ಗೋಣಿಕೊಪ್ಪ: ವಿಶು ಆಚರಣೆ ಸಮಾನತೆಯ ಸಂಕೇತ: ಎಂ. ಎಸ್. ಸುಬ್ರಮಣಿ ಹೇಳಿಕೆ

ಗೋಣಿಕೊಪ್ಪ: ವಿಶು ಆಚರಣೆ ಸಮಾನತೆಯ ಸಂಕೇತವಾಗಿದೆ ಎಂದು ಕೊಡಗು ಹಿಂದೂ ಮಲಯಾಳಿ ಸಮಾಜದ ಉಪಾಧ್ಯಕ್ಷ ಎಂ. ಎಸ್. ಸುಬ್ರಮಣಿ ಹೇಳಿದರು.

ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ‘ನಮ್ಮ ದೇಶ ನಮ್ಮ ಸಂಸ್ಕೃತಿ’ ಕಾರ್ಯಕ್ರಮದಡೀ ಶನಿವಾರ ಮೈಸೂರಮ್ಮ ನಗರದ ಕೆ. ಎನ್. ಅಶೋಕ್ ನಿವಾಸದಲ್ಲಿ ಆಯೋಜಿಸಿದ್ದ ವಿಶು ಹಬ್ಬ ಆಚರಣೆಯಲ್ಲಿ ಹಬ್ಬದ ಬಗ್ಗೆ ಮಾಹಿತಿ ಹಂಚಿಕೊಂಡರು.

ವಿಶು ಎಂಬುವುದು ಸಂಸ್ಕೃತದಲ್ಲಿ ಸಮಾನತೆ ಅರ್ಥ ಹೊಂದಿದೆ. ಸೂರ್ಯ ಭಗವಾನ್ ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶ ಪಡೆಯುವ ಕಾಲವಾಗಿದ್ದು, ಗಣಿತ ಶಾಸ್ತ್ರದ ಪ್ರಕಾರ ಪ್ರಕೃತಿಯಲ್ಲಿ ಕೂಡ ಬದಲಾವಣೆ ಕಾಣಬಹುದಾಗಿದ್ದು, ವಿಶು ದಿನದಲ್ಲಿ 12 ಗಂಟೆ ಹಗಲು, 12 ಗಂಟೆ ರಾತ್ರಿಯನ್ನು ಕಾಣಬಹುದಾಗಿದೆ. ಹೊಂಗಿರಣದ ಬಣ್ಣ ಹೊಂದಿರುವ ಪೊನ್ನ ಹೂ ಪ್ರಕೃತಿಯ ಕೊಡುಗೆಯಾಗಿದ್ದು, ಮಲಯಾಳಿ ಸಮುದಾಯದ ವಿಶೇಷವಾಗಿ ಆಚರಣೆಯಾಗಿದೆ. ಸನಾತನ ಧರ್ಮದಲ್ಲಿ ವಿಶಿಷ್ಠ ಸಂಸ್ಕೃತಿ ಹೊಂದಿದ್ದು, ಕೃಷಿಗೆ ಪೂರಕವಾಗಿದೆ. ತಮಿಳುನಾಡು, ಪಂಜಾಬ್, ಅಸ್ಸಾಂ ಆಚರಣೆ ಇದ್ದು, ಹೊಸ ವರ್ಷವಾಗಿದೆ. ವಿಶು ಪರ್ವದಲ್ಲಿ ಒಳ್ಳೆಯದನ್ನು ಪ್ರಾರ್ಥಿಸುತ್ತೇವೆ. ಯುವ ಪೀಳಿಗೆ ಸಂಪ್ರದಾಯ ಉಳಿಸಿಕೊಳ್ಳಲು ಮುಂದಾಗಬೇಕಿದೆ. ಉಣ್ಣಿ ಅಪ್ಪಂ, ನೈ ಅಪ್ಪಂ, ಪಾಯಸ, ಇಂಜಿಪುಳಿ, ಅವಿಲ್ ವಿಶೇಷ ಬೋಜನ ಮಾಡುತ್ತೇವೆ ಎಂದರು.

ಹಿರಿಯರಾದ ಕೆ. ಎನ್. ಅಶೋಕ್ ಮಾತನಾಡಿ, ವಿಶು ಹಬ್ಬ ಕುಟುಂಬದಲ್ಲಿ ಸಂಭ್ರಮಕ್ಕೆ ಕಾರಣವಾಗಲಿದೆ. ಹಿರಿಯರು ರೂಪಿಸಿದ ಆಚರಣೆಯನ್ನು ನಾವು ಮುಂದಿನ ಪೀಳಿಗೆಗೆ ಆಚರಣೆ ಮೂಲಕ ಮಾರ್ಗದರ್ಶನ ನೀಡುತ್ತಿದ್ದೇವೆ. ಹೊಸ ವರ್ಷವಾಗಿ ಚೈತನ್ಯದಿಂದ ಪಾಲ್ಗೊಳ್ಳುತ್ತೇವೆ. ಹಿರಿಯರಿಗೆ ಗೌರವ ಕೊಡುವುದು ಹಬ್ಬದ ವಿಶೇಷತೆಯಲ್ಲೊಂದು ಎಂದರು.

ಹೀಗಿತ್ತು ಆಚರಣೆ: ಕಣಿ ಎಂಬುವುದು ಆಚರಣೆಯ ವಿಶೇಷತೆಯಾಗಿದೆ. ಮನೆಯಲ್ಲಿ ಶ್ರೀಕೃಷ್ಣನ ವಿಗ್ರಹ ಇಟ್ಟು ತುಳಸಿ ಮಾಲೆ, ಹೂ, ಹಣ್ಣು ಹಂಪಲು ಇಟ್ಟು ಪೂಜಿಸಲಾಗುತ್ತದೆ. ಗಣಪತಿಗೆ ಇಷ್ಟವಾದ ಹಲಸು, ಕೃಷ್ಣನಿಗೆ ಇಷ್ಟವಾದ ಕದಣಿ ಬಾಳೆ, ನವಿಲು ಗರಿ, ಬೆಳ್ಳರಿ, ಮರುಗನಿಗೆ ಇಷ್ಟವಾದ ಮಾವಿನ ಹಣ್ಣು, ತೆಂಗಿನಕಾಯಿ ಇಟ್ಟು, ಬಿಳಿ ಬಟ್ಟೆಯಲ್ಲಿ ಎಲೆ ಅಡಕೆ, ನಾಣ್ಯ, ಆಭರಣ ಇಡಲಾಗುತ್ತದೆ. ದೀಪ ಹಚ್ಚಿ ಹಿರಿಯರು ಪೂಜಿಸುತ್ತಾರೆ. ಹಬ್ಬದ ದಿನ ಮನೆಯವರು ಎದ್ದು ಬಂದು ಮೊದಲು ಕಣ್ಣುಗಳನ್ನು ಮುಚ್ಚಿಕೊಂಡು ಬಂದು ಕಣಿ ನೋಡುತ್ತಾರೆ. ಹಿರಿಯರ ಕಾಲಿಗೆ ನಮಸ್ಕರಿಸಿ ವಿಶು ಕೈನೀಟಂ ಎಂದು ಹಣ, ಉಡುಗೊರೆಯನ್ನು ನೀಡಲಾಗುತ್ತದೆ. ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಗಂಧದ ತಿಲಕ ಇಟ್ಟು ಪೂಜಿಸುತ್ತಾರೆ.

ಮಲಯಾಳಿ ಸಮುದಾಯದ ಬೇಬಿ, ಕೆ. ಎ. ಅಭಿಲಾಷ್, ಶಿಲ್ಪ, ವಿಹಾನ್, ನಿಖಿಲ್, ನಿತಿಶ್, ರತಿ ಪುರುಷೋತ್ತಮ್, ಕಾರ್ತಿಕ್ ಆಚರಣೆಯಲ್ಲಿ ಪಾಲ್ಗೊಂಡರು.

ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಸಂಚಾಲಕ ವಿ. ವಿ. ಅರುಣ್‌ಕುಮಾರ್, ಪ್ರ. ಕಾರ್ಯದರ್ಶಿ ಎನ್. ಎನ್. ದಿನೇಶ್, ಕಾರ್ಯದರ್ಶಿ ಮಂಡೇಡ ಅಶೋಕ್, ನಿದೇರ್ಶಕ ದರ್ಶನ್ ದೇವಯ್ಯ, ಸಿಂಗಿ ಸತೀಶ್ ಇದ್ದರು.

 

Gayathri SG

Recent Posts

ಅಧಿಕಾರಿಗಳಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಮತದಾನದ ಆರೋಪ: ಸ್ಥಳಕ್ಕೆ ಉಮೇಶ ಜಾಧವ್ ಭೇಟಿ

ಇಲ್ಲಿನ ಕಲಬುರಗಿ ಉತ್ತರ ಮತಕ್ಷೇತ್ರದ ನ್ಯೂ ರಾಘವೇಂದ್ರ ಕಾಲೋನಿಯ ಬೂತ್ ಸಂಖ್ಯೆ 181 ರಲ್ಲಿ ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ…

6 hours ago

ಅತನೂರ ಗ್ರಾಮದಲ್ಲಿ ಸರ್ವಧರ್ಮಗಳ ಆರಾಧ್ಯದೈವ ನಂದಿ ಬಸವನ ಜಾತ್ರೆಯ ಸಡಗರ

ಅಫಜಲಪುರ ತಾಲೂಕಿನ ಅತನೂರ ಗ್ರಾಮದಲ್ಲಿ ಗ್ರಾಮದೇವ ನಂದಿ ಬಸವೇಶ್ವರ ಜಾತ್ರೆಯು ಸಡಗರದಿಂದ ನಡೆಯಲಿದೆ ಎಂದು ದೇವಸ್ಥಾನ ಮಂಡಳಿಯ ಸದಸ್ಯರು ತಿಳಿಸಿದರು.

6 hours ago

ಪ್ರೀತಿಸಿ ಮದುವೆಯಾದ ಅನ್ಯಕೋಮಿನ ಜೋಡಿ: ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ

ಮುಸ್ಲಿಂ ಯುವತಿ ಬಾದಾಮಿ ಮೂಲದ ರುಬಿನಾ ಹಾಗೂ ಹಿಂದೂ ಯುವಕ ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿ ರಕ್ಷಣೆ ಕೋರಿ ಬಾಗಲಕೋಟೆ…

6 hours ago

ಮೆಲ್ಬೋರ್ನ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಹತ್ಯೆ

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ  ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.

6 hours ago

ಮಾದಪ್ಪನ ಸನ್ನಿಧಿಯಲ್ಲಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಸೋಮವಾರ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನಡೆಯಿತು. ಎಣ್ಣೆ ಮಜ್ಜನ ಸೇವೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಾದಪ್ಪನ ದರ್ಶನ ಪಡೆದು…

7 hours ago

ಅಕ್ಷಯ ತೃತೀಯದಂದು ಬಾಲ್ಯವಿವಾಹ ನಡೆಯದಂತೆ ಕ್ರಮ

ಮೇ 10 ರಂದುಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾದ ಕಾರಣ ಈ ಸಂದರ್ಭದಲ್ಲಿ ವೈಯಕ್ತಿಕ ವಿವಾಹಗಳು ಹಾಗೂ ಸಾಮೂಹಿಕ…

7 hours ago