Categories: ಮಡಿಕೇರಿ

ಮಡಿಕೇರಿ ವಿಧಾನಸಭಾ ಕ್ಷೇತ್ರ: ಬಿಜೆಪಿಗೆ ಗೆಲುವು ಸುಲಭದ ಮಾತಲ್ಲ

ಮಡಿಕೇರಿ: ಕೊಡಗಿನಲ್ಲಿ ಬಿಸಿಲಿನ ಕಾವು ಎರುತ್ತಿದ್ದಂತೆ ಚುನಾವಣೆಯ ಕಾವು ಕೂಡ ಎರತೊಡಗಿದೆ. ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಆಯಯಾ ಪಕ್ಷದ ಮತ್ತು ಪಕ್ಷೇತರರು ಉಮೆದಾರಿಕೆ ಸಲ್ಲಿಸಿದ್ದಾರೆ. ಮಡಿಕೇರಿ ಕ್ಷೇತ್ರದಿಂದ ಪ್ರಮುಖವಾಗಿ ತ್ರಿಕೋನ ಸ್ಪರ್ಧೆ ಏರ್ಪಡುವ ನಿರೀಕ್ಷೆ ಇದೆ. ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಪೈಪೋಟಿ ನಡೆಯಲಿದೆ. ಎಸ್. ಡಿ ಪಿ.ಐ. ತೆರೆಯಮರೆಯ ಕಸರತ್ತು ನಡೆಸಿದ್ದು ಇದರ ಲಾಭ ಬಿಜೆಪಿ ಪಾಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಬಾರಿ ಈ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ಸುಲಭ ಸಾಧ್ಯವಲ್ಲ . ಯುವ ಉತ್ಸಾಹಿ ವೈದ್ಯ ಮಂತರ್ ಗೌಡ ಮತದಾರರ ಮನ ಸೆಳೆಯುವಲ್ಲಿ ಬಾರಿ ತಂತ್ರಗಾರಿಕೆಯನ್ನು ನಡೆಸುತ್ತಿದ್ದಾರೆ. ಬಿಜೆಪಿ ಪರ ಹೆಚ್ಚು ಒಲವು ಮತದಾರರು ಹೊಂದಿದ್ದರು. ಈ ನಿಟ್ಟಿನಲ್ಲಿ ಹೊಸ ಮುಖಕ್ಕೆ ಅವಕಾಶ ನೀಡಿದ್ದರೆ ಒಳಿತಿತ್ತು ಎಂಬ ಭಾವನೆ ಬಿಜೆಪಿ ಹಾಗೂ ಸಂಘ ಪರಿವಾರದ ಹಲವು ನಾಯಕರಿಗೆ ಇದೆ. ಇದು ಕೇವಲ ಮಡಿಕೇರಿ ಕ್ಷೇತ್ರ ಮಾತ್ರವಲ್ಲ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲೂ ಇದೆ.

ಈ ಭಾರಿ ವ್ಯಕ್ತಿಗತವಾಗಿ ಎರಡು ಕ್ಷೇತ್ರದ ಅಭ್ಯರ್ಥಿಗಳ ಮೇಲೆ ಪಾರಂಪರಿಕ ಬಿಜೆಪಿ ಮತದಾರರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ ಹೊರತು ಬಿಜೆಪಿ ಮೇಲಲ್ಲ. ಈಗಾಗಲೇ ಹಲವರು ತಟಸ್ಥ ಧೋರಣೆಯನ್ನು ಅನುಸರಿಸಿದ್ದಾರೆ. ಇದರ ಲಾಭ ಕಾಂಗ್ರೆಸ್ಸಿಗಾಗುತ್ತಿದೆ. ಮಂತರ್ ಗೌಡ ಕೊಡಗಿನ ಅಳಿಯ ಹಾಗೆಯೇ ಸಾಕಮ್ಮನ ಕುಟುಂಬದವರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕೂಡ ಈ ಬಾರಿ ಒಂದಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಹಿರಿಯ ರಾಜಕಾರಣಿ ಜೀವಿಜಿಯವರು ಕೂಡ ಮಂತ್ರ ಗೌಡ ಅವರ ಪರ ಬ್ಯಾಟಿಂಗ್ ಮಾಡಲು ಸಜ್ಜಾಗಿದ್ದಾರೆ. ಅವರದೇ ವ್ಯಕ್ತಿಗತ 20000 ಕ್ಕೂ ಹೆಚ್ಚು ಮತ ಯಾರಿಗೂ ಒಲಿಯುತ್ತದೋ ಅವರು ಈ ಬಾರಿ ಗೆಲ್ಲುವುದಂತು ಖಂಡಿತ. ಜೆಡಿಎಸ್ ಅಭ್ಯರ್ಥಿ ಮುತ್ತಪ್ಪ ಕೂಡ ಸೋಮವಾರಪೇಟೆ ಭಾಗದಲ್ಲಿ ಪ್ರಾಬಲ್ಯ ಹೊಂದಿದ್ದಾರೆ . ಇವರು ಪಡೆಯುವ ಮತಗಳು ಕಾಂಗ್ರೆಸಿಗೆ ತೊಡಕುಂಟಾದರೂ ಈ ಬಾರಿ ಜಾತಿ ರಾಜಕಾರಣದಲ್ಲಿ ಅಪ್ಪಚು ರಂಜನ್ ಅವರಿಗೂ ಕೂಡ ಇವರು ಪಡೆಯುವ ಮತಗಳು ನಷ್ಟವಾಗಲಿದೆ.

ಇನ್ನು ಚಂದ್ರಮೌಳಿಯವರು ತಮ್ಮ ಜನಾಂಗ ಹೆಚ್ಚು ಇರುವ ಕೊಡ್ಲಿಪೇಟೆ ಶನಿವಾರ ಸಂತೆ ಭಾಗದಲ್ಲಿ ಹೆಚ್ಚು ಮತವನ್ನು ಕಾಂಗ್ರೆಸ್ ಪರ ಹಾಕಿದರೆ ಮಂತ್ರ ಗೌಡ ಅವರ ಗೆಲುವಿಗೆ ಸಹಕಾರಿಯಾಗಬಹುದು. ಐದು ಬಾರಿ ಕ್ಷೇತ್ರದಲ್ಲಿ ಶಾಸಕರಾಗಿದ್ದ ಅಪ್ಪಚು ರಂಜನ್ ಅವರಿಗೆ ಮತದಾರರ ಒಳ್ಳಮರ್ಮ ತಿಳಿದಿದ್ದು ಕೊನೆ ಮೂರು ದಿನಗಳ ಕಸರತ್ತು ಜಯ ತಂದುಕೊಡುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಎಂದಿನಂತಲ್ಲ ಈ ಬಾರಿ ಪ್ರಬಲ ಪೈಪೋಟಿ ಕಾಂಗ್ರೆಸ್ ಕಡೆಯಿಂದ ಬರಲಿದ್ದು ಸೋತರೂ ಗೆದ್ದರೂ ಕಡಿಮೆ ಅಂತರ. ಈ ಕ್ಷೇತ್ರದಲ್ಲಿ ಬದಲಾವಣೆಯತ್ತ ಮತದಾರರು ಚಿತ್ತ ಹರಿಸುತ್ತಿದ್ದಾರೆ.

ಬಿಜೆಪಿಯಲ್ಲಿ ಅಭ್ಯರ್ಥಿಯ ಬದಲಾವಣೆಯಾಗಿ, ಅಪ್ಪಚು ರಂಜನ್ ಅವರ ಮುಂದಾಳತ್ವದಲ್ಲಿ ಚುನಾವಣೆ ನಡೆಸಿದ್ದರೆ ಬಿಜೆಪಿ ಸುಲಭವಾಗಿ ಗೆದ್ದು ಬೀಗುತ್ತಿತ್ತು. ಆದರೆ ಈಗ ಹಾಗಲ್ಲ ಜನ ಬಯಸಿದ್ದು ಹೊಸ ಮುಖ ಬಿಜೆಪಿಯಲ್ಲಿ ಅದು ಸಾಧ್ಯವಾಗದಿದ್ದಾಗ ಹಲವರು ಹೊಸ ಮುಖದತ್ತ ಚಿತ್ತಹರಿಸುತ್ತಾರೆ. ಹಾಗಾದಾಗ ಅಪ್ಪಚು ರಂಜನ್ ಗೆಲುವು ಸುಲಭವಲ್ಲ.. ಇನ್ನು ಈ ಕ್ಷೇತ್ರದಲ್ಲಿ ಹಲವರು ಪಕ್ಷೇತರರಾಗಿ ಬಂಡಾಯವಾಗಿ ಸ್ಪರ್ಧಿಸಿದ್ದಾರೆ. ಇದು ಕೂಡ ಬಿಜೆಪಿಗೆ ತೊಂದರೆ ತರಬಹುದು.

ಒಟ್ಟಿನಲ್ಲಿ ಈ ಬಾರಿ ಮಡಿಕೇರಿ ವಿಧಾನಸಭಾ ಕ್ಷೇತ್ರ ಜಿದ್ದಾಜಿದ್ದಿನ ಹೋರಾಟ ನಡೆಯುವುದಂತೂ ಖಂಡಿತ. ಬಿಜೆಪಿ ಒಳಗಿನ ಆಂತರಿಕ ಬೇಗುದಿ ಹೊಸಮುಖದ ಅನ್ವೇಷಣೆಯಲ್ಲಿದ್ದ ಮತದಾರರಿಗೆ ನಿರಾಸೆ, ಹಾಗೆ ಹೊಸ ಮುಖ ವಿರೋಧ ಪಾಳ್ಯದಲ್ಲಿ ಉತ್ಸಾಹದಿಂದ ಚುನಾವಣೆಯನ್ನು ನಡೆಸುತ್ತಿರುವ ದೃಶ್ಯಗಳು ಮತದಾರರಲ್ಲಿ ಪರಿಣಾಮಗಳು ಬೀರುವ ಎಲ್ಲಾ ಸಾಧ್ಯತೆಗಳು ಇವೆ.

Sushma K

Recent Posts

ನೇಣು ಬಿಗಿದುಕೊಂಡು ಅತಿಥಿ ಉಪನ್ಯಾಸಕಿ ಆತ್ಮಹತ್ಯೆ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಗಾಯತ್ರಿ ಬಡಾವಣೆಯ ಮನೆಯಲ್ಲಿ ಅತಿಥಿ ಉಪನ್ಯಾಸಕಿಯೂಬ್ಬರು ನೇಣುಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

5 mins ago

ಎಚ್​.ಡಿ. ರೇವಣ್ಣಗೆ ಇನ್ನೂ ಮೂರು ದಿನ ಜೈಲೇ ಗತಿ!

 ಲೈಂಗಿಕ ಹಗರಣ ಆರೋಪದಲ್ಲಿ ಸಂತ್ರಸ್ತ ಮಹಿಳೆಯ ಕಿಡ್ನ್ಯಾಪ್​ ಕೇಸ್​ನಲ್ಲಿ ಬಂಧಿತರಾಗಿರುವ ಮಾಜಿ ಶಾಸಕ ಎಚ್.ಡಿ. ರೇವಣ್ಣ ಅವರ ಜಾಮೀನು ವಿಚಾರಣೆ…

5 mins ago

ಪ್ರಜ್ವಲ್ ಪೆನ್‍ಡ್ರೈವ್ ಕೇಸ್; ಸಂತ್ರಸ್ತೆಗೆ ಮೂವರಿಂದ ಬೆದರಿಕೆ

ಭಾರೀ ಕೋಲಾಹಲ ಎಬ್ಬಿಸಿರುವ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರೆಂದು ಹೇಳಿಕೊಂಡು ಬಂದಿರುವ…

24 mins ago

ನೂರು ರೋಗಗಳಿಗೂ ಒಂದೇ ಔಷಧ ಪಾನೀಯ: ಎಳನೀರು

ಎಳನೀರು ನೂರು ರೋಗಗಳಿಗೆ ಒಂದೇ ಔಷಧಿ ಎಂಬುದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಎಳನೀರಿನಲ್ಲಿ ಅಧಿಕ  ವಿಟಮಿನ್ ಹಾಗೂ ಖನಿಜವನ್ನು ಒಳಗೊಂಡಿದೆ.…

29 mins ago

ಪಟಾಕಿ ಘಟಕ ಸ್ಫೋಟಗೊಂಡು 8 ಕಾರ್ಮಿಕರು ಸಾವು !

ಇಂದು ತಮಿಳುನಾಡಿನ ಶಿವಕಾಶಿ ಸಮೀಪದ ಸೆಂಗಮಲಪಟ್ಟಿಯಲ್ಲಿರುವ ಪಟಾಕಿ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, ಎಂಟು ಕಾರ್ಮಿಕರು ಸಾವನ್ನಪ್ಪಿದ್ದಾರೆ.

34 mins ago

ಎಸ್‌ಎಸ್‌ಎಲ್‌ಸಿ ಫೇಲ್; ಮಂಡ್ಯದ ಬಾಲಕ ನೇಣಿಗೆ ಶರಣು, ವಿಷ ಸೇವಿಸಿದ ವಿದ್ಯಾರ್ಥಿನಿ

ರಾಜ್ಯಾದ್ಯಂತ ಇಂದು ಬೆಳಗ್ಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದೆ. ಆದರೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಂಡ್ಯ ವಿದ್ಯಾರ್ಥಿ ಲಿಖಿತ್ ಫೇಲ್ ಆಗಿದ್ದಕ್ಕೆ ಮನನೊಂದು…

40 mins ago