News Karnataka Kannada
Saturday, May 04 2024
ಮಡಿಕೇರಿ

ಕರ್ನಾಟಕ ರಕ್ಷಣಾ ವೇದಿಕೆಯಿಂದ ವೃದ್ಧರು ಮತ್ತು ವಿಶೇಷಚೇತನರಿಗೆ ಮಾಸಾಶನ ಒದಸಲು ನೆರವು

Karnataka Rakshana Vedike extends monthly assistance to the elderly and differently-abled
Photo Credit : News Kannada

ಮಡಿಕೇರಿ: ಸೋಮವಾರ ಪೇಟೆ ತಾಲೂಕು ಶನಿವಾರ ಸಂತೆ ಹೋಬಳಿಯಲ್ಲಿ ವೃದ್ಧರು ಮತ್ತು ವಿಶೇಷಚೇತನರಿಗೆ ಮಾಸಾಶನ ಒದಗಿಸಲು ಕರ್ನಾಟಕ ರಕ್ಷಣಾ ವೇದಿಕೆ ನೆರವಾಗಿದೆ. ಮಹಿಳೆಯರು ಮತ್ತು ವಿಶೇಷಚೇತನರು ಮಾಸಾಶನ ಅರ್ಜಿ ಸಲ್ಲಿಕೆ ಹೇಗೆಂದು ತಿಳಿಯುತ್ತಿಲ್ಲ ಎಂದು ಸಂಘಟನೆ ಸದಸ್ಯರಲ್ಲಿ ಮನವಿ ಮಾಡಿದ್ದು, ಸಂಘಟನೆ ನೆರವು ಒದಗಿಸಿದೆ.

ಸಂಘಟನೆ ಸದಸ್ಯರು ಆಧಾರ್‌ ಕಾರ್ಡ್‌ ಹೊಂದಿಲ್ಲದಿರುವವರಿಗೆ ಆಧಾರ್‌, ಬ್ಯಾಂಕ್‌ ಖಾತೆ ತೆರೆಯಿಸಿಕೊಟ್ಟು ಅರ್ಜಿ ನಮೂನೆ ಭರ್ತಿ ಮಾಡಿ ಶನಿವಾರ ಸಂತೆ ಕಂದಾಯ ಅಧಿಕಾರಿಗಳಿಗೆ ನೀಡಿದ್ದಾರೆ. ಈ ದಾಖಲೆಗಳು ಸಮರ್ಪಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಅದರಂತೆ 17 ಮಂದಿಗೆ ವೃದ್ಧಾಪ್ಯ ವೇತನದ ಆದೇಶ ಪ್ರತಿಯನು ಉಪತಹಸೀಲ್ದಾರ್‌ ನಾಗರಾಜ್‌ ಅವರು ವಿತರಿಸಿದರು.

ಅದೇ ರೀತಿ ಸರ್ಕಾರದ ಸೌಲಭ ಒದಗಿಸಿಕೊಟ್ಟ ಅಧಿಕಾರಿಗಳಾದ ನಾಗರಾಜ್‌ ಮತ್ತು ಕಂದಾಯ ಪರಿವೀಕ್ಷಕರಾದ ಮಂಜುನಾಥ್ ಸಿಬ್ಬಂದಿ, ಗ್ರಾಮ ಗ್ರಾಮಲೆಕ್ಕಿಗರು ಮತ್ತು ಗ್ರಾಮ ಸಹಾಯಕರು ಮತ್ತು ನೆಮ್ಮದಿ ಕೇಂದ್ರ ಸಿಬ್ಬಂದಿಗೆ ರಕ್ಷಣಾ ವೇದಿಕೆ ಕೃತಜ್ಞತೆ ಸಲ್ಲಿಸಿದೆ. ಈ ಸಂದರ್ಭ ಸೋಮವಾರಪೇಟೆ ತಾಲೂಕು ಅಧ್ಯಕ್ಷರಾದ ಕರವೇ ಫ್ರಾನ್ಸಿಸ್ ಡಿಸೋಜ ಮತ್ತು ಕರವೇ ಶನಿವಾರಸಂತೆ ಹೋಬಳಿಯ ಉಪಾಧ್ಯಕ್ಷರಾದ ರಫೀಕ್ ಮತ್ತು ಶನಿವಾರಸಂತೆ ನಗರ ಘಟಕದ ಅಧ್ಯಕ್ಷ ಇಜಾರ್ ಶನಿವಾರಸಂತೆ ಹೋಬಳಿ ಮಹಿಳಾ ಘಟಕದ ಅಧ್ಯಕ್ಷರಾದ ಕುಸುಮ ಮತ್ತು ಕಂದಾಯ ಇಲಾಖೆ ಎಲ್ಲ ಅಧಿಕಾರಿಗಳು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು