ಕೊಡಗು: ಅರಣ್ಯ ಇಲಾಖೆಯ ವನ್ಯ ಜೀವಿ ವಿಭಾಗ ಹಾಗು ಗಡಿ ವಿಭಾಗ ಜಂಟಿ ಕಾರ್ಯಾಚರಣೆ ನಡೆಸಿ ನಿನ್ನೆ ರಾತ್ರಿ ಕೇರಳದ ವಾಹನವೊಂದ್ದು 15 ಚೀಲ ಕಸವನ್ನು ತಂದು ಮಾಕುಟ್ಟ ಅರಣ್ಯದೊಳಗೆ ತಂದು ಹಾಕುತ್ತಿದ್ದದ್ದನ್ನು ಪತ್ತೆ ಹಚ್ಚಿ. ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಸದ ಚೀಲವನ್ನು ಸಾಗಿಸುತ್ತಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಅರಣ್ಯ ಇಲಾಖೆಯ ವಿರಾಜಪೇಟೆ ವೃತ್ತದ ಡಿಸಿಎಫ್ ಹಾಗೂ ಎಸಿಎಫ್ ಅವರ ಮಾರ್ಗದರ್ಶನದಲ್ಲಿಮಾಕುಟ್ಟ ವಲಯ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.