ಸೋಮವಾರಪೇಟೆ : ಕೊಡಗು ಜಿಲ್ಲೆ ಕ್ರೀಡೆಗೆ ಹೆಸರುವಾಸಿಯಾಗಿದ್ದು, ಹಾಕಿ ಕ್ರೀಡೆಗೆ ಸಾಕಷ್ಟು ಪ್ರತಿಭೆಗಳನ್ನು ನೀಡಿದೆ ಎಂದು ಪದ್ಮ ಪ್ರಶಸ್ತಿ, ಅರ್ಜುನ್ ಅವಾರ್ಡ್ ಪುರಸ್ಕೃತರು ಹಾಗೂ ಅಂತರರಾಷ್ಟ್ರೀಯ ಹಾಕಿ ಆಟಗಾರ ಎಂ.ಪಿ. ಗಣೇಶ್ ಹೇಳಿದರು.
ಇಲ್ಲಿನ ಪಯೋನಿಯರ್ಸ್ ಟೆನ್ನಿಸ್ ಕ್ಲಬ್ಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಭಾನುವಾರ ಕ್ಲಬ್ ಡೇ ಮತ್ತು ಆಹ್ವಾನಿತ ಸ್ನೂಕರ್ ಹಾಗೂ ಷಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಇಂದಿಗೂ ರಾಷ್ಟ್ರೀಯ ಹಾಕಿ ಕ್ಯಾಂಪ್ನಲ್ಲಿ ಕೊಡಗಿನ 9 ರಿಂದ 10 ಕ್ರೀಡಾಪಟುಗಳು ತರಬ್ಭೆತಿಯಲ್ಲಿ ಪಾಲ್ಗೊಂಡಿದ್ದಾರೆ. ಈಲ್ಲೆಯಿಂದ ಇನ್ನಷ್ಟು ಕ್ರೀಡಾ ಪ್ರತಿಭೆಗಳು ಹೊರ ಬರಬೇಕಿದೆ. ಕ್ರೀಡೆ ಮಾನಸಿಕ ಹಾಗೂ ಆರೋಗ್ಯಕ್ಕೆ ಸಹಕಾರಿಯಾಗಿದೆ. ಮಕ್ಕಳನ್ನು ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ಕೆಲಸವನ್ನು ಪೋಷಕರು ಮಾಡಬೇಕೆಂದರು.
ಷಟಲ್ ಬ್ಯಾಡ್ಮಿಂಟನ್ನ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಮೂಡಿಗೆರೆ ಪ್ಲಾಂಟರ್ಸ್ ಕ್ಲಬ್ ನ ಗೌತಮ್ ಮತ್ತು ಪ್ರಮೋದ್ ಪಡೆದರು. ದ್ವಿತೀಯ ಸ್ಥಾನವನ್ನು ಕುಟ್ಟದ ಬ್ರಹ್ಮಗಿರಿ ಕ್ಲಬ್ ದನ್ಯ ಮತ್ತು ಚರ್ಮಣ ಗಳಿಸಿದರು. ಮಹಿಳಾ ವಿಭಾಗದಲ್ಲಿ ಮೂಡಿಗೆರೆ ಪ್ಲಾಂಟರ್ಸ್ ಕ್ಲಬ್ ನ ರಶ್ಮಿ ಮತ್ತು ಸುಶ್ಮಿತ ಪ್ರಥಮ ಸ್ಥಾನ ಗಳಿಸಿದರು. ಮೌನ ಮತ್ತು ಶೃತಿ ಕೀರ್ತಿ ದ್ವಿತೀಯ ಸ್ಥಾನ ಗಳಿಸಿದರು. ಮಿಕ್ಸೆಡ್ ಡಬಲ್ಸ್ನಲ್ಲಿ ಗೋಣೀಕೊಪ್ಪ ಪ್ಲಾಂಟರ್ಸ್ ಕ್ಲಬ್ ನ ಸಂತೋಷ್ ಮತ್ತು ರಚನ ಪ್ರಥಮ ಸ್ಥಾನ ಗಳಿಸಿದರು. ದ್ವಿತೀಯ ಸ್ಥಾನವನ್ನು ಮೂಡಿಗೆರೆ ಪ್ಲಾಂಟರ್ಸ್ ಕ್ಲಬ್ ನ ಮೌನ ಮತ್ತು ತಂಡ ಪಡೆಯಿತು.
ಕಾರ್ಯಕ್ರಮಕ್ಕೆ ಶಾಸಕ ಅಪ್ಪಚ್ಚು ರಂಜನ್ ಚಾಲನೆ ನೀಡಿದರು. ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷ ಡಿ.ವಿ. ಶಾಂತಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಎಸ್ಎಲ್ಎನ್ ಕಾಫಿ ಸಂಸ್ಥೆಯ ಸಾತಪ್ಪನ್, ಹಿರಿಯ ಹಾಕಿಪಟು ಹಾಲಪ್ಪ, ಕರ್ನಾಟಕ ಬ್ಯಾಡ್ಮಿಚಿಟನ್ ಅಸೋಸಿಯೇಷನ್ ಅಧ್ಯಕ್ಷ ವಿಶ್ವಾಸ್, ಚಪ್ಪುಡಿರ ಕಾರ್ಯಪ್ಪ, ಕ್ಲಬ್ ಸ್ಪೋರ್ಟ್ ಕಾರ್ಯದರ್ಶಿ ಪ್ರವೀಣ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸೋಮವಾರಪೇಟೆ ಪಯೋನಿಯರ್ಸ್ ಟೆನ್ನಿಸ್ ಕ್ಲಬ್ಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಭಾನುವಾರ ಕ್ಲಬ್ ಡೇ ಮತ್ತು ಆಹ್ವಾನಿತ ಸ್ನೂಕರ್ ಹಾಗೂ ಷಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ವಿಜೇತರಿಗೆ ಎಂ.ಪಿ. ಗಣೇಶ್ ಬಹುಮಾನ ವಿತರಿಸಿದರು. ಕ್ಲಬ್ ಅಧ್ಯಕ್ಷ ಡಿ.ವಿ. ಶಾಂತಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಎಸ್ಎಲ್ಎನ್ ಕಾಫಿ ಸಂಸ್ಥೆಯ ಸಾತಪ್ಪನ್, ಹಿರಿಯ ಹಾಕಿಪಟು ಹಾಲಪ್ಪ ಇದ್ದರು.