಚ್ಚತಾ ಅಭಿಯಾನದ ಫಲಕಗಳನ್ನು ಹಾಕುವ ಮೂಲಕ ಜಾಗೃತಿ ಮುಡಿಸಬೇಕು ಎಂದರು.
ವೇದಿಕೆಯ ಕಾರ್ಯದರ್ಶಿಗಳಾದ ನವೀನ್ ಅಜ್ಜಳಿಯವರು ಮಾತನಾಡಿ ನಾವು ನಮ್ಮ ಗ್ರಾಮವನ್ನು ಸ್ವಚ್ಚವಾಗಿ ಇಡಲು ಪಣ ತೋಡಬೇಕು ಹಾಗೆ ಇದು ಇತರ ಪಂಚಾಯತಿಗಳಿಗೆ ಮಾದರಿಯಾಗಲಿದೆ. ಹಾಗೂ ರಸ್ತೆ ಇಕ್ಕಲಗಳಲ್ಲಿ ಸ್ವಚ್ಚತೆಯಿಂದ ಕೂಡಿದಾಗ ಹೊರ ಬಾಗದಿಂದ ಬಂದವರು ಕೂಡ ಎಲ್ಲೆಯಂದರಲ್ಲಿ ಕಸವನ್ನು ಹಾಕಲು ಹಿಂದೇಟು ಹಾಕುವರು. ಹೀಗಾಗಿ ನಾವೂ ಮೊದಲು ಸ್ವಚ್ಚತೆಯಿಂದ ಪ್ರವಾಸಿ ತಾಣಗಳನ್ನು ಇಡುವ ಮೂಲಕ ಇತರರಿಗೆ ಅರಿವನ್ನು ಮೂಡಿಸಬೇಕು ಎಂದು ತಿಳಿಸಿದರು.
ವೇದಿಕೆಯ ಕೋಶಾದಿಕಾರಿಗಳಾದ ಸಂದಿಪ್ ನವರು ಮಾತನಾಡಿ ವೇದಿಕೆ ವತಿಯಿಂದ ಇಂದು ಸ್ವಚ್ಚತಾ ಅಭಿಯಾನ ಹಮ್ಮಿಕೊಂಡಿದ್ದು ಮುಂದಿನ ದಿನಗಳಲ್ಲಿ ಇತರ ಪ್ರವಾಸಿ ತಾಣಗಳಲ್ಲಿ ಇಂತಹ ಅಭಿಯಾನ ನಡೆಸಿ ಅರಿವನ್ನು ಮೂಡಿಸಲಾಗವುದು, ಹಾಗೂ ಇನ್ನಿತರ ಸಮಾಜಮುಖಿ ಕೆಲಸಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಗಿರೀಶ್ ಮಲ್ಲಪ್ಪನವರು ಅಧ್ಯಕ್ಷತೆಯಲ್ಲಿ ತದನಂತರ ಮಡಿಕೇರಿ ನಗರದಿಂದ ಅಬ್ಬಿಪಾಲ್ಸ್ ಗೆ ತೆರಳುವ ರಸ್ತೆಯಿಂದ ಅಬ್ಬಿಪಾಲ್ಸ್ ನ ಪಾರ್ಕಿಂಗ್ ಸ್ಥಳವನ್ನು ಕಸ ಹೆಕ್ಕುವ ಮೂಲಕ ಸ್ವಚ್ಚತೆ ಮಾಡಲಾಯಿತು. ಸುಮಾರು 35 ಕ್ಕೂ ಅಧಿಕ ಬ್ಯಾಗ್ ಗಳೊಂದಿಗೆ 2 ವಾಹನ ಪೂರ್ತಿ ಕಸವನ್ನು ಹಕ್ಕಲಾಯಿತು.
ಈ ಸಂಧರ್ಭದಲ್ಲಿ ವೇದಿಕೆಯ ಉಪಾಧ್ಯಕ್ಷರಾದ ಕಿರಣ್, ಪೃಥ್ವಿ ಗೌಡಳಿ ಸೇರಿದಂತೆ ವೇದಿಕೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.