ಸೋಮವಾರಪೇಟೆ : ದೈವದಕೋಲ ನಡೆಯುವ ಸಂದರ್ಭ ನಡೆದ ಕಲಹ ವಿಕೋಪಕ್ಕೆ ತಿರುಗಿ ನಾಲ್ವರು ಗಾಯಗೊಂಡಿರುವ ಘಟನೆ ಸೋಮವಾರಪೇಟೆ ತಾಲೂಕಿನ ನಗರಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.
ಒಂದೇ ಕುಟುಂಬದ ಸದಸ್ಯರಾದ ಜಿ.ಡಿ. ವೀರೇಶ, ಮಹೇಶ, ನಂದೀಶ ಹಾಗೂ ಚಂದ್ರಶೇಖರ್ ಗಾಯಗೊಂಡವರು. ದೈವದಕೋಲ ನಡೆಯುವ ಸಂದರ್ಭ ನಡೆದ ಕಲಹ ವಿಕೋಪಕ್ಕೆ ತಿರುಗಿ, ವ್ಯಕ್ತಿಯೋರ್ವ ಗುಂಡು ಹಾರಿಸಿದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ.
ನಗರಳ್ಳಿ ಗ್ರಾಮದಲ್ಲಿ ಐವರು ಕುಟುಂಬಸ್ಥರು ಸೇರಿ 12 ವರ್ಷಗಳ ಅನಂತರ ಕೋಲ ನಡೆಸಿದ್ದಾರೆ. ಎರಡು ದಿನ ಪೂಜೆ ನಡೆದಿದ್ದು, ಸೋಮವಾರ ಸಂಜೆ ಕ್ಷುಲ್ಲಕ ಕಾರಣಕ್ಕೆ ಕಲಹ ಉಂಟಾಗಿದೆ ಎಂದು ಹೇಳಲಾಗಿದೆ. ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.