ಮಡಿಕೇರಿ ; ಪ್ರತಿಯೊಬ್ಬರಿಗೂ ಸಾಧನೆ ಅನ್ನುವುದು ಕಠಿಣ ಪರಿಶ್ರಮದಿಂದ ಮಾತ್ರ ಲಭ್ಯವಾಗುವ ಒಂದು ಯಶಸ್ಸು. ವಿವಿದ ರಂಗಗಳಲ್ಲಿ ಸಾಧನೆ ಮಾಡಿರುವ ಸಾಧಕರು ಇದಕ್ಕಾಗಿ ಹಲವು ವರ್ಷ ಕಠಿಣ ಶ್ರಮಪಟ್ಟಿರುತ್ತಾರೆ. ಕೊಡಗಿನ ಯುವಕನೊಬ್ಬ ಹಲವು ವರ್ಷಗಳ ಶ್ರಮದಿಂದ ಸಾಧನೆ ಮೇಲೆ ಸಾಧನೆಯನ್ನು ಮಾಡಿ ಇಂಡಿಯಾ ಬುಕ್ ಅಫ್ ರೆಕಾರ್ಡ್ಸ ನಲ್ಲಿ ಸ್ಥಾನ ಪಡೆದಿದ್ದಾರೆ.
ವಿರಾಜಪೇಟೆ ನಗರದ ವಿಜಯ ನಗರದ ನಿವಾಸಿ ಕೆ.ಕುಮಾರ್ ಮತ್ತು ವರಲಕ್ಷ್ಮಿ ದಂಪತಿಗಳಪುತ್ರ ಕೆ.ರಾಹುಲ್ ಪ್ರಾಯ 20 ವರ್ಷ. ಅವರು ಒಂದು ನಿಮಿಷದಲ್ಲಿ ಎಕಕಾಲಕ್ಕೆ ಅತಿ ಹೆಚ್ಚು ಪಂಚ್ ಮತ್ತು ಕಿಕ್ಸ್ ಒಟ್ಟು ಸಂಖ್ಯೆ 262 ಭಾರಿ ಪಂಚ್ ಮತ್ತು ಕಿಕ್ಸ್ ಮಾಡಿ ವಿಶೇಷ ಸಾದನೆ ಮಾಡಿರುತ್ತಾರೆ. ಈ ವಿಶೇಷ ಸಾಧನೆಯನ್ನು ಗುರುತಿಸಿದ ರೆಕಾಡ್ಸ್ ಇಲಾಖೆಯು ಕೆ.ರಾಹುಲ್ ಅವರ ಸಾದನೆಯನ್ನು ಗುರುತಿಸಿ ಇಂಡಿಯಾ ಬುಕ್ ಅಫ್ ರೆಕಾರ್ಡ್ಸನ
ಪುಟದಲ್ಲಿ ಹೆಸರನ್ನು ನೊಂದಾಯಿಸಿದ್ದಾರೆ. . ರಾಹುಲ್ ಅವರಿಗೆ ಪ್ರಮಾಣ ಪತ್ರ, ಪದಕಗುರುತಿನ ಚೀಟಿ ಹಾಗೂ ಸಾಧಕರಿಗಾಗಿ ನೀಡುವ ವಿಶೇಷ ಲೇಖನಿಯನ್ನು ಪಡೆದುಕೊಂಡಿದ್ದಾರೆ.ನಗರದ ಯುಚೇರಿಯೋ ಕರಾಟೆ ಶಾಲೆ ವಿಧ್ಯಾರ್ಥಿಯಾಗಿದ್ದು ಮುಖ್ಯ ತರಬೇತು ಶಿಕ್ಷಕರಾದ ಸೇನ್ಸಾಯಿ ಹೆಚ್.ಆರ್. ಶಿವಪ್ಪ ಅವರ ಗರಡಿಯಲ್ಲಿ ಪಳಗಿ ರಾಜ್ಯ ಮತ್ತು ಅಂತರ ರಾಜ್ಯದ ಕರಾಟೆ ಕ್ರೀಡೆಗಳಲ್ಲಿ ಭಾಗವಹಿಸಿ ಚಿನ್ನ, ಮತ್ತು ಬೆಳ್ಳಿ ಪದಕಗಳನ್ನು
ತನ್ನದಾಗಿಸಿಕೊಂಡಿದ್ದಾನೆ. ಇತ್ತೇಚೆಗೆ ನಡೆದ ಪ್ರಥಮ ಅಂತರ್ ರಾಷ್ಟ್ರೀಯ ಅನ್ ಲೈನ್ ಇ- ಕಾತ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನದ ಚಿನ್ನದ ಪದಕವನ್ನು ಪಡೆದುಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಸಾಧನೆಯ ಬಗ್ಗೆ ಪತ್ರಿಕೆಯೋಂದಿಗೆ ಮಾತನಾಡಿದ ಕೆ.ರಾಹುಲ್ ಎಷ್ಯಾ ಬುಕ್ ಆಫ್ ರೇಕಾರ್ಡ್ಸ ನಲ್ಲಿ ಹೆಸರು ನಾಮೂದಾಗಬೇಕು ಎಂದು ಮಾಹಾದಾಶೆಯನ್ನು ಹೊಂದಿದ್ದೇನೆ.
ಸಾಧನೆಗಾಗಿ ಕಠೀಣ ಪರಿಶ್ರಮ ಮಾಡುತ್ತಿದ್ದೇನೆ.ಕರಾಟೆ ಎಂಬುದು ಕೇವಲ ಆತ್ಮ ರಕ್ಷಣೆಯ ಕ್ರೀಡೆಯಲ್ಲ. ಕ್ರೀಡೆಯಲ್ಲೇ ವಿವಿಧ ಸಾದನೆಯನ್ನು ಮಾಡುವ ವಿಫಲ ಅವಕಾಶಗಳಿವೆ ಕ್ರೀಡೆಯಲ್ಲಿ ಕಠೀಣವಾದ ಅಭ್ಯಾಸ, ಮನೋಧೈರ್ಯವನ್ನು ಸಮಾನಾಂತರವಾಗಿ ಅಳವಡಿಸಿಕೊಂಡು ಮುನ್ನಡೆ ಸಾಧಿಸಿದರೆ ಗುರಿ
ಮುಟ್ಟುವುದು ಶಥ ಸಿದ್ದ ಎಂದು ಹೇಳಿದರು. ಕೆ.ರಾಹುಲ್ ಅವರ ವಿಶೇಷ ಸಾಧನೆಗೆ ಅಭಿನಂದಿಸಿ ಮುಂದಿನ ಭವಿಷ್ಯವು ಉಜ್ವಲವಾಗಲಿ
ಎಂದು ಶುಭ ಹಾರೈಸೋಣ