ಕೊಡಗು : ಎರಡು ಕಾರುಗಳ ಮಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಭಾನುವಾರ ತಿತಿಮತಿ ಬಳಿ ನಡೆದಿದೆ. ಮೃತರನ್ನು ವೀರಾಜಪೇಟೆ ತೆಲುಗರಬೀದಿ ನಿವಾಸಿ ಚಂದ್ರಕಲಾ(45)ಎಂದು ಗುರುತಿಸಲಾಗಿದೆ.
ಅವರ ಪುತ್ರರಾದ ಪವನ್ ಹಾಗೂ ಮಧುಸೂದನ್ ಎಂಬವರು ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಚಂದ್ರಕಲಾ ಅವರು ಭಾನುವಾರ ಬೆಳಗ್ಗೆ ತಮದಮ ಇಬ್ಬರು ಪುತ್ರರೊಂದಿಗೆ ಮೈಸೂರಿಗೆ ತೆರಳುತ್ತಿದ್ದ ಸಂದರ್ಭ ತಿತಿಮತಿ-ದೇವರಪುರ ಮುಖ್ಯ ರಸ್ತೆಯಲ್ಲಿ ಎದುರಿನಿಂದ ಬರುತ್ತಿದ್ದ ಕಾರು ಹಾಗೂ ಇವರು ಪ್ರಯಾಣಿಸುತರಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿರುವುದಾಗಿ ಹೇಳಲಾಗಿದೆ.
ಈ ಸಂದರ್ಭ ಚಂದ್ರಕಲಾ ಸ್ಥಳದಲ್ಲೇ ಸಾವಿಗೀಡಾದರೆ, ಪುತ್ರರಿಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.