ಬೆಳ್ಳಾರೆ: ಉದ್ಯಮಿ ನವೀನ್ ನನ್ನು ಹೊತ್ತೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ನೀರಜಾಕ್ಷಿಯವರಿಂದ ಹೈಕೋರ್ಟ್ಗೆ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ನವೀನರನ್ನು ತಾಯಿಯ ವಶಕ್ಕೆ ಒಪ್ಪಿಸಿದೆ.
ನವೀನ್ ನ್ನು ಆಸ್ಪತ್ರೆಗೆ ದಾಖಲುಗೊಳಿಸಿರುವುದಾಗಿ ಪೋಲೀಸರಿಂದ ಹೈಕೋರ್ಟಿಗೆ ವರದಿ ಸಲ್ಲಿಕೆಯಾಗಿತ್ತು. ಇದರ ಬೆನ್ನಲ್ಲೇ ನವೀನರನ್ನು ದಾಖಲಿಸಲಾದ ಆಸ್ಪತ್ರೆಗೆ ನ್ಯಾಯಾಲಯವು ವಕೀಲರನ್ನು ಕಳುಹಿಸಿದೆ.
ನವೀನ್ ರನ್ನು ತಾಯಿಯ ವಶಕ್ಕೆ ನ್ಯಾಯಾಲಯವು ಒಪ್ಪಿಸಲು ಆದೇಶಿಸಿದ್ದರೂ ಡಿ.27ರ ಮಂಗಳವಾರದವರೆಗೆ ಬೆಂಗಳೂರಿನಲ್ಲೆ ಇರುವಂತೆ ಆದೇಶ ನೀಡಿದೆ.
ಕಳೆದ ಮಂಗಳವಾರ ಮಧ್ಯಾಹ್ನ ನವೀನ್ ತನ್ನ ಬೆಳ್ಳಾರೆಯ ಮನೆಯಲ್ಲಿದ್ದಾಗ ಏಕಾಏಕಿ ನುಗ್ಗಿದ ತಂಡವೊಂದು ಅಂಬ್ಯುಲೆನ್ಸ್ ಮೂಲಕ ಕಿಡ್ನಾಪ್ ಮಾದರಿಯಲ್ಲಿ ಹೊತ್ತೊಯ್ದಿತ್ತು. ಅದಾದ ಬಳಿಕ ಸುಂಟಿಕೊಪ್ಪದಲ್ಲಿ ಅಂಬ್ಯುಲೆನ್ಸ್ ತಡೆದು ವಿಚಾರಿಸಿದಾಗ ನವೀನ್ ತನ್ನ ಅತ್ತೆ ದಿವ್ಯಪ್ರಭಾ ಹಾಗೂ ಪತ್ನಿ ಕಿಡ್ನಾಪ್ ಮಾಡಿದ್ದಾಗಿ ಆರೋಪಿಸಿದ್ದರು.
TV 1 NEWS UPDATE